‘ಆದಿಪುರುಷ್ ತಂಡದವರನ್ನು ಸುಡಬೇಕು’ – ಸಿನಿಮಾ ನೋಡಿ ಆಕ್ರೋಶಗೊಂಡ ‘ಶಕ್ತಿಮಾನ್’

‘ಆದಿಪುರುಷ್ ತಂಡದವರನ್ನು ಸುಡಬೇಕು’ – ಸಿನಿಮಾ ನೋಡಿ ಆಕ್ರೋಶಗೊಂಡ  ‘ಶಕ್ತಿಮಾನ್’

‘ಆದಿಪುರುಷ್’ ಸಿನಿಮಾದ ವಿರುದ್ಧ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕ ಕಾರಣಗಳಿಂದ ಈಗಾಗಲೇ ‘ಆದಿಪುರುಷ್’ ಸಿನಿಮಾ ವಿವಾದಕ್ಕೆ ಗುರಿಯಾಗಿದೆ. ಈಗಾಗಲೇ ನೇಪಾಳದಲ್ಲಿ ಆದಿಪುರುಷ್ ಸೇರಿದಂತೆ 17 ಥಿಯೆಟರ್‌ಗಳಲ್ಲಿ ಹಿಂದಿ ಸಿನಿಮಾಗಳ ಶೋ ರದ್ದು ಮಾಡಲಾಗಿದೆ.   ಚಿತ್ರವನ್ನ ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಕೂಡ ಬರೆಯಲಾಗಿದೆ. ಜನಸಾಮಾನ್ಯರು ಮಾತ್ರವಲ್ಲ, ಇದೀಗ ಈ ಸಿನಿಮಾ ನೋಡಿದ ಸೆಲೆಬ್ರಿಟಿಗಳಲ್ಲಿ ಕೆಲವರು ಚಿತ್ರದ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶಕ್ತಿಮಾನ್’ ಖ್ಯಾತಿಯ ನಟ ಮುಖೇಶ್ ಖನ್ನಾ ಕೂಡಾ ತಮ್ಮ ಅನಿಸಿಕೆಯನ್ನು ಆಕ್ರೋಶದ ಮೂಲಕ ಹೊರಹಾಕಿದ್ದಾರೆ. ‘ಆದಿಪುರುಷ್ ತಂಡದವರನ್ನು ಸುಡಬೇಕು’ ಎಂದು ಹೇಳುವ ಮೂಲಕ ಮುಖೇಶ್ ಖನ್ನಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಆದಿಪುರುಷ್ ಚಿತ್ರದ ಬ್ಯಾನ್​ಗೆ ವ್ಯಾಪಕ ಆಗ್ರಹ! – ಭಾರತದಲ್ಲೂ ಬ್ಯಾನ್‌ ಮಾಡಲು ಪ್ರಧಾನಿ ಮೋದಿಗೆ ಪತ್ರ

‘ಆದಿಪುರುಷ್’  ಚಿತ್ರದ ನಿರ್ದೇಶಕ ಓಂ ರಾವತ್ ಅವರನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಭಾಷಣೆ ಬರೆದ ಮನೋಜ್ ಮುಂತಶೀರ್ ಅವರ ವಿರುದ್ಧವೂ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ‘ಶಕ್ತಿಮಾನ್’ ಖ್ಯಾತಿಯ ನಟ ಮುಖೇಶ್ ಖನ್ನಾ ಕೂಡಾ ಆಕ್ರೋಶಗೊಂಡು ಕಟುವಾಗಿ ಟೀಕಿಸಿದ್ದಾರೆ. ಆಕ್ರೋಶಭರಿತವಾಗಿ ಮಾತನಾಡಿರುವ ನಟ ಮುಖೇಶ್ ಖನ್ನಾ, ‘ಆದಿಪುರುಷ್ ತಂಡದವರನ್ನು ಸುಡಬೇಕು’ ಎಂದಿದ್ದಾರೆ. ಈ ಸಿನಿಮಾ ಸಂಪೂರ್ಣ ಕಳಪೆ ಆಗಿದೆ. ಇಂಥಾ ಸಿನಿಮಾ ಮಾಡಿದವರನ್ನು ಕ್ಷಮಿಸಬಾರದು. ಇವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು. ಇಷ್ಟೆಲ್ಲಾ ಟೀಕೆ ಎದುರಾದಾಗ ಅವರು ಮುಖ ಮುಚ್ಚಿಕೊಳ್ಳಬೇಕಿತ್ತು. ಆದರೆ ಅವರು ಮುಂದೆ ಬಂದು ಸಮರ್ಥನೆ ನೀಡುತ್ತಿದ್ದಾರೆ. ಸನಾತನ ಧರ್ಮಕ್ಕಾಗಿ ಇದನ್ನೆಲ್ಲಾ ಮಾಡಿರುವುದಾಗಿ ಅವರ ಹೇಳುತ್ತಿದ್ದಾರೆ. ನಮ್ಮ ಸನಾತನ ಧರ್ಮಕ್ಕಿಂತಲೂ ನಿನ್ನ ಸನಾತನ ಧರ್ಮ ಭಿನ್ನವಾಗಿದೆಯಾ? ವಾಲ್ಮೀಕಿಯ ರಾಮಾಯಣ ಇದೆ, ತುಳಸಿದಾಸರ ರಾಮಾಯಣ ಇದೆ. ಇದು ತಮ್ಮದೇ ರಾಮಾಯಣ ಎಂದು ಈ ತಂಡದವರು ಹೇಳುತ್ತಿದ್ದಾರೆ’ ಎಂದಿದ್ದಾರೆ ಮುಖೇಶ್ ಖನ್ನಾ.

ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ತಗ್ಗುತ್ತಿದೆ. ಆದರೆ ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಇನ್ನು ನಟ ಪ್ರಭಾಸ್ ರಾಮನ ಪಾತ್ರದಿಂದಾಗಿ ಈ ಬಾರಿಯಾದರೂ ಕಮ್‌ಬ್ಯಾಕ್ ಮಾಡುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಈ ಚಿತ್ರ ಕೂಡಾ ನಟ ಪ್ರಭಾಸ್ ಗೆ ಹೇಳಿಕೊಳ್ಳುವಂಥಾ ಇಮೇಜ್ ತಂದುಕೊಟ್ಟಿಲ್ಲ ಎನ್ನಲಾಗುತ್ತಿದೆ.

suddiyaana