ರಾಮಾಚಾರಿ ಪಾತ್ರದಲ್ಲಿ ‘ಶರ್ಮಿಳಾ’ ಪಾತ್ರದಿಂದ ನಟಿ ಸಿರಿ ಹೊರಬಂದಿದ್ಯಾಕೆ ? – ಚಾರು ತಂಗಿ ಕೂಡಾ ಕಾಣುತ್ತಿಲ್ಲ ಎಂದ ಫ್ಯಾನ್ಸ್..!

ರಾಮಾಚಾರಿ ಪಾತ್ರದಲ್ಲಿ ‘ಶರ್ಮಿಳಾ’ ಪಾತ್ರದಿಂದ ನಟಿ ಸಿರಿ ಹೊರಬಂದಿದ್ಯಾಕೆ ? – ಚಾರು ತಂಗಿ ಕೂಡಾ ಕಾಣುತ್ತಿಲ್ಲ ಎಂದ ಫ್ಯಾನ್ಸ್..!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಕಥೆ ವೇಗ ಪಡೆದುಕೊಂಡಿದೆ. ಸೀರಿಯಲ್ ಸ್ಟೋರಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದರ ಮಧ್ಯೆಯೇ ಧಾರಾವಾಹಿಯಲ್ಲಿ ಶರ್ಮಿಳಾ ಪಾತ್ರ ಮಾಡುತ್ತಿದ್ದ ನಟಿ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಜಯ್‌ಶಂಕರ್ ಎರಡನೇ ಪತ್ನಿಯಾದ ಶರ್ಮಿಳಾ ಪಾತ್ರವನ್ನು ನಟಿ ಸಿರಿ ಮಾಡುತ್ತಿದ್ದರು. ಈ ಪಾತ್ರ ಅನೇಕ ಮಹಿಳಾ ವೀಕ್ಷಕರಿಗೂ ಇಷ್ಟವಾಗಿತ್ತು. ಈಗ ಸಿರಿ ಧಾರಾವಾಹಿಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ: ಭಾಗ್ಯ ಮುಂದೆ ಕಣ್ಣೀರು.. ಶ್ರೇಷ್ಠಾ ಜೊತೆ ಕಲ್ಯಾಣ – ತಾಂಡವ್ ಡಬಲ್ ಗೇಮ್ ಗೆ ವೀಕ್ಷಕರು ಶಾಕ್

ಕನ್ನಡ ಕಿರುತೆರೆಯ ಖ್ಯಾತ ನಟಿ ಸಿರಿ ರಾಮಾಚಾರಿ ಧಾರಾವಾಹಿ ಮೂಲಕ ಅನೇಕ ವರ್ಷಗಳ ನಂತರ ಕಮ್‌ಬ್ಯಾಕ್ ಮಾಡಿದ್ದರು. ಆದರೀಗ, ಸಿರಿ  ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಸಿರಿ ಶರ್ಮಿಳಾ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಸಿರಿ ಗಂಡನಾಗಿ ಜಯಶಂಕರ್  ಪಾತ್ರದಲ್ಲಿ ನಟ ಗುರುದತ್ ನಟಿಸುತ್ತಿದ್ದಾರೆ. ಸಿರಿ ಧಾರಾವಾಹಿಯಿಂದ ಹೊರಬಂದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ದಿಢೀರ್ ಸೀರಿಯಲ್‌ನಿಂದ ಹೊರ ಹೋಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ವೈಯಕ್ತಿಕ ಕಾರಣಕ್ಕೆ ಸೀರಿಯಲ್ ತೊರೆದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಇವರ ಜೊತೆ ಶರ್ಮಿಳಾ ಪುತ್ರಿಯ ಪಾತ್ರ ಕೂಡ ಧಾರಾವಾಹಿಯಲ್ಲಿ ಕಣ್ಮರೆಯಾಗಿದೆ. ಪ್ರಿಯಾಂಕಾ ಸುರೇಶ್, ಚಾರು ತಂಗಿ ಆದ್ಯಾ ಪಾತ್ರ ಮಾಡ್ತಿದ್ದಾರೆ. ಇವರು ನೋಡೋಕೆ ಇಷ್ಟು ಚೆಂದ ಇದ್ದಾರೆ. ಆದ್ರೂ ತಂಗಿ ಪಾತ್ರ ಯಾಕೆ ಮಾಡಬೇಕು ಎಂದು ಫ್ಯಾನ್ಸ್ ಕೇಳಿದ್ದರು. ಇತ್ತೀಚಿಗೆ ಪ್ರಸಾರವಾಗಿರುವ ಎಪಿಸೋಡ್‌ನಲ್ಲಿ ಆದ್ಯಾ ಪಾತ್ರ ಕೂಡಾ ಬಂದಿಲ್ಲ. ತುಂಬಾ ಮುದ್ದಾಗಿರುವ ನಟಿ ಎಲ್ಲಿ ಹೋಗಿದ್ದಾಳೆ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.  ಹೀಗಾಗಿ ಎರಡೂ ಪಾತ್ರಗಳ ನಟಿಯರು ಬದಲಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಪ್ರಾರಂಭದಲ್ಲಿ ಶರ್ಮಿಳಾ ಪಾತ್ರ ತುಂಬಾ ಸೈಲೆಂಟ್ ಆಗಿತ್ತು. ಮೊದಲ ಪತ್ನಿ ಮಾನ್ಯತಾ ಹೇಳಿದ ಹಾಗೆ ಕೇಳಬೇಕಿತ್ತು. ಆದರೆ ಶರ್ಮಿಳಾ ಈಗ ಸ್ವಲ್ಪ ಜೋರಾಗಿರುವಾಗಲೇ ಆ ಪಾತ್ರದಿಂದ ಸಿರಿ ಹೊರಬಂದಿದ್ದಾರೆ.

suddiyaana