ರೋಹಿತ್ ODI ನಿವೃತ್ತಿಗೆ ಮುಹೂರ್ತ – ಶ್ರೇಯಸ್ ಅಯ್ಯರ್ ಹೆಗಲಿಗೆ ಏಕದಿನ ಸಾರಥ್ಯ?
3 ಮಾದರಿ ಕ್ರಿಕೆಟ್ ಗೆ 3 ನಾಯಕರು?

ಟೀಂ ಇಂಡಿಯಾದಲ್ಲೀಗ ಬದಲಾವಣೆ ಪರ್ವ ಜೋರಾಗಿದೆ. ದಶಕದಿಂದಲೂ ತಂಡದಲ್ಲಿ ಪಾರುಪತ್ಯ ಮೆರೆದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್ ಅಶ್ವಿನ್ರಂತಹ ಅನುಭವಿ ಆಟಗಾರರ ಯುಗಾಂತ್ಯವಾಗಿದೆ. ಬಿಸಿಸಿಐ ಕೂಡ ಯಂಗ್ಸ್ಟರ್ಸ್ಗೆ ಜಾಸ್ತಿ ಚಾನ್ಸ್ ಕೊಡ್ತಿದೆ. ಈಗಾಗ್ಲೇ ಟೆಸ್ಟ್ ತಂಡಕ್ಕೆ ಶುಭ್ಮನ್ ಗಿಲ್, ಟಿ-20 ತಂಡಕ್ಕೆ ಸೂರ್ಯಕುಮಾರ್ ಯಾದವ್ರನ್ನು ನಾಯಕರಾಗಿ ನೇಮಕ ಮಾಡ್ಲಾಗಿದೆ. ಸದ್ಯ ರೋಹಿತ್ ಶರ್ಮಾ ಏಕದಿನ ತಂಡದ ಕ್ಯಾಪ್ಟನ್ ಆಗಿದ್ದು ಮುಂದಿನ ದಿನಗಳಲ್ಲಿ ಈ ಸ್ಥಾನಕ್ಕೆ ಯಾರು ಸಮರ್ಥ ಅನ್ನೋ ಚರ್ಚೆ ಜೋರಾಗಿದೆ. ಈ ಸ್ಥಾನಕ್ಕೆ ಈಗ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ : ರಿಂಕು ಸಿಂಗ್ ಹೊಸ ಇನ್ನಿಂಗ್ಸ್ ಶುರು – ಸಂಸದೆ ಪ್ರಿಯಾ ಸರೋಜ್ ಜೊತೆ ರಿಂಕು ನಿಶ್ಚಿತಾರ್ಥ
ಈಗಾಗ್ಲೇ ಟಿ-20 ಹಾಗೇ ಟೆಸ್ಟ್ ತಂಡಗಳಿಗೆ ಬೇರೆ ಬೇರೆ ಕ್ಯಾಪ್ಟನ್ಗಳಿದ್ದು ಏಕದಿನಕ್ಕೂ ಹೊಸ ನಾಯಕತ್ವ ವಹಿಸಿಕೊಳ್ಳೋ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭರ್ಜರಿ ಪ್ರದರ್ಶನ ನೀಡಿದ್ರು. ಅಲ್ದೇ 18ನೇ ಸೀಸನ್ ಐಪಿಎಲ್ನಲ್ಲೂ ಪಂಜಾಬ್ ತಂಡವನ್ನ ಫಿನಾಲೆಗೆ ಕರೆದೊಯ್ಯುವಲ್ಲಿ ಯಶಸ್ವಿ ನಾಯಕನಾಗಿದ್ರು. ಪಂಜಾಬ್ ಕಿಂಗ್ಸ್ ಪರ 17 ಪಂದ್ಯಗಳಲ್ಲಿ ಒಟ್ಟು 604 ರನ್ ಗಳಿಸಿ ಗರಿಷ್ಠ ರನ್ ಗಳಿಸಿದವರ ಸಾಲಿಗೆ ಸೇರಿದ್ದಾರೆ. ಅಲ್ದೇ ಬ್ಯಾಟಿಂಗ್ ಮಾತ್ರವಲ್ದೇ ನಾಯಕತ್ವದಿಂದಲೂ ಸುದ್ದಿಯಾಗಿದ್ದಾರೆ. 2014 ರ ನಂತರ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬಾರಿಗೆ ಐಪಿಎಲ್ ಫೈನಲ್ಗೆ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ 2024ರ ಐಪಿಎಲ್ನಲ್ಲಿ ಕೊಲ್ಕತ್ತಾ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಹೀಗಾಗಿ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಗೆ ಬಂದಿದೆ.
ದೇಶೀ ಕ್ರಿಕೆಟ್ನಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಪರ ಇದುವರೆಗೆ 14 ಟೆಸ್ಟ್, 70 ಏಕದಿನ ಮತ್ತು 51 ಟಿ-20ಐ ಪಂದ್ಯಗಳನ್ನು ಆಡಿದ್ದಾರೆ, ದೇಶೀಯ ಕ್ರಿಕೆಟ್ನಲ್ಲಿ ನಾಯಕನಾಗಿ ಮಿಂಚು ಹರಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯಾದ ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಭಾರತದ ಟೆಸ್ಟ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುತ್ತಾರೆಂದು ನಿರೀಕ್ಷೆ ಮಾಡ್ಲಾಗಿತ್ತು. ಆದ್ರೆ ಚಾನ್ಸ್ ಕೊಟ್ಟಿಲ್ಲ. ಇದೀಗ ಏಕದಿನ ಸರಣಿಗೆ ಸೆಲೆಕ್ಟ್ ಮಾಡಿ ರೋಹಿತ್ ನಿವೃತ್ತಿ ಬಳಿಕ ಕ್ಯಾಪ್ಟನ್ಸಿ ನೀಡಬಹುದು ಎನ್ನಲಾಗ್ತಿದೆ.
ಸದ್ಯ ಇಂಗ್ಲೆಂಡ್ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಆಗಸ್ಟ್ನಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ. ಈ ವೇಳೆ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿವೆ. ಈ ಸರಣಿ 17 ಆಗಸ್ಟ್ ರಿಂದ 31 ಆಗಸ್ಟ್ ವರೆಗೆ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್ 17 ರಂದು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಏಕದಿನದ ಸರಣಿಯಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನ ಎನ್ನಲಾಗುತ್ತಿದೆ. ಈ ಹಿನ್ನೆಲೆ ಬಾಂಗ್ಲಾ ಸರಣಿಗೆ ಯಾರಿಗೆ ನಾಯಕತ್ವ ವಹಿಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಟ್ ಗಿಲ್ ಹೆಸರು ಕೂಡ ಚರ್ಚೆಯಲ್ಲಿ ಇರೋದ್ರಿಂದ ಯಾರ ಹೆಸರು ಫೈನಲ್ ಆಗುತ್ತೆ ಕಾದು ನೋಡ್ವೇಕು.