ತುಳಸಿ ಮಾಧವನ ಮದುವೆಯಿಂದ ಎರಡೂ ಮನೆಗಳಲ್ಲಿ ಕೋಲಾಹಲ – ಕೊನೆಯಾಗುತ್ತಾ ಸಮರ್ಥ್ ಸಿರಿ ದಾಂಪತ್ಯ?

ತುಳಸಿ ಮಾಧವನ ಮದುವೆಯಿಂದ ಎರಡೂ ಮನೆಗಳಲ್ಲಿ ಕೋಲಾಹಲ – ಕೊನೆಯಾಗುತ್ತಾ ಸಮರ್ಥ್ ಸಿರಿ ದಾಂಪತ್ಯ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈಗ ಸಂಬಂಧಗಳ ಬೆಸುಗೆ ಶುರುವಾಗಿದೆ. ಸೀರಿಯಲ್ ನ ಪ್ರಮುಖ ಪಾತ್ರಧಾರಿಗಳಾದ ಮಾಧವ್ ಮತ್ತು ತುಳಸಿ ಮದುವೆಯಾಗಿದ್ದಾರೆ. ಮಾಧವ್ ಮತ್ತು ತುಳಸಿ ಮದುವೆಯಾಗಿರುವ ಸುದ್ದಿ ಕೇಳಿ ಮಕ್ಕಳು ಶಾಕ್ ಆಗಿದ್ದಾರೆ. ಮಗನನ್ನು ತುಂಬಾ ಪ್ರೀತಿಸುತ್ತಿದ್ದ, ಮಗನೇ ತನ್ನ ಜೀವವೆಂದು ತಿಳಿದುಕೊಂಡಿದ್ದ ತುಳಸಿಗೆ ಮಗನ ಕಟು ಮಾತಿನಿಂದ ನೋವಾಗಿದೆ. ತುಳಸಿ ಮಗ ಮದುವೆಯನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಮಲಯಾಳಂ ನಟ ದುಲ್ಕರ್ ಸಲ್ಮಾನ್‌ಗೆ ರಾಜ್ ಬಿ ಶೆಟ್ಟಿ ಡೈರೆಕ್ಟರ್ – ಸುದ್ದಿ ಕೇಳಿ ಖುಷಿಯಾದ ಫ್ಯಾನ್ಸ್

ಮಾಧವ್ ಜೊತೆ ಮದುವೆ ಬೇಡ ಅಂತ ಸಮರ್ಥ್ ಎಷ್ಟೇ ಹೇಳಿದ್ರೂ ಕೂಡ ಈಗ ತುಳಸಿ, ಮಾಧವ್ ಮದುವೆ ನಡೆದಿದೆ. ತುಳಸಿಗೆ ತಾಳಿ ಕಟ್ಟಿದ ಮಾಧವ್ ಗೂ ಎರಡನೇ ಮದುವೆ ಸವಾಲ್ ಆಗಿದೆ. ಫೇಮಸ್ ಶೆಫ್ ಆಗಿರುವ ಮಾಧವ್ ಮೊದಲೇ ಮಕ್ಕಳೆಂದರೆ ಏನೋ ಹೆದರಿಕೆಯಲ್ಲಿಯೇ ಇರುತ್ತಾರೆ. ಈಗಂತೂ ಎರಡನೇ ಮದುವೆಯೆಂದರೆ ಕೇಳಬೇಕಾ. ಮಾಧವ್ ಮನೆಯವರು ಈ ಮದುವೆಯನ್ನು ಒಪ್ಪಲು ರೆಡಿ ಇಲ್ಲ.

ಮಾಧವ್ ಜೊತೆ ಮದುವೆ ಬೇಡ ಅಂತ ಸಮರ್ಥ್ ಎಷ್ಟೇ ಹೇಳಿದ್ರೂ ಕೂಡ ಈಗ ತುಳಸಿ, ಮಾಧವ್ ಮದುವೆ ನಡೆದಿದೆ. ಸಮರ್ಥ್ ಇನ್ಮುಂದೆ ನೀನು ನನ್ನ ತಾಯಿ ಅಲ್ಲ ಅಂತ ಹೇಳಿದ್ದಾನೆ. ಈ ಹಿಂದೆ ಸಮರ್ಥ್ ತಾಯಿಗೆ ಮಾಧವ್ ಜೊತೆ ಮದುವೆ ಬೇಡ ಅಂತ ಸಾಕಷ್ಟು ಬಾರಿ ಹೇಳಿದ್ದನು. ತನ್ನ ತಾಯಿಗೆ ಏಕಾಂಗಿತನ ಕಾಡತ್ತೆ, ಅವಳಿಗೆ ಮದುವೆ ಅಗತ್ಯತೆ ಇದೆ ಎನ್ನೋದು ಸಮರ್ಥ್ ಗೆ ಅರ್ಥ ಆಗಲೇ ಇಲ್ಲ. ತುಳಸಿಯನ್ನು ದತ್ತ ತನ್ನ ಮಗನಿಗೆ ಪತ್ನಿಯಾಗಿ ತಂದುಕೊಂಡಿದ್ದ. ಮಗ ಸತ್ತ ಬಳಿಕ ಸೊಸೆಯನ್ನು ಅವನೇ ಮಾಧವನಿಗೆ ಧಾರೆ ಎರೆದು ಕೊಟ್ಟಿದ್ದಾನೆ. ಇದು ನಿಜಕ್ಕೂ ತುಂಬ ಭಾವನಾತ್ಮಕ ಕ್ಷಣ ಎನ್ನಬಹುದು.

ನನ್ನ ಸೊಸೆಗೆ ಇನ್ನೂ ವಯಸ್ಸಿದೆ, ಅವಳಿಗೆ ಜೊತೆ ಬೇಕು, ಸಂಗಾತಿಯ ಅವಶ್ಯಕತೆ ಇದೆ ಅಂತ ದತ್ತ ಸೊಸೆಗೆ ಇನ್ನೊಂದು ಮದುವೆ ಮಾಡಿದ್ದಾನೆ. ಗಂಡ ಸತ್ತ ನಂತರ ಮಗ ಸಮರ್ಥ್, ಸಂಧ್ಯಾ, ಮಾವ ದತ್ತನ ಜೊತೆಗೆ ತುಳಸಿ ವಾಸ ಮಾಡುತ್ತಿದ್ದಳು. ಯಾವಾಗ ಅವಳಿಗೆ ಮಾಧವನ ಸ್ನೇಹ ಸಿಕ್ಕಿತೋ ಅವಳು ನಗಲು ಆರಂಭಿಸಿದ್ದಳು. ಇದು ದತ್ತ ಹಾಗೂ ಸಮರ್ಥ್ ಪತ್ನಿ ಸಿರಿಗೆ ಅರ್ಥ ಆಗಿತ್ತು. ಇನ್ನೊಂದು ಕಡೆ ಮಾಧವ್ ಮನೆಯಲ್ಲಿ ಅವನ ಮಕ್ಕಳೇ ಅವರಿಗೆ ಶತ್ರುಗಳ ರೀತಿ ಇದ್ದಾರೆ. ಮಾಧವ್ ಮಗ ಅಭಿಷೇಕ್ ಮದುವೆ ದಿನವೇ ಮಾಧವ್ ಮದುವೆಯಾಗಿದ್ದಾನೆ. ಇದು ಮಾಧವ್ ಕುಟುಂಬಕ್ಕೆ ಶಾಕ್ ನೀಡಿದೆ. ಒಂದು ಕಡೆ ಮಾಧವ್ ಮನೆಯಲ್ಲಿ ಕೂಡ ಈ ಮದುವೆ ಒಪ್ಪಿಕೊಳ್ಳಲ್ಲ, ಆ ಕಡೆ ತುಳಸಿ ಮಗ ಕೂಡ ಮದುವೆ ಒಪ್ಪಲ್ಲ. ಈ ನಡುವೆ ಸಿರಿ ಮತ್ತು ಸಮರ್ಥ್ ನಡುವೆ ತುಳಸಿ ಮಾಧವನ ಮದುವೆ ವಿಚಾರವಾಗಿ ಮನಸ್ತಾಪ ಉಂಟಾಗಿದೆ. ಇದೀಗ ಸಮರ್ಥ್ ತನ್ನ ಪತ್ನಿ ಸಿರಿ ಬಳಿ ಡಿವೋರ್ಸ್ ಕೇಳಿದ್ದಾನೆ. ನೀನು ಮಾಡಿರುವ ತಪ್ಪಿಗೆ ಶಿಕ್ಷೆಯಾಗುತ್ತೆ ಎಂದಿದ್ದಾನೆ. ಆಗ ಸಿರಿ ನನಗೂ ಕೋಪ ಬರ್ತಿದೆ. ಅಮ್ಮನನ್ನ ನೋಡಿ ತಾಳ್ಮೆ ಕಲಿತಿದ್ದೇನೆ. ಅಷ್ಟು ವರ್ಷ ಪ್ರೀತಿಸಿ ಮನೆಯವರಿಗೂ ಹೇಳದೆ ಮದುವೆಯಾಗಿದ್ದು ಇದಕ್ಕಾ ಎಂದು ಪ್ರಶ್ನಿಸಿದ್ದಾಳೆ. ಇಷ್ಟಾದ್ರೂ ನೀನು ನನ್ನನ್ನೇ ಆರೋಪಿಸುತ್ತಿದ್ದೀಯಾ ಎಂದಿದ್ದಾನೆ. ಸ್ನೇಹ, ನಂಬಿಕೆ, ಗೌರವ ಇದ್ದರೆ ಸಂಸಾರ ಮಾಡೋಕೆ ಸಾಕು ಎಂದು ಸಿರಿ ಹೇಳಿದಾಗ ನಿನ್ನ ಮೇಲೆ ನನಗೆ ಇದ್ಯಾವುದು ಉಳಿದುಕೊಂಡಿಲ್ಲ. ಮುಂದೆ ಏನು ಮಾಡಬೇಕು ಯೋಚನೆ ಮಾಡು ಅಂತಾ ಹೇಳಿ ಅಲ್ಲಿಂದ ಹೊರಟಿದ್ದಾನೆ. ಈ ವೇಳೆ ಸಿರಿ ತಂದೆ ಅದನ್ನೆಲ್ಲಾ ಕೇಳಿಸಿಕೊಂಡಿದ್ದು ತಂದೆಯನ್ನ ತಬ್ಬಿ ಕಣ್ಣೀರಿಟ್ಟಿದ್ದಾಳೆ.

ತುಳಸಿ ಮಾಧವ ಮದುವೆಯಾಗಿ ಬಂದಿದ್ದನ್ನ ನೋಡಿದ ಶಾರ್ವರಿ ತಲೆ ಸುತ್ತಿ ಬಿದ್ದವಳಂತೆ ನಾಟಕ ಮಾಡಿದ್ದಾರೆ. ಇದನ್ನ ನೋಡಿದ ತುಳಸಿ ಚೆನ್ನಾಗಿದ್ದ ಮನೆಯನ್ನ ನಾನು ಹಾಳು ಮಾಡುತ್ತಿದ್ದೇನಾ ಎಂದು ನೊಂದುಕೊಳ್ಳುತ್ತಾಳೆ. ಮದುವೆಯಿಂದಾಗಿ ಮಗನ ಮದುವೆ ಮುರಿದು ಬಿದ್ದಿದ್ದು ಮನಸ್ಸುಗಳು ಕೂಡ ಒಡೆದು ಹೋಗಿವೆ. ಹೀಗಾಗಿ ಮುಂದೆ ಧಾರಾವಾಹಿ ಯಾವ ತಿರುವು ಪಡೆಯುತ್ತದೆಯೋ ಕಾದು ನೋಡಬೇಕು.

suddiyaana