ಎಣ್ಣೆ ಮತ್ತಲ್ಲಿ ಶ್ರೇಷ್ಠಾ ಕೊರಳಿಗೆ ತಾಳಿ ಕಟ್ಟಿದನಾ ತಾಂಡವ್? – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹತ್ವದ ತಿರುವು  

ಎಣ್ಣೆ ಮತ್ತಲ್ಲಿ ಶ್ರೇಷ್ಠಾ ಕೊರಳಿಗೆ ತಾಳಿ ಕಟ್ಟಿದನಾ ತಾಂಡವ್? – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹತ್ವದ ತಿರುವು  

ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಕಂಠಪೂರ್ತಿ ಕುಡಿದು ತಾಂಡವ್ ಅವಾಂತರ ಮಾಡಿಕೊಂಡಿದ್ದಾನೆ. ಮತ್ತೊಂದೆಡೆ ತಾಳಿ ಕಟ್ಟು ಎಂದು ಹಠಕ್ಕೆ ಬಿದ್ದ ಶ್ರೇಷ್ಠಾ ರಂಪ ರಾಮಾಯಣ ಮಾಡಿದ್ದಾಳೆ. ಪ್ರೇಕ್ಷಕರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಈ ಧಾರಾವಾಹಿಗೆ ಈಗ ಮಹಾತಿರುವು ಸಿಕ್ಕಿದೆ.

ಕುಸುಮಾ ತನ್ನ ಪತಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದರೆ ಇತ್ತ ತಾಂಡವ್ ತನ್ನ ಹನಿ ಶ್ರೇಷ್ಠಾ ಜೊತೆ ಭರ್ಜರಿ ಪಾರ್ಟಿ ಮಾಡಿದ್ದಾನೆ. ಇಬ್ಬರೂ ಸೇರಿ ಪಬ್‌ಗೆ ಹೋಗಿದ್ದು, ಶ್ರೇಷ್ಠ ಮಾಡರ್ನ್ ಡ್ರೆಸ್ ಹಾಕಿಕೊಂಡು ಬಂದಿದ್ದಾಳೆ. ಅಲ್ಲಿ ತಾಂಡವ್, ಶ್ರೇಷ್ಠ ಇಬ್ಬರೂ ಸಿಕ್ಕಾಪಟ್ಟೆ ಕುಡಿದಿದ್ದಾರೆ. ಇನ್ನೊಂದು ಕಡೆ ಶ್ರೇಷ್ಠಾಳನ್ನು ಅಲ್ಲಿದ್ದ ಪೋಲಿ ಹುಡುಗರು ಆಡಿಕೊಂಡಿದ್ದಾರೆ. ಅದನ್ನು ನೋಡಿ ತಾಂಡವ್, ಶ್ರೇಷ್ಠಾಗೆ ಬೈದಿದ್ದಾನೆ. ‘ನಿನ್ನ ಅವತಾರ ನೋಡಿಕೊಂಡಿದ್ಯಾ? ನೀನು ಈ ರೀತಿ ಡ್ರೆಸ್ ಹಾಕಿಕೊಂಡಿದ್ದಕ್ಕೆ ಹೀಗೆ ಆಗಿರೋದು. ನೀನು ನನ್ನ ಹುಡುಗಿ, ನನ್ನ ಮುಂದೆ ನೀನು ಚೆನ್ನಾಗಿ ಕಂಡ್ರೆ ಸಾಕು. ಭಾಗ್ಯ ಮೈತುಂಬ ಬಟ್ಟೆ ಹಾಕಿಕೊಳ್ಳೋದಿಕ್ಕೆ ಯಾರೂ ಅವಳನ್ನು ಕೆಟ್ಟದಾಗಿ ನೋಡಲ್ಲ. ಭಾಗ್ಯ ನೋಡಿ ಕಲಿತ್ಕೋ’ ಎಂದು ಶ್ರೇಷ್ಠಗೆ ತಾಂಡವ್ ಕುಡಿದ ಅಮಲಿನಲ್ಲಿ ಬೈದಿದ್ದಾನೆ.

ಇದನ್ನೂ ಓದಿ : ತಮಿಳುನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ? – 234 ಕ್ಷೇತ್ರಗಳ ಮೇಲೂ ನಟನ ಕಣ್ಣು?

ಭಾಗ್ಯಾಳನ್ನ ನೋಡಿ ಕಲಿ ಎಂದು ಹೇಳಿದ ತಾಂಡವ್ ಮಾತು ಕೇಳಿ ಶ್ರೇಷ್ಠಾ ಸಿಟ್ಟಾಗಿದ್ದಾಳೆ. ಅವಳು ತಾಂಡವ್‌ಗೆ, ‘ಭಾಗ್ಯ ನಿನ್ನ ಹೆಂಡ್ತಿ. ನೀನು ನನಗೆ ಹೇಳಲು ಬರಬೇಡ. ನಿನಗೆ ಯಾವ ಅಧಿಕಾರವೂ ಇಲ್ಲ’ ಎಂದಿದ್ದಾಳೆ. ಆಗ ತಾಂಡವ್‌, ‘ನಿನ್ನ ಮೇಲೆ ನನಗೆ ಯಾವ ಅಧಿಕಾರವೂ ಇಲ್ವಾ ಹನಿ?’ ಎಂದಾಗ ಶ್ರೇಷ್ಠ ‘ನೀನು ನನ್ನ ಕುತ್ತಿಗೆಗೆ ತಾಳಿ ಕಟ್ಟಿದ್ರೆ ಮಾತ್ರ ಆ ಅಧಿಕಾರ ಸಿಗ್ತಿತ್ತು’ ಎಂದಿದ್ದಾಳೆ. ಶ್ರೇಷ್ಠ ಮಾತು ಕೇಳಿ ತಾಂಡವ್, ‘ನಾನು ನಿನ್ನನ್ನು ಮದುವೆ ಆಗ್ತೀನಿ’ ಎಂದಿದ್ದಾನೆ. ತಾಂಡವ್, ಶ್ರೇಷ್ಠ ಇಬ್ಬರೂ ಬೀದಿಯಲ್ಲಿ ಹೋಗುವಾಗ ದೇವಸ್ಥಾನವೊಂದು ಕಂಡಿದೆ. ಅಲ್ಲಿ ಮರಕ್ಕೆ ಅರಿಷಿಣದ ದಾರ ಕಟ್ಟಿರೋದು ಕಂಡಿದೆ. ಅದನ್ನು ನೋಡಿ ತಾಂಡವ್ ಶ್ರೇಷ್ಠಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ದೇವಿಯ ಮುಂದಿರುವ ಅರಿಶಿನ ದಾರವನ್ನೇ ತೆಗೆದುಕೊಂಡು ತಾಂಡವ್ ಶ್ರೇಷ್ಠಾಗೆ ಕಟ್ಟೋಕೆ ಮುಂದಾಗಿದ್ದಾನೆ. ಅದನ್ನು ಶ್ರೇಷ್ಠಾ ಮೊಬೈಲಲ್ಲಿ ರೆಕಾರ್ಡ್(Record) ಮಾಡೋದಕ್ಕೂ ಮುಂದಾಗಿದ್ದಾಳೆ. ಅಷ್ಟೊತ್ತಿಗೆ ಫೋನ್ ರಿಂಗಾಗಿದ್ದು, ತಾಂಡವ್‌ಗೆ ಅಮ್ಮನ ನೆನಪಾಗಿದೆ. ಅಮ್ಮ ನನ್ನ ಸಾಯಿಸ್ತಾಳೆ, ನಾನು ಮನೆಗೆ ಹೋಗ್ತೀನಿ ಅಂತ ತಾಳಿಯನ್ನ ಅಲ್ಲೇ ಬಿಸಾಕಿ ಹೊರಡ್ತಾನೆ. ಇದು ಶ್ರೇಷ್ಠಾಗೆ ಎಲ್ಲಿಲ್ಲದ ಸಿಟ್ಟು ತರಿಸಿದೆ.

‘ನೀನು ಅಮ್ಮನ ಬಾಲ, ಹೇಡಿ, ಕನ್ನಡೀಲಿ ಮುಖ ನೋಡ್ಕೋ, ತಾಳಿ ಕಟ್ಟೋಕೂ ಧೈರ್ಯ ಬೇಕು. ನಲವತ್ತು ವರ್ಷ ಆದ್ರೂ ಇನ್ನೂ ಅಮ್ಮನ ಸೆರಗು ಹಿಂದೆ ಸುತ್ತುತ್ತಿರೋ ನೀನೂ ಒಬ್ಬ ಗಂಡಸಾ, ಮದ್ವೆ ಆಗಿ ಎರಡು ಮಕ್ಕಳಾದ ಮೇಲೂ ನನ್ನನ್ಯಾಕೆ ಲವ್(Love) ಮಾಡ್ತಿದ್ದೀಯಾ’ ಅಂತೆಲ್ಲ ಬಾಯಿಗೆ ಬಂದಂಗೆ ಬೈದು, ಇನ್ಯಾವತ್ತೂ ನಿನ್ನ ಮುಖ ನೋಡಲ್ಲ’ ಅಂದು ಆಟೋ ಹತ್ತಿ ಹೋಗಿದ್ದಾಳೆ.

ಹೀಗೆ ಶ್ರೇಷ್ಠಾ ಜೊತೆ ಜಗಳ ಮಾಡಿಕೊಂಡು ಮನೆಗೆ ಬಂದ ತಾಂಡವ್ ಮಗಳು ತನ್ವಿ ಜೊತೆಗೂ ಜಗಳ ಮಾಡಿದ್ದಾನೆ. ಹೊಡೆಯಲು ಮುಂದಾದಾಗ ಭಾಗ್ಯ ತಡೆದಿದ್ದಾಳೆ. ಸದ್ಯ ಅಪ್ಪ ಅಮ್ಮ ಮನೆಯಲ್ಲಿಲ್ಲ ಎಂದು ಕುಡಿದುಕೊಂಡು ಬಂದಿರುವ ತಾಂಡವ್ ಮನೆಯಲ್ಲೂ ಗಲಾಟೆ ಮಾಡಿದ್ದಾನೆ.

suddiyaana