ಟಿಕೆಟ್ ಗೊಂದಲದ ನಡುವೆ ಬಾದಾಮಿಯಲ್ಲಿ ಸಿದ್ದು ಶಕ್ತಿಪ್ರದರ್ಶನ – ಕ್ಷೇತ್ರ ಗೊಂದಲಕ್ಕೆ ಸಿಗುತ್ತಾ ಪರಿಹಾರ?

ಟಿಕೆಟ್ ಗೊಂದಲದ ನಡುವೆ ಬಾದಾಮಿಯಲ್ಲಿ ಸಿದ್ದು ಶಕ್ತಿಪ್ರದರ್ಶನ – ಕ್ಷೇತ್ರ ಗೊಂದಲಕ್ಕೆ ಸಿಗುತ್ತಾ ಪರಿಹಾರ?

ಕ್ಷೇತ್ರ ಗೊಂದಲದ ನಡುವೆಯೇ ವಿಪಕ್ಷನಾಯಕ ಸಿದ್ದರಾಮಯ್ಯ ಇವತ್ತು ಬಾದಾಮಿಯಲ್ಲಿ ಭರ್ಜರಿ ಪವರ್ ಶೋಗೆ ಸಜ್ಜಾಗಿದ್ದಾರೆ. ಸ್ವಕ್ಷೇತ್ರ ಬಾದಾಮಿಯಲ್ಲಿ ನಾನಾ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಭೂಮಿಪೂಜೆ ನೆರವೇರಿಸಲಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಗೊಂದಲದ ನಡುವೆಯೇ ಸಿದ್ದರಾಮಯ್ಯ ಅವರು ಬಾದಾಮಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಉದ್ಘಾಟನೆಗೆ ಸಜ್ಜಾಯ್ತು ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ – ಪ್ರಯಾಣಿಕರಿಗೆ ಏನೆಲ್ಲಾ ಪ್ರಯೋಜನ..?

ಸಿದ್ದರಾಮಯ್ಯ ಬಾದಾಮಿ ಪ್ರವಾಸದ ಹಿಂದೆ ಹತ್ತಾರು ಲೆಕ್ಕಾಚಾರಗಳು ಶುರುವಾಗಿವೆ. ಮುಂದಿನ ಸ್ಪರ್ಧೆಯನ್ನು ಎಲ್ಲಿಂದ ಮಾಡಬೇಕು ಎಂಬ ತೀರ್ಮಾನವನ್ನೂ ಬಾದಾಮಿಯಲ್ಲಿ ತೆಗೆದುಕೊಳ್ಳಬಹುದಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಈಗಾಗಲೇ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸ್ಥಳೀಯರು ಕೂಡ ಒತ್ತಡ ಹಾಕುತ್ತಿದ್ದಾರೆ.    228 ಕೋಟಿ ವೆಚ್ಚದಲ್ಲಿ ಬಾದಾಮಿ, ಕೆರೂರ ಸೇರಿದಂತೆ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, .64 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿ, 100 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅಂದಾಜು 1,000 ಕೋಟಿ ವೆಚ್ಚದಲ್ಲಿನ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಭೂಮಿಪೂಜೆ ನೆರವೇರಿಸಲಾಗುತ್ತಿದೆ.

suddiyaana