ವರುಣಾದಲ್ಲಿ ‘ಸಿದ್ದು’ ಪರ ಶಿವಣ್ಣ ಪ್ರಚಾರ – ದೇವದುರ್ಗದಲ್ಲಿ ‘ಕಿಚ್ಚ’ನ ನೋಡಲು ಬಂದವರಿಗೆ ಲಾಠಿರುಚಿ

ವರುಣಾದಲ್ಲಿ ‘ಸಿದ್ದು’ ಪರ ಶಿವಣ್ಣ ಪ್ರಚಾರ – ದೇವದುರ್ಗದಲ್ಲಿ ‘ಕಿಚ್ಚ’ನ ನೋಡಲು ಬಂದವರಿಗೆ ಲಾಠಿರುಚಿ

ವರುಣಕ್ಷೇತ್ರದಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಚಾರ ನಡೆಸಿದರು. ವರುಣ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಶಿವಣ್ಣ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ರೋಡ್ ಶೋ ಮೂಲಕ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದರು. ನಂಜನಗೂಡು ತಾಲೂಕಿನ ಗೊದ್ದನಪುರ ಹಾಗೂ ಮರಳೂರಿನಲ್ಲಿ ರೋಡ್ ಶೋ ನಡೆಸಿದರು. ಬಿರುಬಿಸಿಲಿನಲ್ಲೂ ಶಿವಣ್ಣನ ನೋಡಲು ಅಭಿಮಾನಿಗಳು ಸೇರಿದ್ದರು.

ಇದನ್ನೂ ಓದಿ: ಮಾವನ ಪರ ಅಖಾಡಕ್ಕಿಳಿದ ಸೊಸೆ – ಮನೆ ಮನೆಗೂ ತೆರಳಿ ಮತಯಾಚಿಸಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

ಇನ್ನು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿರುವ ನಟ ಕಿಚ್ಚ ಸುದೀಪ್ ದೇವದುರ್ಗಕ್ಕೆ ಆಗಮಿಸಿದರು. ಹೆಲಿಕಾಪ್ಟರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಒಳ ನುಗ್ಗಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಬೀಸಿದರು. ಆಗ ಅಭಿಮಾನಿಗಳು ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಬೇಕಾಯ್ತು. ನಂತರ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದರು.

suddiyaana