‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರಬಿದ್ರಾ ತನ್ವಿ ರಾವ್ – ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಯಾರು?

‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರಬಿದ್ರಾ ತನ್ವಿ ರಾವ್ – ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಯಾರು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಧಾರಾವಾಹಿಯಲ್ಲೊಂದು ‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ಕೂಡಾ ಒಂದು. ಇದೀಗ ಈ ಧಾರಾವಾಹಿಯಲ್ಲಿ ಕಥೆಯಲ್ಲಿ ಹೇಗೆ ಟ್ವಿಸ್ ಸಿಕ್ಕುತ್ತಿದೆಯೋ ಹಾಗೆಯೇ ಸೀರಿಯಲ್ ತಂಡ ಕೂಡಾ ಒಂದು ಟ್ವಿಸ್ಟ್ ಕೊಟ್ಟಿದೆ. ತ್ರಿಕೋನ ಪ್ರೇಮಕಥೆಯಾಗಿರುವ ಈ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಷ್ಟೇ ಚೆಂದವಾಗಿ ಮೂಡಿಬರುತ್ತಿರುವ ಇನ್ನೊಂದು ಪಾತ್ರ ಕೀರ್ತಿಯದ್ದು. ಪ್ರೇಯಸಿಯಾಗಿ, ಪ್ರೀತಿ ಭಗ್ನಗೊಂಡ ಮೇಲೆ ಹತಾಶೆಯ ಹೆಣ್ಣಾಗಿ, ಮತ್ತೆ ಪ್ರೀತಿ ಪಡೆಯಲು ಹಠ ತೊಟ್ಟ ಹಠಮಾರಿಯಾಗಿ ಕೀರ್ತಿ ಎಲ್ಲರಿಗೂ ಇಷ್ಟವಾಗಿದ್ದಳು. ಕೀರ್ತಿ ಪಾತ್ರದ ಮೂಲಕ ತನ್ವಿರಾವ್ ವೀಕ್ಷಕರಿಗೆ ತುಂಬಾ ಹತ್ತಿರವಾಗಿದ್ದರು. ಆದರೆ, ಈಗ ಸೀರಿಯಲ್ ನಿಂದ ತನ್ವಿರಾವ್ ಹೊರ ನಡೆದಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್..!

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಿಂದ ತನ್ವಿ ರಾವ್ ಔಟ್ ಆಗಿದ್ದಾರೆ. ವೈಷ್ಣವ್- ಕೀರ್ತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹೀರೋ ತಾಯಿ ಕಾವೇರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ತನ್ನ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಹುಡುಗಿ ಜೊತೆ ಮದುವೆ ಮಾಡಿಸುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಮೊದಲು ವೈಷ್ಣವ್ ನನ್ನು ತಿರಸ್ಕರಿಸಿದ ಹೆಣ್ಣಾಗಿ ಕಾಣಿಸಿಕೊಂಡ ಕೀರ್ತಿ ಈಗ ಮತ್ತೆ ವೈಷ್ಣವ್ ಗಾಗಿ ಹಂಬಲಿಸುತ್ತಿದ್ದಾಳೆ. ವೈಷ್ಣವ್‌ನನ್ನು ಮತ್ತೆ ಪಡೆದುಕೊಳ್ಳಬೇಕು ಅಂತ ಕೀರ್ತಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಸೀರಿಯಲ್ ಪ್ರೇಕ್ಷಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳುವ ಸಮಯದಲ್ಲಿ ಈಗ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತನ್ವಿ ರಾವ್ ಅವರು ಸೀರಿಯಲ್‌ನಿಂದ ಹೊರಬಂದಿದ್ದಾರೆ. ಈ ಬಗ್ಗೆ ನಟಿ ತನ್ವಿ ರಾವ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

suddiyaana