ಬಿಗ್ ಬಾಸ್ ನಲ್ಲಿ ಕಿಚ್ಚನ ಪಂಚಾಯಿತಿಗೆ ಸುದೀಪ್ ಗೈರು – ಕೆಸಿಸಿ ಪಂದ್ಯದಲ್ಲಿ ಬ್ಯುಸಿಯಾದ ಬಾದ್ ಶಾ

ಬಿಗ್ ಬಾಸ್ ನಲ್ಲಿ ಕಿಚ್ಚನ ಪಂಚಾಯಿತಿಗೆ ಸುದೀಪ್ ಗೈರು – ಕೆಸಿಸಿ ಪಂದ್ಯದಲ್ಲಿ ಬ್ಯುಸಿಯಾದ ಬಾದ್ ಶಾ

ಕನ್ನಡ ಚಿತ್ರರಂಗದ ಬಾದ್ ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾದಲ್ಲಿ ಮಾತ್ರ ಅಲ್ಲ ನಿರೂಪಣೆಯಲ್ಲೂ ಎತ್ತಿದ ಕೈ. ಅದ್ರಲ್ಲೂ ಬಿಗ್ ಬಾಸ್​ನಲ್ಲಿ ಅವ್ರು ಹೇಳೋ ಒಂದೊಂದು ಡೈಲಾಗ್​ಗೂ ವೀಕ್ಷಕರೂ ಚಪ್ಪಾಳೆ ಹೊಡೆಯುತ್ತಿರುತ್ತಾರೆ. ಇಡೀ ವಾರ ಬಿಗ್ ಬಾಸ್ ಮನೆಯಲ್ಲಿ ಏನೇ ನಡೆದ್ರೂ ಫೈನಲ್ ಆಗಿ ಸುದೀಪ್ ಬಂದ ಮೇಲೆ ಎಲ್ಲವೂ ಸರಿ ಹೋಗುತ್ತೆ. ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ, ಸೈಡ್​ಲೈನ್ ಆದವ್ರಿಗೆ ಧೈರ್ಯದ ಮಾತುಗಳು, ನಾನೇ ಅಂತಾ ಮೆರೆಯೋರಿಗೆ ಡೈಲಾಗ್​ನಲ್ಲೇ ಪಂಚ್ ಕೊಡ್ತಾರೆ. ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಒಬ್ಬರನ್ನು ಎಲಿಮಿನೇಟ್ ಮಾಡಿ ಹೋಗ್ತಾರೆ. ಹೀಗಾಗಿ ಕಿಚ್ಚನ ಪಂಚಾಯ್ತಿ ಅಂದ್ರೆ ಜನ ಕಾದು ಕುಳಿತು ನೋಡ್ತಾರೆ. ಸ್ಪರ್ಧಿಗಳು ಕೂಡ ಸಾಟರ್ಡೇ, ಸಂಡೇ ಎಪಿಸೋಡ್ಸ್ ಗೆ ಕಾಯ್ತಿರ್ತಾರೆ. ಆದ್ರೆ ಈ ವಾರ ಕಿಚ್ಚನ ಪಂಚಾಯಿತಿ ಇರೋದಿಲ್ಲ. ಇದೇ ಕಾರಣಕ್ಕೆ ಶ್ರುತಿ ನ್ಯಾಯಾಧೀಶೆಯಾಗಿ ಎಂಟ್ರಿ ಕೊಟ್ಟ್ಟಿದ್ದಾರೆ.

ಇದನ್ನೂ ಓದಿ : ಉಗ್ರಂ ಸಿನಿಮಾ ಎಳೆಯನ್ನೇ ಇಟ್ಟುಕೊಂಡು ಸಲಾರ್ ಮಾಡಿದ್ರಾ ಪ್ರಶಾಂತ್ ನೀಲ್ – ಪ್ರಭಾಸ್ ಚಿತ್ರದ ಬಗ್ಗೆ ಫ್ಯಾನ್ಸ್ ಹೇಳೋದೇನು?

ಪ್ರತೀ ವಾರ ಸುದೀಪ್​ ​ಗಾಗಿ ಕಾಯ್ತಿದ್ದ ಸ್ಪರ್ಧಿಗಳು ಮತ್ತು ವೀಕ್ಷಕರಿಗೆ ಈ ವಾರ ಬೇಸರ ಆಗಿರಬಹುದು. ಅದಕ್ಕೆ ಕಾರಣವೂ ಇದೆ. ಈ ವಾರ ಕಿಚ್ಚನ ಪಂಚಾಯಿತಿ ಇಲ್ಲದಿರೋದಕ್ಕೆ ಕಾರಣ ಕನ್ನಡ ಚಲನಚಿತ್ರ ಕಪ್ ಮ್ಯಾಚ್. ಡಿಸೆಂಬರ್ 23, 24 ಮತ್ತು 25ರಂದು ಕೆಸಿಸಿ ಸೀಸನ್ 2 ಕ್ರಿಕೆಟ್ ಹಬ್ಬ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಕೆಸಿಸಿಯಲ್ಲಿ ಕನ್ನಡದ ದಿಗ್ಗಜ ಸ್ಟಾರ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಆಡುತ್ತಿದ್ದಾರೆ. ಒಟ್ಟು ಆರು ತಂಡಗಳು ಪೈಪೋಟಿ ನಡೆಸಲಿವೆ. ವಿಶೇಷ ಅಂದ್ರೆ ಈ ಪಂದ್ಯಗಳ ಜವಾಬ್ದಾರಿಯನ್ನ ಕಿಚ್ಚ ಸುದೀಪ್ ಅವ್ರೇ ವಹಿಸಿಕೊಂಡಿದ್ದಾರೆ. ಕಿಚ್ಚನ ನೇತೃತ್ವದಲ್ಲಿ ಕೆಸಿಸಿ ನಡೆಯುತ್ತಿದ್ದು, ಶನಿವಾರ ಪಂದ್ಯದ ಉದ್ಘಾಟನೆ ಇತ್ತು. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಿಚ್ಚನ ಟೀಮ್ ಕೂಡ ಕ್ರಿಕೆಟ್ ಆಡುತ್ತಿದೆ. ಹೀಗಾಗಿ ಬಿಗ್ ಬಾಸ್ ಶೂಟಿಂಗ್​ಗೆ ಸುದೀಪ್ ಗೈರಾಗಿದ್ದಾರೆ ಎನ್ನಲಾಗಿದೆ.

ಇನ್ನು ಬಿಗ್​ಬಾಸ್ ಮನೆಯಲ್ಲಿ ಈ ವಾರ ಮಾತನಾಡಲು ಹಲವು ವಿಚಾರಗಳಿದ್ದವು. ಕಾರ್ತಿಕ್ ಮೊದಲು ಸಂಗೀತಾ ಟೀಮ್​ಗೆ ಸೆಲೆಕ್ಟ್ ಬಳಿಕ ತನಿಷಾ ಟೀಂಗೆ ಹೋಗಿತ್ತು. ಬಟ್ಟೆಗಳ ವಾಷಿಂಗ್ ಟಾಸ್ಕ್​ನಲ್ಲಿ ವಿನಯ್ ಬೆರಳು ಮುರಿದಿದ್ದು, ಕಾರ್ತಿಕ್ ಬೆನ್ನಿಗೆ ಗಾಯವಾಗಿದ್ದು, ಸ್ಪರ್ಧಿಗಳ ಜೊತೆ ಸಂಗೀತಾ ರೂಡ್​ ಆಗಿ ನಡೆದುಕೊಂಡಿದ್ದು, ಸಂಗೀತಾಗೆ ಕಳಪೆ ಕೊಟ್ಟಿದ್ದು, ನಮ್ರತಾ ಕ್ಯಾಪ್ಟನ್ಸಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಬೇಕಿತ್ತು. ಸುದೀಪ್ ಏನ್ ಹೇಳ್ತಾರೆ ಅಂತಾ ವೀಕ್ಷಕರು ಕಾಯ್ತಿದ್ರು. ಆದ್ರೆ ಸುದೀಪ್ ಸರ್ ಬರದೆ ಇರೋದ್ರಿಂದ ಎಲ್ರಿಗೂ ಬೇಸರ ಆಗಿದೆ. ಹಾಗೇ ಕಿಚ್ಚನ ಪಂಚಾಯ್ತಿ ಇಲ್ಲದೆ ಇರೋದ್ರಿಂದ ಎಲಿಮಿನೇಷನ್ ಇರುತ್ತೋ ಇಲ್ಲವೋ ಅನ್ನೋ ಅನುಮಾನ ಕೂಡ ಇದೆ. ಈ ವಾರ ಸಂಗೀತಾ, ಪ್ರತಾಪ್, ಸಿರಿ, ತುಕಾಲಿ ಸಂತೋಷ್ , ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಸುದೀಪ್ ಇರದ ಕಾರಣ ಏನಾದ್ರೂ ಒಂದು ಲಾಜಿಕ್ ಉಪಯೋಗಿಸಿ ಎಲ್ಲಾ ಸ್ಪರ್ಧಿಗಳನ್ನೂ ಸೇವ್ ಮಾಡುವ ಚಾನ್ಸಸ್ ಇದೆ.

Shantha Kumari