ಇಂಗ್ಲೆಂಡ್ ನಲ್ಲಿ ಸೂರ್ಯಕುಮಾರ್ ಯಾದವ್ ಶಸ್ತ್ರಚಿಕಿತ್ಸೆ – ಬಾಂಗ್ಲಾ ಸರಣಿಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್

ಟಿ-20 ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳೋ ಸ್ಟೈಲಿಶ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತ ತಂಡದ ಕ್ಯಾಪ್ಟನ್. 18ನೇ ಸೀಸನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಅತ್ಯದ್ಭುತ ಪ್ರದರ್ಶನ ನೀಡಿದ್ರು. ಬಟ್ ಸೂರ್ಯನಿಗೂ ಇಂಜುರಿ ಭೂತ ಕಾಡ್ತಿದೆ. ಇದೀಗ ಐಪಿಎಲ್ ಬಳಿಕ ಮತ್ತೆ ಮೈದಾನದಕ್ಕೆ ಮರಳಲು ಲಾಂಗ್ ಬ್ರೇಕ್ ಸಿಕ್ಕಿದೆ. ವೈಟ್ ಬಾಲ್ ಫಾರ್ಮೆಟ್ ಕ್ರಿಕೆಟ್ ಶುರುವಾಗೋದೇ ಆಗಸ್ಟ್ ನಲ್ಲಿ. ಸೋ ಈ ಗ್ಯಾಪಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಇದನ್ನೂ ಓದಿ : ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – ಏರ್ ಇಂಡಿಯಾ ವಿಮಾನ ಸೇರಿದಂತೆ ಹಲವು ವಿಮಾನಗಳ ಹಾರಾಟ ರದ್ದು
ಸೂರ್ಯಕುಮಾರ್ ಯಾದವ್ ತಮ್ಮ ಬಲಗಡೆಯ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ ಬಳಲ್ತಿದ್ದು ಚಿಕಿತ್ಸೆ ಪಡೆಯಲು ಲಂಡನ್ಗೆ ಹಾರಿದ್ದಾರೆ. ಌಕ್ಚುಲಿ ಈ ಕ್ರೀಡಾ ಹರ್ನಿಯಾ ಅನ್ನೋದು ಕ್ರೀಡಾಪಟುಗಳಲ್ಲಿ ಸರ್ವೇ ಸಾಮಾನ್ಯವಾದ ಸಮಸ್ಯೆ. ಹೊಟ್ಟೆಯ ಕೆಳಭಾಗದ ಸ್ನಾಯುಗಳು ಅಥವಾ ಸೊಂಟದ ಭಾಗದಲ್ಲಿ ನೋವುಂಟು ಮಾಡುತ್ತೆ. ಸೋ ಇದಕ್ಕೆ ಶಸ್ತ್ರಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿರುತ್ತದೆ. ಸೂರ್ಯಕುಮಾರ್ ಯಾದವ್ಗೆ ಈ ಸಮಸ್ಯೆ ಎರಡನೇ ಬಾರಿಗೆ ಕಾಣಿಸಿಕೊಂಡಿದೆ. ಕಳೆದ ವರ್ಷ ಜನವರಿಯಲ್ಲಿ ಎಡಗಡೆಯ ಸ್ಪೋರ್ಟ್ಸ್ ಹರ್ನಿಯಾಕ್ಕೆ ಜರ್ಮನಿಯ ಮ್ಯೂನಿಚ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಗಾಯದಿಂದಾಗಿ ಅವರು 2024ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಮಿಸ್ ಮಾಡಿಕೊಂಡಿದ್ರು. ಆ ಬಳಿಕ ರಿಕವರ್ ಆಗಿ ಟಿ-20 ವಿಶ್ವಕಪ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು. ಇದೀಗ ಟಿ-20 ಸಿರೀಸ್ ಶುರುವಾಗೋಕೆ ಇನ್ನೂ ಎರಡು ತಿಂಗಳು ಟೈಂ ಇರೋದ್ರಿಂದ ಇಂಗ್ಲೆಂಡ್ನಲ್ಲಿ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಚೇತರಿಕೆಗೆ ಕನಿಷ್ಠ ಎರಡು ತಿಂಗಳ ಕಾಲ ವಿಶ್ರಾಂತಿ ಬೇಕಿರೋದ್ರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಆಗಸ್ಟ್ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಸೂರ್ಯಕುಮಾರ್ ಹೊರಗುಳಿಯುವ ಸಾಧ್ಯತೆ ಇದೆ.
ಇನ್ನು ಆಗಸ್ಟ್ನಲ್ಲಿ ಬಾಂಗ್ಲಾ ಸರಣಿ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸ್ವದೇಶದಲ್ಲಿ ಸರಣಿಗಳನ್ನ ಆಡಲಿದೆ. ಆ ನಂತರ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಸೋ ಇವೆಲ್ಲವೂ ಭಾರತದ 2026 ಟಿ20 ವಿಶ್ವಕಪ್ ಸಿದ್ಧತೆಗಳ ಭಾಗವಾಗಿದೆ. ಹೀಗಾಗಿ ಸೂರ್ಯಕುಮಾರ್ ಮುಂಬರುವ ಟಿ20 ಸಮರಕ್ಕೆ ಕಂಪ್ಲೀಟ್ ಆಗಿ ಫಿಟ್ ಆಗಲು ಅವಕಾಶ ಇದಾಗಿದೆ. ಮುಂಬೈ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಅದ್ರಲ್ಲೂ ಐಪಿಎಲ್ 2025 ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ಪರ ಆಡಿರುವ ಸೂರ್ಯಕುಮಾರ್ 16 ಪಂದ್ಯಗಳಲ್ಲಿ 65.18 ಸರಾಸರಿ ಮತ್ತು 167.9 ಸ್ಟ್ರೈಕ್ ರೇಟ್ನಲ್ಲಿ 717 ರನ್ ಗಳಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಸೂರ್ಯ ಎಲ್ಲಾ 16 ಇನ್ನಿಂಗ್ಸ್ಗಳಲ್ಲಿ 25 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸತತ 25+ ಸ್ಕೋರ್ಗಳಿಗಾಗಿ ಹೊಸ T20 ದಾಖಲೆಯನ್ನೇ ಬರೆದಿದ್ದಾರೆ. ಸೂರ್ಯಕುಮಾರ್ ಅವ್ರ ಕನ್ಸಿಸ್ಟೆನ್ಸಿ ಪ್ರದರ್ಶನದಿಂದಲೇ ಮುಂಬೈ ತಂಡವು ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ಪಡೆದಿತ್ತು. ಬಟ್ ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತ್ತು.
ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಬಾಂಗ್ಲಾ ಸರಣಿಯಿಂದ ಹೊರಗುಳಿದ್ರೆ ಯಾರು ಕ್ಯಾಪ್ಟನ್ ಅನ್ನೋ ಪ್ರಶ್ನೆ ಮೂಡೋದೂ ಸಹಜ. ಸದ್ಯಕ್ಕೆ ಈ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬರ್ತಿದೆ. ಶ್ರೇಯಸ್ ಅಯ್ಯರ್ ಐಪಿಎಲ್ ನಲ್ಲಿ ಪಂಜಾಬ್ ತಂಡದ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 17 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 604 ರನ್ ಗಳಿಸಿದ್ದರು. ಈಗಾಗಲೇ ಏಕದಿನ ಫಾರ್ಮೇಟ್ನಲ್ಲೂ ಟಾಪ್ ಆರ್ಡರ್ ಬ್ಯಾಟರ್ ಆಗಿರುವ ಶ್ರೇಯಸ್ ಟಿ20 ಫಾರ್ಮೆಟ್ಗೂ ಕಮ್ ಬ್ಯಾಕ್ ಮಾಡೋ ಚಾನ್ಸಸ್ ಇದೆ. ಸತತ 2 ಐಪಿಎಲ್ ಆವೃತ್ತಿಗಳಲ್ಲಿ ತಮ್ಮ ತಂಡವನ್ನು ಫೈನಲ್ಗೆ ತಂದಿರುವ ಅಯ್ಯರ್ಗೆ ಬಾಂಗ್ಲಾದೇಶ ಸರಣಿಯಲ್ಲಿ ಅವರಿಗೆ ತಂಡವನ್ನು ಮುನ್ನಡೆಸುವ ಅವಕಾಶ ಸಿಗುವ ಸಾಧ್ಯತೆ ಇದೆ. ಅಲ್ದೇ ತಂಡದಲ್ಲಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ರಂತಹ ಆಟಗಾರರು ಚಾನ್ಸ್ ಪಡೆಯಬಹುದು.
ಸದ್ಯ ಟೀಂ ಇಂಡಿಯಾದ ಮೂರೂ ಮಾದರಿ ಕ್ರಿಕೆಟ್ನಲ್ಲೂ ಮೂವರು ಕ್ಯಾಪ್ಟನ್ಸ್ ಇದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿ ಬಳಿಕ ಶುಭ್ಮನ್ ಗಿಲ್ ನಾಯಕನಾಗಿ ಇಂಗ್ಲೆಂಡ್ ಸರಣಿಯಲ್ಲಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಕಂಟಿನ್ಯೂ ಆಗಿದ್ದಾರೆ. ಇನ್ನು 2024ರಲ್ಲಿ ಟಿ-20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ನಿವೃತ್ತಿಯಿಂದಾಗಿ ಸೂರ್ಯಕುಮಾರ್ ಯಾದವ್ ಟಿ-20 ನಾಯಕತ್ವ ವಹಿಸಿಕೊಂಡಿದ್ರು. ವಿಶೇಷ ಅಂದ್ರೆ ಸೂರ್ಯಕುಮಾರ್ ಯಾದವ್ ಟಿ-20 ಕ್ಯಾಪ್ಟನ್ ಆದ್ಮೇಲೆ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಸೋ ಮುಂದಿನ ದಿನಗಳಲ್ಲೂ ಅದೇ ಕಾನ್ಫಿಡೆನ್ಸ್ನಲ್ಲೇ ಪ್ರದರ್ಶನ ನೀಡ್ಬೇಕಿದೆ.