ತನ್ವೀರ್‌ ಪೀರ್‌ ದೇಶ ಬಿಟ್ಟು ಓಡಿ ಹೋಗುವ ಅಪಾಯ ಇದೆ – ಯತ್ನಾಳ್‌ ಹೊಸ ಬಾಂಬ್‌!

ತನ್ವೀರ್‌ ಪೀರ್‌ ದೇಶ ಬಿಟ್ಟು ಓಡಿ ಹೋಗುವ ಅಪಾಯ ಇದೆ – ಯತ್ನಾಳ್‌ ಹೊಸ ಬಾಂಬ್‌!

ಹಿಂದೂ ಹುಲಿ ಅಂತಾನೇ ಕರೆಸಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ರಾಜಕಾರಣದ ಪ್ರಭಾವಿ ನಾಯಕ. ವಿಜಯಪುರದ ಧರ್ಮಗುರು, ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಷ್ಮಿ ಮತ್ತು ಅವರ ವಠಾರದಲ್ಲೇ ವಾಸವಾಗಿರುವ ಯತ್ನಾಳ್‌ ನಡುವಿನ ʻಐಸಿಸ್‌ ಯುದ್ಧʼ ಇನ್ನಷ್ಟು ಜೋರಾಗಿದೆ. ಐಸಿಸ್ ನಂಟು ಹೊಂದಿರುವ ಮೌಲ್ವಿ ಜೊತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ತನ್ವೀರ್‌ ಪೀರಾ ಗೆ ಐಸಿಎಸ್‌ ಸಂಪರ್ಕವಿದ, ಅದರ ಜತೆಗೇ ಆತ ಕೊಲೆ ಪ್ರಕರಣವೊಂದರ ಆರೋಪಿ ಎಂದು ಹೇಳಿದ್ದರು. ಇದೀಗ ಕೊಲೆ ಆರೋಪಿ ಎಂಬುದಕ್ಕೆ ಪೂರಕವಾಗಿ ಕೊಲೆಯಾದವನ ಪತ್ನಿ ನೀಡಿದ ದೂರನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ. ಅದರ ಜತೆಗೆ ತನ್ವೀರ್‌ ಪೀರ್‌ ದೇಶ ಬಿಟ್ಟು ಓಡಿ ಹೋಗುವ ಅಪಾಯವೂ ಇದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಶಾಕ್‌ ಕೊಟ್ಟ ವಧು! – ನಾನಿನ್ನೂ ಓದ್ಬೇಕು.. ಮದುವೆ ಬೇಡ ಅಂದ ಮದುಮಗಳು..!

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಯತ್ನಾಳ್‌ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ ಎಂದು ಕೊಲೆಯಾದವನ ಪತ್ನಿ ನೀಡಿದ ದೂರನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ.

ಕೊಲೆ ಕೇಸಿನಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ ನಿಂದ ತೆಗಿಸಲಾಯಿತು? ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್ ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ ಎಂದು ಹೇಳಿದ್ದಾರೆ.

ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ/ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು? ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರಧಲ್ಲಿ ಹಂಚಿಕೊಳ್ಳಲಿದ್ದೇನೆ..ಈತ ದೇಶದಿಂದ ಪೇರಿಕಿತ್ತಲು ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಪೀರನ ಮೇಲೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊಲೆಯಾದವನ ಹೆಂಡತಿ ಬರೆದ ಪತ್ರದಲ್ಲಿ ಏನಿದೆ?

ವಿಜಯಪುರ ಮಹಾನಗರಪಾಲಿಕೆ ಸದಸ್ಯೆಯಾಗಿದ್ದ ನಿಶಾತ ಹೈದರ್‌ ಅವರ ಪತಿ ಹೈದರ್‌ ಅಲಿ ನದಾಫ್‌ ಅವರನ್ನು 2023ರ ಮೇ 6ರಂದು ಕೊಲೆಯಾಗಿತ್ತು. ತನ್ನ ಗಂಡನ ಹಂತಕರು ಜೈಲಿನಿಂದ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಪ್ರಕರಣದ ಆರೋಪಿಗಳಾದ ಅಸೀಮುಲ್ಲಾ ಖಾದ್ರಿ, ತನ್ವೀರ್‌ ಪೀರಾ ಪಿರಜಾದೆ ಮತ್ತು ರಾಜೀವ್‌ ಪೀರಾ ಪಿರಜಾದೆ ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ಪೀರಜಾದೆಯ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖವಿದೆ.

Shwetha M