‘ಕಾಲಿನ ಗಾಯದಿಂದ ತೀವ್ರ ಬಳಲಿದ್ದೇನೆ’ – ಬಾಲಿವುಡ್ ಬಿಗ್ ಬಿಯನ್ನು ಕಾಡುತ್ತಿದೆ ವಿಪರೀತ ನೋವು..!

‘ಕಾಲಿನ ಗಾಯದಿಂದ ತೀವ್ರ ಬಳಲಿದ್ದೇನೆ’ – ಬಾಲಿವುಡ್ ಬಿಗ್ ಬಿಯನ್ನು ಕಾಡುತ್ತಿದೆ ವಿಪರೀತ ನೋವು..!

ಶೂಟಿಂಗ್ ವೇಳೆ ಗಾಯಗೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಾನು ತೀವ್ರ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  ಬಿಗ್ ಬಿ ತನ್ನ ಬ್ಲಾಗ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪಕ್ಕೆಲುಬಿಗೆ ಗಾಯವಾಗಿ ಎರಡು ವಾರಗಳ ಬಳಿಕ ಕಾಲ್ಬೆರಳುಗಳ ಅಡಿಯಲ್ಲಿ ಗುಳ್ಳೆಗಳಾಗಿದ್ದು ತೀವ್ರ ನೋವಾಗುತ್ತಿದೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ರಾತ್ರೋರಾತ್ರಿ ವೈದ್ಯರಿಗೆ ಕರೆ ಮಾಡಿ ಜಲ್ಸಾ ನಿವಾಸಕ್ಕೆ ಕರೆಸಿಕೊಂಡು ಚಿಕಿತ್ಸೆ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಮುಹೂರ್ತಕ್ಕೂ ಮುನ್ನವೇ ಉರಿಗೌಡ-ನಂಜೇಗೌಡ ಚಿತ್ರಕ್ಕೆ ಬ್ರೇಕ್ – ಮುನಿರತ್ನಗೆ ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದೇನು..? 

ಬಾಲಿವುಡ್ ಬಿಗ್‌ ಬಿ ತನ್ನ ನೋವನ್ನು ಪೋಸ್ಟ್ ಮೂಲಕ ಶೇರ್ ಮಾಡಿಕೊಂಡಿದ್ದು, ಮನೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ವೈದ್ಯರಿಗೆ ಕರೆ ಮಾಡಬೇಕಾಯಿತು ಎಂದಿದ್ದಾರೆ. ಕಾಲು ಬೆರಳುಗಳ ಅಡಿಯಲ್ಲಿ ಒಂದು ಗುಳ್ಳೆಯಾಗಿದೆ. ವಿಚಿತ್ರ ಎನಿಸುತ್ತದೆ, ಹಿಂದೆಂದೂ ಕೇಳಿಲ್ಲ ಅಥವಾ ಅನುಭವಿಸಿಲ್ಲ, ಆದರೆ ವಿಪರೀತ ನೋವು. ಆದ್ದರಿಂದ ಅದರ ಬಗ್ಗೆ ಗಮನ ನೀಡಲಾಗಿದೆ’ ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ ಬೇಗ ಗುಣಮುಖವಾಗಿ ಕೆಲಸಕ್ಕೆ ಮರಳುವುದಾಗಿ ಹೇಳಿದ್ದಾರೆ. ‘ಕೆಲಸಕ್ಕೆ ಹಿಂದಿರುಗಿ ಮತ್ತೆ ಹಳೆಯ ದಿನಚರಿ ಮರಳಿ ಪಡೆಯಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿರಲಿ’ ಎಂದು ಹೇಳಿದ್ದಾರೆ. ಬಾಲಿವುಡ್ ಬಿಗ್ ಬಿ ಹೈದರಾಬಾದ್‌ನಲ್ಲಿ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಪ್ರಭಾಸ್ ಮತ್ತು ದೀಪಿಕಾ ನಟನೆಯ ಪ್ರಾಜೆಕ್ಟ್ K ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಪ್ರಾಜೆಕ್ಟ್ K ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಮಿತಾಭ್ ಕೂಡ ಭಾಗಿಯಾಗಿದ್ದರು. ಚಿತ್ರೀಕರಣದ ಆಕ್ಷನ್ ದೃಶ್ಯದ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಅವರ ಪಕ್ಕೆಲುಬಿಗೆ ಏಟು ಬಿದ್ದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ಅವರನ್ನು ಹೈದರಾಬಾದ್‌ನಿಂದ ಮುಂಬೈನ ಜಲ್ಸಾ ನಿವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದರು.

suddiyaana