ನಿಮ್ಮ ಜಾತಕದಲ್ಲಿ ಸಾಡೇಸಾತಿ ಶನಿ ದೋಷ ಇದ್ಯಾ? – ಈ ರೀತಿಯಾಗಿ ಪೂಜೆ ಮಾಡಿ, ಆಮೇಲೆ ರಿಸಲ್ಟ್ ನೋಡಿ

ನಿಮ್ಮ ಜಾತಕದಲ್ಲಿ ಸಾಡೇಸಾತಿ ಶನಿ ದೋಷ ಇದ್ಯಾ? – ಈ ರೀತಿಯಾಗಿ ಪೂಜೆ ಮಾಡಿ, ಆಮೇಲೆ ರಿಸಲ್ಟ್ ನೋಡಿ

ಜ್ಯೋತಿಷ್ಯಶಾಸ್ತ್ರದಲ್ಲಿ  ಶನಿ ಗ್ರಹವನ್ನು ಅತ್ಯಂತ ಪ್ರಭಾವಶಾಲಿ ಗ್ರಹಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ವ್ಯಕ್ತಿಯ ಜನ್ಮ ಜಾತಕದಲ್ಲಿ ಶನಿಯ ಸ್ಥಿತಿ, ಅದರ ಬಲ ಹಾಗೂ ಚಲನೆಯನ್ನು ಅವಲಂಬಿಸಿ ಜೀವನದಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಶನಿ ದೇವರು ಸೂರ್ಯನ ಪುತ್ರ ಹಾಗೂ ಯಮನ ಹಿರಿಯ ಸಹೋದರರಾಗಿದ್ದಾರೆ. ಶನಿಯನ್ನು ಕಠಿಣ ಫಲಗಳನ್ನು ನೀಡುವ ಗ್ರಹವೆಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ಅದು ನ್ಯಾಯದ ಸಂಕೇತವೆಂದು ಶಾಸ್ತ್ರಗಳು ವಿವರಿಸುತ್ತವೆ.

ಜಾತಕದಲ್ಲಿ ಶನಿ ದುರ್ಬಲವಾಗಿದ್ದರೆ, ನೀಚ ಸ್ಥಾನದಲ್ಲಿದ್ದರೆ ಅಥವಾ ಹಿಮ್ಮುಖ ಚಲನೆಯಲ್ಲಿ ಇದ್ದರೆ ಶನಿ ದೋಷ, ಶನಿ ಸಾಡೇಸಾತಿ ಅಥವಾ ಶನಿ ಮಹಾದಶೆಯಂತಹ ಪ್ರಭಾವಗಳು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಜ್ಯೋತಿಷಿಗಳು  ಹೇಳುತ್ತಾರೆ.

ಶನಿ ದೋಷ ನಿವಾರಣೆಗೆ ಶನಿ ಸ್ತೋತ್ರ ಪಠಣ

ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಧಾರ್ಮಿಕ ವಿಧಾನಗಳನ್ನು ಪಾಲಿಸುವುದು ಉತ್ತಮ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಶನಿವಾರದಂದು ರಾಜ ದಶರಥ ಕೃತ ಶನಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದು ಶನಿದೇವರ ಅನುಗ್ರಹವನ್ನು ಪಡೆಯಲು ಸಹಾಯಕವಾಗುತ್ತದೆ ಎಂದು ನಂಬಿಕೆ ಇದೆ.

  ಕಪ್ಪು ಎಳ್ಳು  

ಅದೇ ರೀತಿ ಪ್ರತಿದಿನ ಶಿವನಿಗೆ ಹಸಿ ಹಾಲು ಮತ್ತು ಕಪ್ಪು ಎಳ್ಳನ್ನು ಅರ್ಪಿಸುವುದೂ ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಶನಿ ದೋಷದ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ.

ದಾನಧರ್ಮ 

ಶನಿ ಸಂಕ್ರಮಣ ಕಾಲದಲ್ಲಿ ಅಗತ್ಯವಿರುವವರಿಗೆ ಕಪ್ಪು ಎಳ್ಳುಂಡೆ ದಾನ ಮಾಡುವುದು ಹಾಗೂ ಕಾಳಿ ದೇವಿಯನ್ನು ಪೂಜಿಸುವುದು ಕೂಡ ಮಂಗಳಕರವೆಂದು ಹೇಳಲಾಗಿದೆ.

ಶನಿ ಸಾಡೇಸಾತಿ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು

ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಸಾಡೇಸಾತಿ ಅಥವಾ ಶನಿಯ ಧೈಯಾ ಅವಧಿಯಲ್ಲಿ ಇರುವವರು ಮದ್ಯಪಾನ ಮತ್ತು ಮಾಂಸಾಹಾರದಿಂದ ದೂರವಿರುವುದು ಒಳಿತು ಎಂದು ಸಲಹೆ ನೀಡಲಾಗುತ್ತದೆ. ಇದು ಶನಿಯ ದುಷ್ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ನಂಬಿಕೆ ಇದೆ. ಇದಲ್ಲದೆ ಪ್ರತಿದಿನ ಸಂಜೆ, ವಿಶೇಷವಾಗಿ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿದೇವರಿಗೆ ಕೆಂಪು ಚಂದನದ ಮಾಲೆಯನ್ನು ಸಮರ್ಪಿಸುವುದೂ ಶುಭಕರವೆಂದು ಹೇಳಲಾಗುತ್ತದೆ.

Kishor KV

Leave a Reply

Your email address will not be published. Required fields are marked *