ಗಣೇಶ ಹಬ್ಬಕ್ಕೆ ಮಂಗಳೂರು, ಬೀದರ್‌ಗೆ ವಿಶೇಷ ರೈಲು – ಟ್ರೈನ್ ಎಲ್ಲಿಂದ ಹೊರಡಲಿದೆ ಅನ್ನೋದನ್ನ ಮೊದಲೇ ನೋಡಿ..!

ಗಣೇಶ ಹಬ್ಬಕ್ಕೆ ಮಂಗಳೂರು, ಬೀದರ್‌ಗೆ ವಿಶೇಷ ರೈಲು – ಟ್ರೈನ್ ಎಲ್ಲಿಂದ ಹೊರಡಲಿದೆ ಅನ್ನೋದನ್ನ ಮೊದಲೇ ನೋಡಿ..!

ಮುಂದಿನ ವಾರವೇ ಗಣೇಶ ಹಬ್ಬ. ಹೀಗಾಗಿ ಊರಿಗೆ ಹೊರಡಲು ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಈ ಬಾರಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ನೈರುತ್ಯ ರೈಲ್ವೆಯು ಯಶವಂತಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲು ಸೇವೆಗಳನ್ನು ಪ್ರಾರಂಭಿಸಲಿದೆ. ಈ ಸೇವೆಗಳು ಸಾಮಾನ್ಯ ರೈಲುಗಳಲ್ಲಿನ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಹಬ್ಬಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇನ್ನು ಸಾಲು ಸಾಲು ಹಬ್ಬಗಳಿಗಾಗಿ ಡಿಸೆಂಬರ್‌ವರೆಗೂ ವಿಶೇಷ ರೈಲು ಸೇವೆ ಇರಲಿದೆ.

ಇದನ್ನೂ ಓದಿ:ಮದುವೆ, ಪ್ರವಾಸಕ್ಕೆ ಬಸ್ ಮಾತ್ರ ಯಾಕೆ ರೈಲು ಕೂಡಾ ಬಾಡಿಗೆ ಸಿಗುತ್ತೆ – ರೈಲು ಬುಕ್ ಮಾಡೋದು ಹೇಗೆ ಗೊತ್ತಾ?

ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳಿಗಾಗಿ ರೈಲ್ವೆ ಇಲಾಖೆಯು ಕರ್ನಾಟಕದಿಂದ 5 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿವೆ. ಪ್ರಮುಖವಾಗಿ ಬೆಂಗಳೂರಿನಿಂದ ಮಂಗಳೂರು, ಬೀದರ್‌, ಉತ್ತರ ಪ್ರದೇಶ, ತಮಿಳುನಾಡು ಈ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಯಶವಂತಪುರ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಈ ರೈಲುಗಳು ಹೋಗುತ್ತವೆ. ಆಗಸ್ಟ್ 23 ರಿಂದ ಪ್ರಾರಂಭವಾಗಿ ಡಿಸೆಂಬರ್ 29 ರವರೆಗೆ ಈ ವಿಶೇಷ ರೈಲು ಸೇವೆ ಲಭ್ಯವಿರುತ್ತದೆ.

ಗಣೇಶ ಹಬ್ಬಕ್ಕೆ ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲು ಗಣೇಶ ಚತುರ್ಥಿಯ ಸಂದರ್ಭದಲ್ಲಿ, ದಕ್ಷಿಣ ಪಶ್ಚಿಮ ರೈಲ್ವೆ ಎಸ್‌ಎಮ್‌ವಿಟಿ ಬೆಂಗಳೂರು-ಬೀದರ್, ಮೈಸೂರು-ತಿರುನೆಲ್ವೇಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಡಗಾಂವ್ ನಡುವೆ ಒಂದು ಬಾರಿ ಸಂಚರಿಸುವ ವಿಶೇಷ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06569 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು -ಮಡಗಾಂವ್ ಎಕ್ಸ್‌ಪ್ರೆಸ್ ವಿಶೇಷ ರೈಲು

ಆಗಸ್ಟ್ 26 ರಂದು (ಮಂಗಳವಾರ) ಮಧ್ಯಾಹ್ನ 1:00 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 05:30 ಗಂಟೆಗೆ ಮಡಗಾಂವ್ ತಲುಪುತ್ತದೆ. ರೈಲು ಸಂಖ್ಯೆ 06570 ಆಗಸ್ಟ್ 27 ರಂದು (ಬುಧವಾರ) ಬೆಳಿಗ್ಗೆ 06:30 ಗಂಟೆಗೆ ಮಡಗಾಂವ್‌ನಿಂದ ಹೊರಟು ಅದೇ ದಿನ ರಾತ್ರಿ 11:40 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರು ತಲುಪುತ್ತದೆ. ಈ ರೈಲು 16 ಬೋಗಿಗಳನ್ನು ಹೊಂದಿದೆ. ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುತ್ತದೆ.

ಬೆಂಗಳೂರು – ಬೀದರ್ ವಿಶೇಷ ರೈಲು ರೈಲು ಸಂಖ್ಯೆ 06549

ಆಗಸ್ಟ್ 26 (ಮಂಗಳವಾರ) ರಂದು ರಾತ್ರಿ 9:15 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರಿನಿಂದ ಹೊರಟು ಆಗಸ್ಟ್‌ 27 ಕ್ಕೆ (ಬುಧವಾರ) ಬೆಳಿಗ್ಗೆ 11:30 ಗಂಟೆಗೆ ಬೀದರ್ ತಲುಪುತ್ತದೆ. ರೈಲು ಸಂಖ್ಯೆ 06550 ಆಗಸ್ಟ್ 27, (ಬುಧವಾರ) ಮಧ್ಯಾಹ್ನ 2:30 ಗಂಟೆಗೆ ಬೀದರ್‌ನಿಂದ ಹೊರಟು ಗುರುವಾರ ಬೆಳಿಗ್ಗೆ 04:30 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರು ತಲುಪುತ್ತದೆ. ಈ ರೈಲು 22 ಬೋಗಿಗಳನ್ನು ಹೊಂದಿರುತ್ತದೆ ಮತ್ತು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಮತ್ತು ಹುಮ್ನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುತ್ತದೆ.

ಮೈಸೂರು ತಿರುನೆಲ್ವೇಲಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06241 ಮೈಸೂರು -ತಿರುನೆಲ್ವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲು

ಆಗಸ್ಟ್ 26 (ಮಂಗಳವಾರ) ರಾತ್ರಿ 20:15 ಗಂಟೆಗೆ ಮೈಸೂರಿನಿಂದ ಹೊರಟು ಬುಧವಾರ ಬೆಳಿಗ್ಗೆ 10:50 ಗಂಟೆಗೆ ತಿರುನೆಲ್ವೇಲಿ ತಲುಪುತ್ತದೆ. ರೈಲು ಸಂಖ್ಯೆ 06242 ಆಗಸ್ಟ್ 27 ರಂದು (ಬುಧವಾರ) ಮಧ್ಯಾಹ್ನ 3:40 ಗಂಟೆಗೆ ತಿರುನೆಲ್ವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 05:50 ಗಂಟೆಗೆ ಮೈಸೂರು ತಲುಪುತ್ತದೆ. ಈ ರೈಲು 20 ಬೋಗಿಗಳನ್ನು ಹೊಂದಿರುತ್ತದೆ ಮತ್ತು ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುದುನಗರ ಮತ್ತು ಸತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದುತ್ತದೆ.

ಯಶವಂತಪುರ ಧನ್‌ಬಾದ್ ಎಕ್ಸ್‌ಪ್ರೆಸ್ ವಿಶೇಷ ರೈಲು ರೈಲು ಸಂಖ್ಯೆ 06563

ಯಶವಂತಪುರ ಧನ್‌ಬಾದ್ ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 23 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಯಶವಂತಪುರದಿಂದ ಬೆಳಿಗ್ಗೆ 07:30 ಗಂಟೆಗೆ ಹೊರಟು ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಧನ್‌ಬಾದ್ ತಲುಪುತ್ತದೆ. ರೈಲು ಸಂಖ್ಯೆ 06564 ಧನ್‌ಬಾದ್-ಯಶವಂತಪುರ ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 25 ರಿಂದ ಡಿಸೆಂಬರ್ 29 ರವರೆಗೆ ಪ್ರತಿ ಸೋಮವಾರ ಧನ್‌ಬಾದ್‌ನಿಂದ ರಾತ್ರಿ 8:45 ಗಂಟೆಗೆ ಹೊರಟು ಬುಧವಾರ ರಾತ್ರಿ 9:30 ಗಂಟೆಗೆ ಯಶವಂತಪುರ ತಲುಪುತ್ತದೆ. ಈ ಎರಡೂ ರೈಲುಗಳು ಪ್ರತಿ ದಿಕ್ಕಿನಲ್ಲಿ 19 ಬಾರಿ ಸಂಚರಿಸುತ್ತವೆ. ಈ ರೈಲುಗಳು ಯಲಹಂಕ, ಧರ್ಮಾವರಂ, ಅನಂತಪುರ, ಗೂಟಿ, ದೋನೆ, ಕರ್ನೂಲ್ ಸಿಟಿ, ಮಹಬೂಬ್‌ನಗರ, ಕಾಚಿಗುಡ, ಕಾಜಿಪೇಟೆ, ರಾಮಗುಂಡಂ, ಬಲ್ಹಾರ್ಷಾ, ನಾಗ್ಪುರ, ಇಟಾರ್ಸಿ, ಪಿಪರಿಯಾ, ನರಸಿಂಗ್‌ಪುರ, ಮದನ್ ಮಹಲ್, ಕಟ್ನಿ, ಸತ್ನಾ, ಪ್ರಯಾಗ್‌ರಾಜ್ ಛಿಯೋಕಿ, ಮಿರ್ಜಾಪುರ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಭಬುವಾ ರಸ್ತೆ, ಸಸಾರಾಂ, ಅನುಗ್ರಹ ನಾರಾಯಣ ರಸ್ತೆ, ಗಯಾ, ಕೋಡರ್ಮಾ, ಹಜಾರಿಬಾಗ್ ರಸ್ತೆ, ಪರಸ್‌ನಾಥ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಗೊಮೊಹ್ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲಿನಲ್ಲಿ 21 ಬೋಗಿಗಳು ಇರುತ್ತವೆ. ಅದರಲ್ಲಿ 02 ಎಸಿ 3-ಟೈರ್, 13 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್/ಡಿ ಬೋಗಿಗಳು ಇರುತ್ತವೆ.

ರೈಲು ಸಂಖ್ಯೆ 06529/06530 ಎಸ್‌ಎಮ್‌ವಿಟಿ ಬೆಂಗಳೂರು-ಗೋಮತಿ ನಗರ-ಎಸ್‌ಎಮ್‌ವಿಟಿ ಬೆಂಗಳೂರು ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ವಿಶೇಷ ರೈಲು

ಆಗಸ್ಟ್ 25 ರಿಂದ ನವೆಂಬರ್ 3 ರವರೆಗೆ ಪ್ರತಿ ಸೋಮವಾರ ಎಸ್‌ಎಮ್‌ವಿಟಿ ಬೆಂಗಳೂರಿನಿಂದ ಸಂಜೆ 19:00 ಗಂಟೆಗೆ ಹೊರಟು ಗುರುವಾರ ಬೆಳಿಗ್ಗೆ 11:30 ಗಂಟೆಗೆ ಗೋಮತಿ ನಗರ ತಲುಪುತ್ತದೆ. ರೈಲು ಸಂಖ್ಯೆ 06530 ಗೋಮತಿ ನಗರ-ಎಸ್‌ಎಮ್‌ವಿಟಿ ಬೆಂಗಳೂರು ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 29, 2025 ರಿಂದ ನವೆಂಬರ್ 7, 2025 ರವರೆಗೆ ಪ್ರತಿ ಶುಕ್ರವಾರ ಗೋಮತಿ ನಗರದಿಂದ ಮಧ್ಯಾಹ್ನ 12:20 ಗಂಟೆಗೆ ಹೊರಟು ಸೋಮವಾರ ಬೆಳಿಗ್ಗೆ 08:15 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರು ತಲುಪುತ್ತದೆ. ಈ ಎರಡೂ ರೈಲುಗಳು ಪ್ರತಿ ದಿಕ್ಕಿನಲ್ಲಿ 12 ಬಾರಿ ಸಂಚರಿಸುತ್ತವೆ. ಈ ರೈಲುಗಳು ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್‌ಎಮ್‌ಎಮ್ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಾಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭುಸಾವಲ್, ಖಾಂಡ್ವಾ, ರಾಣಿ ಕಮಲಾಪತಿ, ಬೀನಾ, ವಿರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಓರೈ, ಪೋಖ್ರಾಯನ್, ಗೋವಿಂದಪುರಿ, ಪ್ರಯಾಗ್‌ರಾಜ್ ಜಂಕ್ಷನ್, ಗ್ಯಾನ್‌ಪುರ ರಸ್ತೆ, ಬನಾರಸ್, ವಾರಣಾಸಿ, ಔನ್‌ರಿಹಾರ್, ಮೌ, ಬೆಲ್ತಾರಾ ರಸ್ತೆ, ಭಟ್ನಿ, ಡಿಯೋರಿಯಾ ಸಾದರ್, ಗೋರಖ್‌ಪುರ, ಬಸ್ತಿ ಮತ್ತು ಗೊಂಡಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುತ್ತವೆ. ಈ ರೈಲಿನಲ್ಲಿ 20 ಬೋಗಿಗಳು ಇರುತ್ತವೆ. ಅದರಲ್ಲಿ 01 ಎಸಿ ಫಸ್ಟ್ ಕ್ಲಾಸ್, 02 ಎಸಿ 2-ಟೈರ್, 04 ಎಸಿ 3-ಟೈರ್, 07 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್/ಡಿ ಬೋಗಿಗಳು ಇರುತ್ತವೆ.

Sulekha