ಅಯ್ಯರ್ ಕ್ಯಾಪ್ಟನ್ ಆದ್ರೆ ಅದೃಷ್ಟನಾ? ನಾಯಕನಾಗಿ ಗೆದ್ದ ಶ್ರೇಯಸ್
3 ಟೀಂ.. 3 ಸಲ ಫೈನಲ್ ಫೈಟ್

ಶ್ರೇಯಸ್ ಅಯ್ಯರ್ ನಾಯಕತ್ವವನ್ನ ಎಲ್ಲರೂ ಮೆಚ್ಚುಕೊಂಡಿದ್ದಾರೆ. ಇವರು ಟೀಂ ಇಂಡಿಯಾ ನಾಯಕತ್ವಕ್ಕೂ ಅರ್ಹರು ಎಂಬ ಮಾತು ಕೇಳಿಬರುತ್ತಿದೆ. ಆದರೆ ಟೀಂ ಇಂಡಿಯಾದಲ್ಲಿ ಮಾತ್ರ ಅವರಿಗೆ ಇನ್ನೂ ಸ್ಥಿರವಾದ ಸ್ಥಾನ ಸಿಗುತ್ತಿಲ್ಲ ಅನ್ನೋದೇ ಬೇಸರದ ಸಂಗತಿ. ಕೇವಲ ಕಳೆದ ಎರಡು ಆವೃತ್ತಿಗಳಲ್ಲಿ ಮಾತ್ರವಲ್ಲ. ಶ್ರೇಯಸ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೂ ಮುನ್ನಡೆಸಿದ್ದರು. 2019 ಮತ್ತು 2020 ರಲ್ಲಿ ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಡೆಲ್ಲಿ ಪಡೆ ಪ್ಲೇಆಫ್ಗೇರಿತ್ತು. ಅದರಲ್ಲೂ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್ಗೇರಿಸುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್, ಕೆಕೆಆರ್ ಪಡೆಗೆ 10 ವರ್ಷಗಳ ಬಳಿಕ ಟ್ರೋಫಿ ಗೆದ್ದು ಕೊಡುವಲ್ಲಿ ಯಶಸ್ವಿಯಾದರು. ಚೊಚ್ಚಲ ಸೀಸನ್ನಲ್ಲೇ ಪಂಜಾಬ್ ಪಡೆಯನ್ನು ಪ್ಲೇಆಫ್ಗೆ ತಲುಪಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಏಕೈಕ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ. ಏನೂ ಅಲ್ಲದ ತಂಡಗಳ ನಾಯಕರಾಗಿ ಮೂರನೇ ಬಾರಿಗೆ ಫೈನಲ್ ಗೇರಿಸಿದ ಸಾಧನೆ ಅವರದ್ದು. ಹೀಗಾಗಿಯೇ ಅವರು ಐಪಿಎಲ್ ನ ಯಶಸ್ವೀ ಕ್ಯಾಪ್ಟನ್ ಎಂದು ನಿಸ್ಸಂಶಯವಾಗಿ ಹೇಳಬಹುದು.
ಶ್ರೇಯಸ್ ಅಯ್ಯರ್, ನಾಯಕನಾದ್ರೆ ಆ ತಂಡದ ಲಕ್ ಕೂಡ ಬದಲಾಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಅಷ್ಟರ ಮಟ್ಟಿಗೆ ತನ್ನ ಆಟದ ಮೂಲಕ ಆ ನಂಬಿಕೆ ಉಳಿಸಿಕೊಂಡಿದ್ದಾರೆ ಶ್ರೇಯಸ್ ಅಯ್ಯರ್. ಕ್ರೀಸ್ನಲ್ಲಿ ಬ್ಯಾಟ್ ಹಿಡಿದು ಹೆಚ್ಚು ಸದ್ದು ಮಾಡಿದ ಶ್ರೇಯಸ್ ಅಯ್ಯರ್, ನಾಯಕನಾಗಿ ತಾನೇನು ಅನ್ನೋದನ್ನು ಸಾಕಷ್ಟು ಬಾರಿ ಫ್ರೂವ್ ಮಾಡಿದ್ದಾರೆ. ಹಿಂದೆಂದೂ ಕಾಣದ ಸಕ್ಸಸ್ನ್ನ ತಾನು ನಾಯಕನಾದ ತಂಡಕ್ಕೆ ನೀಡುತ್ತಿದ್ದಾರೆ. ತಾನೋರ್ವ ಬೆಸ್ಟ್ ಕ್ಯಾಪ್ಟನ್ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.
2025 ರಿಂದ ಐಪಿಎಲ್ ಆಡುತ್ತಿರೋ ಶ್ರೇಯಸ್ ಅಯ್ಯರ್ ಇಲ್ಲಿ ತನಕ 132 ಐಪಿಎಲ್ ಪಂದ್ಯಗಳನ್ನ ಆಡಿದ್ದು. ಐಪಿಎಲ್ನಲ್ಲಿ 3730 ರನ್ಗಳಿಸಿದ್ದಾರೆ.
ಪಂಜಾಬ್ ಫೈನಲ್ ಎಂಟ್ರಿಗೆ ಶ್ರೇಯಸ್ ಕಾರಣ
ಈ ಸಲ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತ ಪಂಜಾಬ್ ಮುಂಬೈ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಾದಾಟ ನಡೆಸ್ತು. ಇಲ್ಲಿ ಮುಂಬೈನೇ ಗೆಲ್ಲುತ್ತೇ ಅಂತ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಆಗಿದ್ದೇ ಬೇರೆ. ಕೇವಲ 41 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಬರೊಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಬರೊಬ್ಬರಿ ಅಜೇಯ 87 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪ್ರಮುಖವಾಗಿ ಪಂದ್ಯದಲ್ಲಿ ಮುಂಬೈ ವೇಗಿ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಯ್ಯರ್ ಪ್ರದರ್ಶಿಸಿದ ಕೆಚ್ಚೆದೆಯ ಬ್ಯಾಟಿಂಗ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಬುಮ್ರಾ ಎಸೆದ ಮಾರಕ ಯಾರ್ಕರ್ ಗಳನ್ನು ಶ್ರೇಯಸ್ ಅಯ್ಯರ್ ಅತ್ಯಂತ ಚಾಕಚಕ್ಯತೆಯಿಂದ ಬೌಂಡರಿಗೆ ಅಟ್ಟಿದರು. ಇದು ಶ್ರೇಯಸ್ ಅವರ ತಾಕತ್ತು ಏನು ಅನ್ನೋದನ್ನ ತೋರಿಸಿತ್ತು. ಒಟ್ನಲ್ಲಿ ಐಪಿಎಲ್ನಲ್ಲಿ ತಂಡವನ್ನ ಯಶಸ್ಸಿಯಾಗಿ ಮುನ್ನೆಡೆಸುವುದರ ಜೊತೆಗೆ ತನ್ನ ಆಟದ ಮೂಲಕವೇ ತಂಡಕ್ಕೆ ಕೊಡುಗೆಯನ್ನ ನೀಡಿ ಒಬ್ಬ ಸೂಪರ್ ಡೂಪರ್ ನಾಯಕನಾಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ.