ಬಂದ್ರೆ ಬರ್ತಾರೆ.. ಡಿಸಿಎಂ ವಿರುದ್ದ ಸಿಎಂ ಗರಂ – ಡಿಕೆಶಿಗೆ ಕಾಯದೇ ಕಾರ್ಯಕ್ರಮ ಪ್ರಾರಂಭಿಸಿದ ಸಿದ್ದರಾಮಯ್ಯ

ಬಂದ್ರೆ ಬರ್ತಾರೆ.. ಡಿಸಿಎಂ ವಿರುದ್ದ ಸಿಎಂ ಗರಂ – ಡಿಕೆಶಿಗೆ ಕಾಯದೇ ಕಾರ್ಯಕ್ರಮ ಪ್ರಾರಂಭಿಸಿದ ಸಿದ್ದರಾಮಯ್ಯ

ಸಿಎಂ ಸಿದ್ಧರಾಮಯ್ಯ ಡಿಸಿಎಂ ಡಿ. ಕೆ ಶಿವಕುಮಾರ್‌ ವಿರುದ್ಧ ಗರಂ ಆಗಿದ್ದಾರೆ. ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮ ಡಿಸಿಎಂ ಡಿಕೆಶಿ ಸಮಕ್ಕೆ ಸರಿಯಾಗಿ ಬಂದಿಲ್ಲ. ಹೀಗಾಗಿ ಡಿಕೆ ಶಿವಕುಮಾರ್‌ ಬರುವ ಮುನ್ನವೇ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಪಾನ್‌ ತಿಂದ ಬಾಲಕಿ – ಅಯ್ಯಯ್ಯೋ.. ಹೊಟ್ಟೆಯಲ್ಲಿ ಸೃಷ್ಟಿಯಾಯ್ತು ರಂಧ್ರ!

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಭಯೋತ್ಪಾದನಾ ವಿರೋಧಿ ದಿನ ಪ್ರತಿಜ್ಞಾ ವಚನ ಬೋಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.‌ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಿಗದಿ ಆಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಆಹ್ವಾನ ಇತ್ತು. ಆದರೆ ಸಿಎಂ ಸಿದ್ದರಾಮಯ್ಯ ನಿಗದಿತ ಸಮಯಕ್ಕೆ ಬಂದು ಸಭಾಂಗಣದಲ್ಲಿ ಕುಳಿತರೆ, ಡಿಸಿಎಂ ಡಿಕೆಶಿ ಆಗಮಿಸಲಿರಲಿಲ್ಲ. ಈ ಕಾರ್ಯಕ್ರಮ ಬಳಿಕ ಸಿಎಂ ಸಿದ್ದರಾಮಯ್ಯ, ಮಂಗಳೂರು ಪ್ರವಾಸಕ್ಕೆ ಹೋಗಬೇಕು ಅಂತಾ ತರಾತುರಿಯಲ್ಲಿ ಇದ್ದರು. ಈ ಕಾರ್ಯಕ್ರಮ ಆರಂಭವಾಗುವುದು ತಡವಾದರೆ, ಮಂಗಳೂರು ಕಾರ್ಯಕ್ರಮಕ್ಕೂ ತೊಂದರೆ ಆಗುತ್ತೆ ಎಂಬ ಉದ್ದೇಶದಿಂದ ಡಿಸಿಎಂ ಬರುವ ಮುನ್ನವ ಕಾರ್ಯಕ್ರಮ ಪ್ರಾರಂಭಿಸಲು ಮುಂದಾಗಿದ್ದಾರೆ.

ಆಗ, ಡಿಕೆಶಿ ಬರ್ತಾರೆ ಎಂದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ವಿರುದ್ಧ ಸಿಎಂ ಮೊದಲು ಗರಂ ಆದರು. ಬರಲಿ ಬಿಡಿ, ನೀವು ಶುರು ಮಾಡಿ ಎಂದರು.‌ ಆದಾದ ಬಳಿಕ ಮತ್ತೆ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಂದಲೂ ಡಿಸಿಎಂ ಬರ್ತಿದ್ದಾರಂತೆ ಎಂದಾಗ ಸಿಎಂ ಮತ್ತೆ ಗರಂ ಆದರು. ಅಯ್ಯೋ ಕತೆ ಆಯ್ತಲ್ರೀ.. ಬಂದ್ರೆ ಬರ್ತಾರೆ, ಕಮ್ ಆ್ಯಂಡ್ ಜಾಯ್ನ್‌ ಎಂದು ಕಾರ್ಯಕ್ರಮ ಶುರು ಮಾಡಿದ್ದಾರೆ.

Shwetha M