ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹೆಲಿಕಾಪ್ಟರ್ ನಲ್ಲಿ ಹಾರಿದ ಸಿಹಿ – ರಾಮ್ ನೇ ಬಾಸ್ ಅನ್ನೋದು ಸೀತಾಗೆ ಗೊತ್ತಾಯ್ತಾ?

ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹೆಲಿಕಾಪ್ಟರ್ ನಲ್ಲಿ ಹಾರಿದ ಸಿಹಿ – ರಾಮ್ ನೇ ಬಾಸ್ ಅನ್ನೋದು ಸೀತಾಗೆ ಗೊತ್ತಾಯ್ತಾ?

ಧಾರಾವಾಹಿಗಳೇ ಹಾಗೆ. ಒಂದು ಸಲ ನೋಡೋಕೆ ಶುರು ಮಾಡಿದ್ರೆ ಮುಂದೆ ಕಥೆ ಏನಾಗುತ್ತದೆ ಎಂದು ನೋಡುತ್ತಲೇ ಇರುತ್ತಾರೆ. ಒಂದು ನಿಮಿಷ ತಡವಾದರೂ ಕೂಡ ಎಲ್ಲಿ ಏನಾಯ್ತೋ ಅಂತಾ ಚಡಪಡಿಸುತ್ತಾರೆ. ಅದರಲ್ಲೂ ಮಹಿಳೆಯರೆಲ್ಲಾ ಒಟ್ಟಿಗೆ ಕುಳಿತರಂತೂ ಸೀರಿಯಲ್ ಗಳದ್ದೇ ಮಾತು. ಈಗಂತೂ ಖಾಸಗಿ ಚಾನಲ್ ಗಳು ಧಾರಾವಾಹಿಗಳ ನಿರ್ಮಾಣದಲ್ಲಿ ಅದ್ಧೂರಿಯಾಗಿ ತೆಗೆಯುತ್ತಿವೆ. ಜೀ ಕನ್ನಡದಲ್ಲೂ ಹಲವು ಧಾರಾವಾಹಿಗಳು ಮೂಡಿ ಬರುತ್ತಿದ್ದು ಅದರಲ್ಲಿ ಸೀತಾರಾಮ ಧಾರಾವಾಹಿ ಇತ್ತೀಚೆಗೆ ಭಾರೀ ಜನಪ್ರಿಯತೆ ಗಳಿಸುತ್ತಿದೆ.

ಇದನ್ನೂ ಓದಿ : ಮಲಯಾಳಂ ನಿರ್ಮಾಪಕನ ಕೈ ಹಿಡಿಯುತ್ತಾರಾ ಬಹುಭಾಷಾ ಬೆಡಗಿ? – ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ತ್ರಿಶಾ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವು ಸಿಹಿ ಪಾತ್ರದಲ್ಲಿ ನಟಿಸುತ್ತಿರುವ ಬಾಲಕಿ. ಗಣೇಶನಿಗೆ ಉಪವಾಸ ಮಾಡಿಕೊಂಡು ಏನೇ ಬೇಡಿಕೊಂಡ್ರೂ ಕೂಡ ಅದು ನೆರವೇರುತ್ತದೆ ಅಂತ ಪಕ್ಕದ ಮನೆಯವರಿಂದ ಸಿಹಿಗೆ ಗೊತ್ತಾಗಿತ್ತು. ಹೀಗಾಗಿ ಅವಳು ಹೆಲಿಕಾಪ್ಟರ್ ರೈಡ್ ಹೋಗಬೇಕು ಅಂತ ಉಪವಾಸ ಮಾಡಿದ್ದಳು. ಹಸಿದುಕೊಂಡಿದ್ದ ಸಿಹಿ ಎಚ್ಚರ ತಪ್ಪಿ ಬಿದ್ದಾಗ ರಾಮ್‌ಗೆ ಅಸಲಿ ವಿಚಾರ ಏನು ಅಂತ ಗೊತ್ತಾಗಿದೆ. ಈಗ ನಾನು ತಿಂಡಿ ತಿಂದೆ, ನಾನು ಉಪವಾಸ ಮಾಡಿದ್ದು ವ್ಯರ್ಥ ಆಗಿದೆ, ಹೆಲಿಕಾಪ್ಟರ್ ರೈಡ್ ಇಲ್ಲ ಅಂತ ಸಿಹಿ ಬೇಸರ ಮಾಡಿಕೊಂಡಿದ್ದಳು. ಹೆಲಿಕ್ಯಾಪ್ಟರ್‌ಗೋಸ್ಕರ ಸಿಹಿ ಹೀಗೆಲ್ಲ ಮಾಡಿದಳು ಅಂತ ರಾಮ್‌ಗೂ ಕೂಡ ಬೇಸರ ಆಗಿದೆ. ಅವನು ಸಿಹಿಗೆ ಈಗ ಹೆಲಿಕಾಪ್ಟರ್ ರೈಡ್ ಮಾಡಿಸಿದ್ದಾನೆ. ಇದನ್ನು ನೋಡಿ ಸೀತಾಗೆ ಶಾಕ್ ಆಗಿದೆ. ತನ್ನ ಆಫೀಸ್‌ನಲ್ಲಿ ಕೆಲಸ ಮಾಡುವ ಸಾಮಾನ್ಯ ಉದ್ಯೋಗಿ ಹೀಗೆಲ್ಲ ಹೆಲಿಕಾಪ್ಟರ್ ರೈಡ್ ಕರೆದುಕೊಂಡು ಹೋಗೋಕೆ ಹೇಗೆ ಸಾಧ್ಯ ಅಂತ ಸೀತಾಗೆ ಯೋಚನೆ ಬಂದಿದೆ. ಹೀಗಾಗಿ ಮುಂದಿನ ಎಪಿಸೋಡ್ ಗಳು ಭಾರೀ ಕುತೂಹಲ ಮೂಡಿಸಿವೆ.

ಮತ್ತೊಂದೆಡೆ ರಾಮ್ ತುಂಬಾನೇ ಖುಷಿಯಲ್ಲಿದ್ದಾನೆ. ರಾಮ್ ಖುಷಿ ಆಗಿರೋಕೆ ಕಾರಣ ಏನು ಎನ್ನೋದು ಭಾರ್ಗವಿ ತಲೆಯಲ್ಲಿ ಓಡ್ತಿದೆ. ಈಗಾಗಲೇ ಬೋನಸ್ ಬಗ್ಗೆ ಮಾತನಾಡಿರುವ ಸೀತಾಗೂ ರಾಮ್‌ಗೂ ಸ್ನೇಹ ಶುರುವಾಗಿದೆ ಎನ್ನೋದು ಭಾರ್ಗವಿಗೆ ಗೊತ್ತಾಗಿದೆ. ಸೀತಾಗೆ ಅಡ್ವಾನ್ಸ್ ಸಂಬಳ ಕೊಡಿಸೋಕೆ ರಾಮ್ ಕಷ್ಟಪಡ್ತಿದ್ದಾನೆ ಎನ್ನೋದು ಕೂಡ ಭಾರ್ಗವಿಗೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಸೀತಾಗೆ ಅವಳು ಯಾವ ರೀತಿ ಕಷ್ಟ ಕೊಡ್ತಾಳೋ ಏನೋ! ರಾಮ್, ಸೀತಾ ಮಧ್ಯೆ ಪ್ರೀತಿ ಹುಟ್ಟಿ ಇವರಿಬ್ಬರು ಮದುವೆ ಆಗಲು ರೆಡಿಯಾದ್ರೆ ಅದಕ್ಕೆ ಭಾರ್ಗವಿಯೇ ದೊಡ್ಡ ಸಮಸ್ಯೆ ಆಗಿರುತ್ತಾಳೆ.

Shantha Kumari