3 ಕೋಟಿ ಆಸೆಗಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಪಾಪಿ ಮಕ್ಕಳು! – ಸಿನಿಮಾವನ್ನೇ ಮೀರಿಸುತ್ತೆ ಈ ಖತರ್ನಾಕ್‌ ಪ್ಲ್ಯಾನ್!

3 ಕೋಟಿ ಆಸೆಗಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಪಾಪಿ ಮಕ್ಕಳು! – ಸಿನಿಮಾವನ್ನೇ ಮೀರಿಸುತ್ತೆ ಈ ಖತರ್ನಾಕ್‌ ಪ್ಲ್ಯಾನ್!

ಹಣದ ಮುಂದೆ ಈ ಜಗತ್ತಿನಲ್ಲಿ ಏನೂ ಇಲ್ಲ. ಹಣ ಕಂಡ್ರೆ ಹೆಣ ಕೂಡ ಬಾಯಿಬಿಡುತ್ತೆ ಅನ್ನೋ ಮಾತಿದೆ. ಇದೀಗ ಇಲ್ಲೊಂದು ಕಡೆ ದುಡ್ಡಿನ ಆಸೆಗಾಗಿ ತಂದೆಯನ್ನೇ ಕೊಲೆ ಮಾಡಿದ್ದಾರೆ ಪಾಪಿ ಮಕ್ಕಳು! ಹಾವು ಕಚ್ಚಿಸಿ ತಂದೆಯನ್ನ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ! –  ಈ ಮಾರ್ಗದಲ್ಲಿ ಮೆಟ್ರೋ ಸೇವೆ 1 ಗಂಟೆ ಲೇಟ್‌ !

ಈ ವಿಲಕ್ಷಣಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇನ್ಯೂರೆನ್ಸ್​ ಕಂಪನಿ ಮೂಲಕ ಹಣ ಪಡೆಯಲು ಹೆತ್ತ ಮಕ್ಕಳೇ, ಹಾವು ಕಚ್ಚಿಸಿ ತಮ್ಮ ತಂದೆಯನ್ನ ಸಾಯಿಸಿದ್ದಾರೆ. ಅಕ್ಟೋಬರ್‌ 22 ರಂದು ಈ ಘಟನೆ ನಡೆದಿದ್ದು, ತನಿಖೆ ವೇಳೆ ಪಾಪಿ ಮಕ್ಕಳ ಅಸಲಿ ಮುಖ ಬಯಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಅಕ್ಟೋಬರ್ 22 ರಂದು ತಮಿಳುನಾಡಿನ ಪೊಥಟ್ಟೂರ್‌ಪೆಟ್ಟೈ ಠಾಣೆಯ ಪೊಲೀಸರಿಗೆ, ತಿರುತ್ತಣಿ ಸರ್ಕಾರಿ ಶಾಲೆಯ ಲ್ಯಾಬ್​ನ ಸಹಾಯಕ ಇ.ಪಿ.ಗಣೇಶ್​ (56) ಅನ್ನೋರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇ.ಪಿ ಗಣೇಶ್ ಪುತ್ರ ಜಿ ಮೋಹನ್ ರಾಜ್  (29) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ಆರಂಭಿಕ ಹಂತದಲ್ಲಿ ಆಕಸ್ಮಿಕ ಹಾವು ಕಡಿತದಿಂದಲೇ ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದ್ರೆ

ಮೃತಪಟ್ಟ ಕೆಲವು ದಿನಗಳು ಕಳೆದ ನಂತರ ಇ.ಪಿ.ಗಣೇಶ್ ಕುಟುಂಬವು ಇನ್ಶೂರೆನ್ಸ್ ಹಣಕ್ಕಾಗಿ ಅರ್ಜಿ ಸಲ್ಲಿಸಿತ್ತು. ಒಂದೆಲ್ಲ ಎರಡಲ್ಲ ಬರೋಬ್ಬರಿ ಮೂರು ಕೋಟಿಗಾಗಿ ಕುಟುಂಬದ ಸದಸ್ಯರು ಕ್ಲೈಮ್​ ಮಾಡಿದ್ದರು. ಇದರಿಂದ ಅನುಮಾನಗೊಂಡ ಇನ್ಶೂರೆನ್ಸ್ ಕಂಪನಿ, ತಮಿಳುನಾಡಿನ ಉತ್ತರ ವಲಯದ ಪೊಲೀಸ್ ಮಹಾ ನಿರ್ದೇಶಕ ಆಸ್ರಾ ಗಾರ್ಗ್​​ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿತ್ತು. ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುತ್ತಾರೆ. ಈ ತನಿಖಾ ತಂಡವು ಇ.ಪಿ.ಗಣೇಶ್ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತದೆ. ತನಿಖೆ ವೇಳೆ ಕುಟುಂಬವು ವಿವಿಧ ಮೂಲಗಳಿಂದ ಸಾಲ ಮಾಡಿರುವ ಸುಳಿವು ಸಿಗುತ್ತದೆ. ಜೊತೆಗೆ ಕುಟುಂಬವು ಭಾರೀ ಮೌಲ್ಯದ ವಿಮಾ ಪಾಲಿಸಿಯನ್ನೂ ಪಡೆದಿರೋದು ಗೊತ್ತಾಗುತ್ತದೆ. ಕುಟುಂಬದ ಆದಾಯದ ಮೂಲ ಹಾಗೂ ವಿಮಾ ಪಾಲಿಸಿಯ ಮೊತ್ತಗಳನ್ನು ಗಮನಿಸಿದಾಗ ತನಿಖಾಧಿಕಾರಿಗಳಿಗೆ ಅನುಮಾನ ಮೂಡಿದೆ.  ಇದೇ ಕಾರಣಕ್ಕೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಇ.ಪಿ.ಗಣೇಶ್ ಇಬ್ಬರು ಮಕ್ಕಳಾದ ಮೋಹನ್ ರಾಜ್ ಮತ್ತು ಹರಿಹರನ್, ವಿಮಾ ಹಣ ಪಡೆಯುವ ಉದ್ದೇಶದಿಂದ ತಂದೆಯನ್ನು ಹತ್ಯೆ ಮಾಡಿರುವ ಸತ್ಯವನ್ನು ಬಾಯಿಬಿಟ್ಟಿದ್ದಾರೆ.

ಇನ್ನು ಹಾವು ಕಚ್ಚಿಸುವ ಮೊದಲು ಆರೋಪಿ ದಿನಕರ್, ಒಂದು ವಾರದ ಹಿಂದೆಯೇ ಹಾವಿನ ವ್ಯವಸ್ಥೆ ಮಾಡಿದ್ದ. ಮೊದಲ ಪ್ರಯತ್ನದಲ್ಲಿ ಇ.ಪಿ.ಗಣೇಶ್ ಅವರ ಕಾಲಿಗೆ ಹಾವು ಕಚ್ಚುವಂತೆ ಮಾಡಲಾಗಿತ್ತು. ಈ ಪ್ರಯತ್ನದಲ್ಲಿ ಅವರು ಯಶಸ್ವಿ ಆಗಲಿಲ್ಲ. ಹೀಗಾಗಿ ಒಂದು ದಿನ ಬೆಳಗಿನ ಜಾವ ಕೈಟ್ ಹಾವನ್ನು ಇಪಿ ಗಣೇಶ್ ಅವರ ಕುತ್ತಿಗೆ ಮೇಲೆ ಬಿಟ್ಟಿದ್ದರು. ಈ ವೇಳೆ ಹಾವು ತಂದೆಯನ್ನ ಕಚ್ಚಿ ಸಾಯಿಸಿದೆ. ಹಾವು ಕಚ್ಚುತ್ತಿದ್ದಂತೆಯೇ, ಬಾಲಾಜಿ ಮತ್ತು ಪ್ರಶಾಂತ್ ಅನ್ನೋರು ವ್ಯವಸ್ಥಿತ ಸಂಚಿನಂತೆ ಮನೆಯೊಳಗೆ ಹಾವನ್ನು ಬಡಿದು ಸಾಯಿಸಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿಸಿದ್ದಾರೆ. ಇದೀಗ ಈ ಪ್ರಕರಣ ಸಂಬಂಧ ಆರೋಪಿಗಳಾದ ಹರಿಹರನ್, ಮೋಹನ್ ರಾಜ್, ಬಾಲಾಜಿ, ಪ್ರಶಾಂತ್, ದಿನಕರನ್, ನವೀನ್​ ಕುಮಾರ್​​ನನ್ನು ಪೊಲೀಸರು ಬಂಧಿಸಲಾಗಿದೆ. ನಮ್ಮ ವಿಶೇಷ ತನಿಖಾ ತಂಡವು ಅತಿದೊಡ್ಡ ಸತ್ಯವನ್ನು ಬಯಲಿಗೆ ಎಳೆದಿದೆ ಎಂದಯ ಅಧಿಕಾರಿ ಶ್ರೀ ಶುಕ್ಲಾ ತಿಳಿಸಿದ್ದಾರೆ.

Shwetha M