ಸುಡು ಬಿಸಿಲಿಗೆ ನಿಮ್ಮ ಸ್ಕಿನ್‌ ಕಪ್ಪಾಗಿದ್ಯಾ? – ಈ ಟ್ರಿಕ್ಸ್‌ ಬಳಸಿ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ!

ಸುಡು ಬಿಸಿಲಿಗೆ ನಿಮ್ಮ ಸ್ಕಿನ್‌ ಕಪ್ಪಾಗಿದ್ಯಾ? – ಈ ಟ್ರಿಕ್ಸ್‌ ಬಳಸಿ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ!

ಈಗ ಯಾವ ಕಾಲ ಅಂತ ಹೇಳೋಕೆ ಆಗಲ್ಲ. ಬೆಳಗ್ಗೆ ಚಳಿ, ಮಧ್ಯಾಹ್ನ ಸುಡು ಬಿಸಿಲು, ಸಂಜೆ ಮಳೆ. ಇದ್ರಿಂದಾಗಿ ಅನೇಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸುಡು ಬಿಸಿಲಿಗೆ ಹೊರಗೆ ಹೋಗಿ ಬಂದರೆ ಸಾಕು ಚರ್ಮವೆಲ್ಲ ಬೆಂದು ಹೋಗುತ್ತದೆ. ತ್ವಚೆ ಒಣಗಿದಂತೆ ಕಾಣುತ್ತದೆ. ಬಿಸಿಲಿಗೆ ಚರ್ಮವೆಲ್ಲ ಕಪ್ಪಾಗಿ ಹೋಗುತ್ತಿದೆ. ಇನ್ನು ಸೌಂದರ್ಯ ಪ್ರಿಯರಿಗಂತೂ ತಮ್ಮ ಸುಂದರವಾದ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುವುದು? ಹೇಗೆ ಕಾಳಜಿ ವಹಿಸುವುದು ಅಂತಾ ತಲೆನೋವಾಗಿ ಬಿಟ್ಟಿದೆ. ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ ಅಂತಾ ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ

ಈಗೀಗ ಕೆಲಹೊತ್ತು ಮನೆಯಿಂದ ಹೊರಗೆ ಹೋದರೆ ಸಾಕು ಚರ್ಮ ಕಪ್ಪಾಗುತ್ತದೆ. ಇದಕ್ಕೆ ಕಾರಣ ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಯುವಿ ಕಿರಣಗಳು. ಇವುಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತದೆ.  ಹೀಗಾಗಿ ಕಪ್ಪಾಗುತ್ತದೆ. ಮನೆಯಲ್ಲೇ ನಿಮ್ಮ ಚರ್ಮದ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.

ಚರ್ಮದ ರಕ್ಷಣೆ ಮಾಡುವುದು ಹೇಗೆ?

ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಹಾಗೂ ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರಬೇಕು.

ಎಲೆಕೋಸು ಎಲೆಗಳನ್ನು ಕಪ್ಪಾದ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಬೇಕು. ಇದರಿಂದಾಗಿ ಚರ್ಮ ಕಪ್ಪಾಗುವುದನ್ನು ತಡೆಗಟ್ಟಬಹುದು.

ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿದ್ರೆ ಉತ್ತಮ ಫಲಿತಾಂಶ ಸಿಗುತ್ತದೆ. ಟೊಮೆಟೊ ರಸವನ್ನು ಸೂರ್ಯನ ಬಿಸಿಲಿಗೆ ಕಪ್ಪಾದ ಜಾಗಕ್ಕೆ ಹಚ್ಚಿ ಕಾಲು ಗಂಟೆ ಬಿಡಬೇಕು. 2 ದಿನಕ್ಕೊಮ್ಮೆ ಟೊಮೆಟೊ ರಸವನ್ನು ಈ ರೀತಿ ಹಚ್ಚಿದ್ರೆ ಚರ್ಮ ಕಪ್ಪಾಗುವುದನ್ನು ತಡೆಗಟ್ಟಬಹುದು.

ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಹಳದಿ ಬೆರೆಸಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿಕೊಳ್ಳಬೇಕು.

ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಬೆರೆಸಿದರೆ ತಂಪಾಗುತ್ತದೆ

ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳು ಸ್ವಚ್ಛತೆ ಅಗತ್ಯವಾಗಿದೆ. ಹದ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿ.

Shwetha M