ಜನಾರ್ದನನ ಜುಟ್ಟು ದತ್ತನ ಕೈಯಲ್ಲಿ.. – ಪಾಪ ಪೂರ್ಣಿಗೆ ಇದೆಂಥಾ ಸ್ಥಿತಿ?

ಜನಾರ್ದನನ ಜುಟ್ಟು ದತ್ತನ ಕೈಯಲ್ಲಿ.. – ಪಾಪ ಪೂರ್ಣಿಗೆ ಇದೆಂಥಾ ಸ್ಥಿತಿ?

ಸೀರಿಯಲ್ ಅಂದ್ರೆ ರಬ್ಬರ್ ಥರಾ ಎಳೀತಾನೇ ಇರ್ತಾರೆ ಅನ್ನೋ ಮಾತು ಆ ಜಮಾನದಿಂದ ಈ ಜಮಾನದಲ್ಲೂ ಕೇಳಿಬರ್ತಾ ಇರುತ್ತೆ. ಆದ್ರೆ, ಝೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಶ್ರೀರಸ್ತು ಶುಭರಸ್ತು ಧಾರಾವಾಹಿಯಲ್ಲಿ ಎಲ್ಲ ಸತ್ಯ ಬೇಗ ಬೇಗ ರಿವೀಲ್ ಆಗ್ತಿದೆ. ಧಾರಾವಾಹಿ ಮುಗಿಸೋ ಅವಸರವೋ, ಇಲ್ಲ ಕಥೆಗೆ ಟ್ವಿಸ್ಟ್ ಕೊಡೋ ಅರ್ಜೆಂಟೋ, ಅಂತೂ ವೀಕ್ಷಕರಿಗೆ ಮಾತ್ರ ಬೇಗ ಬೇಗ ಸತ್ಯ ಗೊತ್ತಾಗ್ತಿದೆ. ಈಗ ಯಾವ ಸತ್ಯ ಗೊತ್ತಾಗಿದೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್‌ ಕೇಸ್‌ – ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ

ಸೀರಿಯಲ್ ಅಂದ್ಮೇಲೆ ಕಥೆ ಸ್ವಲ್ಪ ಎಳೆಯುತ್ತಾ ಹೋಗೋದು ಕಾಮನ್. ಅದ್ರಲ್ಲೂ ಸೀರಿಯಲ್‌ನಲ್ಲಿ ಸತ್ಯ ಹೊರಬರಲು ವರ್ಷಗಳು ಕಳೆದರೂ ಅಚ್ಚರಿಯೇನಿಲ್ಲ. ಆದ್ರೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮಾತ್ರ ಎಲ್ಲಕ್ಕಿಂತ ಡಿಫರೆಂಟ್. ಇಲ್ಲಿ ಸತ್ಯ ತಿಳಿಯಲು ಹೆಚ್ಚು ದಿನ ಕಾಯೋದೇ ಬೇಕಿಲ್ಲ. ಈಗ ಕಥೆ ವಿಚಾರಕ್ಕೆ ಬರೋಣ,. ಜನಾರ್ದನನ ಆಸ್ತಿಯ ಹಪಾಹಪಿ ಹೆಂಡತಿ ವನಜಾಳಿಗೆ ಗೊತ್ತಿರೋದು ವಿಚಾರ. ಆದ್ರೆ, ಜನಾರ್ದನ ಆಸ್ತಿಗಾಗಿ ಮಾಡಿರೋ ಲಂಪಟ ಬುದ್ದಿ ಮಾಧವನ ಮನೆಯವರಿಗೂ ಗೊತ್ತಾಗಿದೆ. ಆಸ್ತಿಗಾಗಿ ಅನಾಥೆ ಪೂರ್ಣಿಯನ್ನು ಜನಾರ್ದನ ತನ್ನ ಹೆತ್ತ ಮಗಳು ಎಂದು ಹೇಳಿದ್ದ.  ಮುಗ್ಧೆ ಪೂರ್ಣಿ ನಿಜವಾಗಿಯೂ ಜನಾರ್ದನನ ಮಗಳೋ ಅಲ್ಲವೋ ಗೊತ್ತಿಲ್ಲ. ಆದರೆ ಜನಾರ್ದನ ಹೇಳಿದ್ದನ್ನು ನಂಬಿದ್ದಾಳೆ.

ಅಷ್ಟಕ್ಕೂ ಇವಳೇ ತನ್ನ ಮಗಳು ಎಂದು ಬಿಂಬಿಸಲು ಜನಾರ್ದನ ತನ್ನೆಲ್ಲಾ ಬುದ್ದಿವಂತಿಕೆಯನ್ನೂ ಪ್ರದರ್ಶಿಸಿದ್ದಾನೆ. ಆಸ್ತಿಗಾಗಿ ಅಪ್ಪ ಜನಾರ್ದನ ಮತ್ತು ಮಗಳು ದೀಪಿಕಾ ಸೇರಿ ಕುತಂತ್ರ ಮಾಡಿದ್ದಾರೆ. ಇಷ್ಟು ದಿನ ಪೂರ್ಣಿಯನ್ನು ಅನಾಥೆ ಎಂದು ಹೀಯಾಳಿಸುತ್ತಿದ್ದ ದೀಪಿಕಾ ಕೂಡ ಅಕ್ಕ ಅಕ್ಕ ಕ್ಷಮಿಸು ಎನ್ನುತ್ತಾ ನಾಟಕವಾಡುತ್ತಿದ್ದಾಳೆ. ಅದರೆ, ಜನಾರ್ದನನ ಅತಿಯಾದ ಕಾಳಜಿ ಮೇಲೆ ಮಾಧವ ಹಾಗೂ ತುಳಸಿಗೂ ಡೌಟ್ ಶುರುವಾಗಿತ್ತು. ಲಾಯರ್ ಕೂಡಾ​ ಬಂದು ಈಕೆಯೇ ನಿನ್ನ ಮಗಳು ಎಂದು ಸಾಬೀತು ಮಾಡು ಎಂದಾಗ ಈ ವಿಷಯದಲ್ಲಿ ಲಾಯರ್​ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಆ ಸಮಯದಲ್ಲಿ ಸಂಪೂರ್ಣ ಸತ್ಯ ಅಲ್ಲದಿದ್ದರೂ ಕೆಲವೊಂದಷ್ಟನ್ನು ಜನಾರ್ದನ ಬಾಯಿ ಬಿಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.

ಪೂರ್ಣಿಯ ಅಜ್ಜಿಯ ಒಡವೆ ಪೂರ್ಣಿಗೆ ಸೇರಬೇಕು, ಅದಕ್ಕಾಗಿ ಅವಳೇ ಮಗಳು ಎನ್ನುವುದನ್ನು ಸಾಬೀತು ಮಾಡಬೇಕಿದೆ ಎಂದಿದ್ದಾನೆ. ಇಷ್ಟು ಹೇಳುತ್ತಿದ್ದಂತೆಯೇ ಮಾಧವ, ತುಳಸಿಗೆ ಅನುಮಾನ ಶುರುವಾಗಿದೆ. ಮಾತ್ರವಲ್ಲದೇ ಖುದ್ದು ಪತಿಯ ಮೇಲೆ ಪತ್ನಿ ವನಜಾಗೂ ಅನುಮಾನ ಬಂದಿದೆ. ಪೂರ್ಣಿ ನಿಜವಾದ ಮಗಳು ಹೌದೋ ಅಥವಾ ಆಸ್ತಿಗಾಗಿ ಗಂಡ ಹೀಗೆಲ್ಲಾ ಮಾಡುತ್ತಿದ್ದಾನೋ ಎನ್ನುವ ಗೊಂದಲದಲ್ಲಿ ವನಜಾ ಇರುವಾಗಲೇ ದತ್ತನ ಎಂಟ್ರಿಯಾಗಿದೆ. ವಕೀಲರು ದತ್ತನನ್ನು ಕರೆದುಕೊಂಡು ಬಂದಿದ್ದಾರೆ. ಕೊನೆಗೂ ಸತ್ಯ ಬಹಿರಂಗಗೊಂಡಿದೆ. ಆಸ್ತಿಗಾಗಿ ಪೂರ್ಣಿಯನ್ನು ಮಗಳು ಎಂದು ಜನಾರ್ದನ ಹೇಳಿಕೊಂಡಿರುವುದು ಬಯಲಾಗಿದೆ. ಹಣಕ್ಕಾಗಿ ಹೀಗೆ ಮಾಡಿದೆ. ನಿಮಗೆ ಬೇಕಿದ್ರೆ ಎರಡು ಕೋಟಿ ಕೊಡುತ್ತೇನೆ. ನೀವೂ ಬಾಯಿ ಮುಚ್ಚಿಕೊಂಡು ಇದ್ದುಬಿಡಿ ಎಂದು ಜನಾರ್ದನ ದತ್ತಗೂ ಎಚ್ಚರಿಕೆ ನೀಡ್ತಾನೆ. ಇದನ್ನು ಕೇಳಿ ಮಾಧವನ ಮೈಯೆಲ್ಲಾ ಉರಿದು ಹೋಗಿದೆ. ಜನಾರ್ದನ ಕಪಾಳಕ್ಕೆ ಹೊಡೆದಿದ್ದಾನೆ.

ಇನ್ನೊಂದೆಡೆ ಪೂರ್ಣಿಗೆ ನೆಲವೇ ಕುಸಿದ ಅನುಭವವಾಗಿದೆ. ತಾನು ಅನಾಥೆಯೆಂದು ಅಂದುಕೊಂಡಿದ್ದ ಪೂರ್ಣಿಗೆ ಅಪ್ಪ-ಅಮ್ಮ ಸಿಕ್ಕ ಖುಷಿಯಾಗಿತ್ತು. ಇದರಿಂದ ಸಂತೋಷದಲ್ಲಿ ತೇಲಾಡಿದ್ದಳು. ಆದರೆ ಇದೆಲ್ಲವೂ ಸುಳ್ಳು ಎಂಬುದು ಸಾಬೀತಾಗಿದೆ. ಮುಗ್ದೆ ಪೂರ್ಣಿಗೆ ಮೋಸ ಮಾಡಿದ ಜನಾರ್ದನ್ ಗೆ ಮಾಧವ್​ ಕಪಾಳಮೋಕ್ಷ ಮಾಡಿರೋದು ಫ್ಯಾನ್ಸ್ ಗೆ ಖುಷಿಯಾಗಿದೆ. ಒನ್​ ಮೋರ್​, ಒನ್​ ಮೋರ್​ ಎನ್ನುತ್ತಿದ್ದಾರೆ. ಆದ್ರೆ, ಪೂರ್ಣಿ ಅನಾಥೆ ಎಂಬ ವಿಚಾರ ಮುಂದಿಟ್ಟುಕೊಂಡೇ ನಾಟಕವಾಡಿರೋ ಜನಾರ್ದನನಿಗೆ ಮುಂದೆ ಮಾರಿಹಬ್ಬವೇ ಕಾದಿದೆ. ದತ್ತ ಇಲ್ಲೂ ಕೂಡಾ ಮಾಧವನ ಸೊಸೆಯನ್ನು ಜರಾಸಂಧನ ಕೈಯಿಂದ ಪಾರು ಮಾಡಿದ್ದಾನೆ. ಒಟ್ನಲ್ಲಿ, ಧಾರಾವಾಹಿ ಹೊಸ ಕಥೆ, ಹೊಸ ಟ್ವಿಸ್ಟ್ ಜೊತೆ ವೀಕ್ಷಕರಿಗೂ ಬೋರ್ ಹೊಡೆಸದೇ ಚೆನ್ನಾಗಿ ಬರ್ತಿದೆ.

Shwetha M