ಬಸ್‌ನಿಂದ ಜಾರಿ ಬಿದ್ದ ಕಂಡಕ್ಟರ್ ದಾರುಣ ಅಂತ್ಯ – ದುಡಿಮೆ ಕೊಟ್ಟ ಬಸ್‌ನಿಂದಲೇ ಹಾರಿಹೋಯ್ತು ಪ್ರಾಣ..!

ಬಸ್‌ನಿಂದ ಜಾರಿ ಬಿದ್ದ ಕಂಡಕ್ಟರ್ ದಾರುಣ ಅಂತ್ಯ – ದುಡಿಮೆ ಕೊಟ್ಟ ಬಸ್‌ನಿಂದಲೇ ಹಾರಿಹೋಯ್ತು ಪ್ರಾಣ..!

ಬೆಳಿಗ್ಗೆ ಎದ್ದು ಎಂದಿನಂತೆ ಡ್ಯೂಟಿಗೆ ಬಂದಿದ್ದ ಯುವ ಕಂಡಕ್ಟರ್. ಸಾಮಾನ್ಯವಾಗಿ ಬಸ್‌ನ ಬಾಗಿಲ ಬಳಿ ಕಂಡಕ್ಟರ್ ನಿಲ್ಲುವುದನ್ನು ನೋಡಿರುತ್ತೇವೆ. ಈ ಯುವ ಕಂಡಕ್ಟರ್ ಕೂಡಾ ಬಸ್‌ನ ಡೋರ್ ಬಳಿ ನಿಂತು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ. ಯಾವ ಬಸ್‌ನಲ್ಲಿ ಕೆಲಸ ಮಾಡುತ್ತಾ ತನ್ನ ಬದುಕು ಕಟ್ಟಿಕೊಳ್ಳುತ್ತಿದ್ದನೋ ಅದೇ ಬಸ್ ಆ ಯುವಕನ ಪಾಲಿಗೆ ಯಮನಾಗಿತ್ತು. ಬೆಳಿಗ್ಗೆಯೇ ಕರ್ತವ್ಯದಲ್ಲಿದ್ದ ಬಸ್ ಕಂಡಕ್ಟರ್ ಕಂಡಿದ್ದು ಮಾತ್ರ ರಣಭೀಕರ ಸಾವು.

ಇದನ್ನೂ ಓದಿ:  ಅಮ್ಮನ ಫೋನ್ ಕಾಲ್ ನಿಂದಲೇ ಸಾವಿನ ನಿರ್ಧಾರ ಕೈಗೊಂಡಳಾ 10ನೇ ತರಗತಿ ವಿದ್ಯಾರ್ಥಿನಿ?

ಮಂಗಳೂರು ನಗರದ ನಂತೂರು ವೃತ್ತದಲ್ಲಿ ಈ ದುರಂತ ಘಟನೆ ನಡೆದಿದೆ. ಬಾಗಲಕೋಟೆ ಮೂಲದ 23 ವರ್ಷದ ಯುವಕ ಈರಯ್ಯ ಸಾವನ್ನಪ್ಪಿದ ಬಸ್ ಕಂಡಕ್ಟರ್. ದುಡಿಮೆಗೆಂದು ದೂರದ ಬಾಗಲಕೋಟೆಯಿಂದ ಮಂಗಳೂರಿಗೆ ಬಂದಿರುವ ಈರಯ್ಯ, ಸುರತ್ಕಲ್ ತಡಂಬೈಲ್ ನಲ್ಲಿ ವಾಸವಾಗಿದ್ದರು. ಖಾಸಗಿ ಬಸ್ಸಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಕೂಡಾ ಎಂದಿನಿಂತೆ ಈರಯ್ಯ ತನ್ನ ಪ್ರೀತಿಯ ಬಸ್‌ನಲ್ಲಿ ಡ್ಯೂಟಿಗೆ ಹಾಜರಾಗಿದ್ದರು. ಬಸ್‌ನ ಎದುರು ಬಾಗಿಲ ಬಳಿ ಈರಯ್ಯ ನಿಂತಿದ್ದರು. ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬಸ್ ತೆರಳುವ ವೇಳೆ ಬಸ್ಸು ಸರ್ಕಲ್ ನಲ್ಲಿ ತಿರುವು ಪಡೆಯುವ ರಭಸಕ್ಕೆ ಈರಯ್ಯ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಬಿದ್ದ ರಭಸ ನೋಡಿದರೆ ಎದೆ ಝಲ್ ಎನ್ನುತ್ತದೆ. ತಕ್ಷಣವೇ ಸ್ಥಳದಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರು ಮತ್ತು ಸ್ಥಳೀಯರು ಈರಯ್ಯನ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಈರಯ್ಯ ಕೊನೆಯುಸಿರೆಳೆದಿದ್ದಾನೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ. ಕಂಡಕ್ಟರ್ ರಸ್ತೆಗೆಸೆಯಲ್ಪಟ್ಟ ವಿಡಿಯೋ ಕಾರೊಂದರ ಡ್ಯಾಷ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ.

 

suddiyaana