ನಂಜುಂಡೇಶ್ವರನಿಗೆ ಕುಮಾರಸ್ವಾಮಿ ದಂಪತಿಯಿಂದ ಬೆಲ್ಲದ ತುಲಭಾರ – ಸೊಸೆ, ಮೊಮ್ಮಗನಿಗಾಗಿ ದೇವರಿಗೆ ವಿಶೇಷ ಸೇವೆ

ನಂಜುಂಡೇಶ್ವರನಿಗೆ ಕುಮಾರಸ್ವಾಮಿ ದಂಪತಿಯಿಂದ ಬೆಲ್ಲದ ತುಲಭಾರ – ಸೊಸೆ, ಮೊಮ್ಮಗನಿಗಾಗಿ ದೇವರಿಗೆ ವಿಶೇಷ ಸೇವೆ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಂಜನಗೂಡಿನಲ್ಲಿರುವ ಪ್ರಸಿದ್ಧ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಆಗಮಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ನಂಜುಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ – ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ ಜೆಡಿಎಸ್ ಯುವ ಮುಖಂಡ

ಮೈಸೂರಿನ ನಂಜನಗೂಡಿಗೆ ಕುಟುಂಬ ಸಮೇತರಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂಜುಡೇಶ್ವರನ ಸನ್ನಿಧಾನದಲ್ಲಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿರಿಂದ ತುಲಾ ಭಾರ ಸೇವೆಯೂ ನಡೆಯಿತು.  ಅನಿತಾ ಕುಮಾರಸ್ವಾಮಿ ಬೆಲ್ಲದ ತುಲಾಭಾರ ಮಾಡಿಸಿದರು. ಅತ್ತೆ ಮಾವನ ಜೊತೆ ನಿಖಿಲ್ ಕುಮಾರಸ್ವಾಮಿಯವರ ಪತ್ನಿ ರೇವತಿ ನಿಖಿಲ್ ಮತ್ತು ಮಗ ಬಂದಿದ್ದು ವಿಶೇಷವಾಗಿತ್ತು. ಇದೇ ವೇಳೆ ಕುಮಾರಸ್ವಾಮಿ ದಂಪತಿ ಸೊಸೆ ಮೊಮ್ಮಗನಿಗಾಗಿಯೂ ವಿಶೇಷ ಪೂಜೆ ಸಲ್ಲಿಸಿದರು. ನಂಜುಡೇಶ್ವರನ ಸನ್ನಿಧಿಯಲ್ಲಿ ಅನಿತಾ ಕುಮಾರಸ್ವಾಮಿಯವರು ತಕ್ಕಡಿಯಲ್ಲಿ ಕೂತು ಬೆಲ್ಲದ ತುಲಾ ಭಾರ ನಡೆಸಿದ್ದಾರೆ. ಇದಕ್ಕೂ ಮುನ್ನ ಕುಟುಂಬ ತುಲಾ ಭಾರಕ್ಕೆ ಪೂಜೆ ಸಲ್ಲಿಸಿದೆ. ಪತ್ನಿ ಬಳಿಕ ಕುಮಾರಸ್ವಾಮಿ, ನಿಖಿಲ್ ಪುತ್ರ ಅವ್ಯಾನ್ ಕೂಡ ತುಲಾಭಾರ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‍ಡಿಕೆ, ನನ್ನ ಆರೋಗ್ಯ ಸಮಸ್ಯೆಯಿಂದ ಭಗವಂತ ಪಾರು ಮಾಡಿದ್ದಾರೆ. ನಾನು ಆರೋಗ್ಯ ಸಮಸ್ಯೆಗೆ ಒಳಗಾದಾಗ ನನ್ನ ಕುಟುಂಬ ಸದಸ್ಯ ನರಸಿಂಹಸ್ವಾಮಿ ನಂಜುಂಡೇಶ್ವರನಿಗೆ ಅರಸಿಕೊಂಡಿದ್ರು. ಹೀಗಾಗಿ ಇಂದು ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿದ್ದೇವೆ. ನಾಡಿಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.

ನಂಜನಗೂಡಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕುಮಾರಸ್ವಾಮಿ ದಂಪತಿ ಸೊಸೆ ಮತ್ತು ಮೊಮ್ಮಗನ ಜೊತೆ ಮೈಸೂರಿಗೆ ಹೊರಟರು. ಮೈಸೂರು ಚಾಮುಂಡೇಶ್ವರಿಯ ದರ್ಶನ ಮಾಡಿ ಅಲ್ಲಿಯೇ ವಿಶೇಷ ಪೂಜೆ ಸಲ್ಲಿಸಿದರು.

Sulekha