ಈಡುಗಾಯಿ ಒಡೆಯಲಿಲ್ಲ ಯಾಕೆ ?- ಚಾಮುಂಡಿ ಬೆಟ್ಟದಲ್ಲಿ ವಿಚಲಿತರಾದ ಸೋಮಣ್ಣ..!

ಈಡುಗಾಯಿ ಒಡೆಯಲಿಲ್ಲ ಯಾಕೆ ?- ಚಾಮುಂಡಿ ಬೆಟ್ಟದಲ್ಲಿ ವಿಚಲಿತರಾದ ಸೋಮಣ್ಣ..!

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪರ ಕಣಕ್ಕಿಳಿದ ಸಚಿವ ಸೋಮಣ್ಣ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸೋಮಣ್ಣ ಶುಭಸಂಕಲ್ಪದೊಂದಿಗೆ ದೇವಸ್ಥಾನದ ಮುಂದೆ ಈಡುಗಾಯಿ ಒಡೆದಿದ್ದಾರೆ. ಆದರೆ, ಒಂದೇ ಏಟಿಗೆ ಒಡೆಯಬೇಕಾಗಿದ್ದ ಈಡುಗಾಯಿ ಒಡೆಯಲೇ ಇಲ್ಲ. ಇದರಿಂದ ಸೋಮಣ್ಣ ಕೆಲ ಕಾಲ ಆತಂಕಗೊಂಡಿದ್ದರು. ಅಪಶಕುನದ ಸಂಕೇತ ಅನ್ನೋ ನೋವಲ್ಲಿದ್ದರು.

ಇದನ್ನೂ ಓದಿ:  ಸಿದ್ದು, ಡಿಕೆಶಿಯನ್ನ ಕಟ್ಟಿ ಹಾಕಲು ಸೋಮಣ್ಣ, ಅಶೋಕ್ ಅಖಾಡಕ್ಕೆ? – ಬಿಜೆಪಿ ಮಾಸ್ಟರ್ ಪ್ಲ್ಯಾನ್ ಏನು?

ಸೋಮಣ್ಣ ದೇಗುಲ ಮುಂಭಾಗದಲ್ಲಿ ಈಡುಗಾಯಿ ಒಡೆದಾಗ ಕಾಯಿ ಒಡೆಯಲೇ ಇಲ್ಲ. ಇದರಿಂದ ಕೆಲ ಹೊತ್ತು ಸೋಮಣ್ಣ ವಿಚಲಿತರಾದಂತೆ ಕಂಡು ಬಂದ್ರು. ಇದನ್ನು ಗಮನಿಸಿದ ಜೊತೆಗಿದ್ದವರು ಮತ್ತೊಮ್ಮೆ ತೆಂಗಿನಕಾಯಿ ತೆಗೆದುಕೊಂಡು ಈಡುಗಾಯಿ ಒಡೆಯಲು ಸಲಹೆ ನೀಡುತ್ತಾರೆ. ಎರಡನೇ ಬಾರಿ ಈಡುಗಾಯಿ ಹೋಳಾದ ಮೇಲೆ ಸೋಮಣ್ಣ ನಿಟ್ಟುಸಿರುಬಿಟ್ರು.

ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ಸೋಮಣ್ಣ ಮೈಸೂರಿಗೆ ಭೇಟಿ ನೀಡಿದರು. ಸೋಮಣ್ಣ ಅವರಿಗೆ ಚಾಮರಾಜನಗರ ಹಾಗೂ ವರುಣಾ ಎರಡೂ ಕಡೆ ಟಿಕೆಟ್ ನೀಡಲಾಗಿದ್ದು, ಹೀಗಾಗಿಯೇ ಬೆಟ್ಟದಲ್ಲಿ ಪೂಜೆ ಮಾಡಿಸಲು ಸೋಮಣ್ಣ ಆಗಮಿಸಿದ್ದರು.

suddiyaana