ಎರಡು ಮದುವೆ.. ಅದೇ ಸೀನ್‌! – ಡೈರೆಕ್ಟರ್‌ ದಾರಿ ತಪ್ಪಿದ್ದೆಲ್ಲಿ?
ಸೀತಾರಾಮಾ ಕಲ್ಯಾಣದ ಬಗ್ಗೆ ಪ್ರಶ್ನೆಯೇಕೆ?

ಎರಡು ಮದುವೆ.. ಅದೇ ಸೀನ್‌! – ಡೈರೆಕ್ಟರ್‌ ದಾರಿ ತಪ್ಪಿದ್ದೆಲ್ಲಿ?ಸೀತಾರಾಮಾ ಕಲ್ಯಾಣದ ಬಗ್ಗೆ ಪ್ರಶ್ನೆಯೇಕೆ?

ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ಪ್ರೇಕ್ಷಕರ ಮನ ಗೆದ್ದಿದೆ. ವೀಕ್ಷಕರು ಬಹಳ ದಿನಗಳಿಂದ ಕಾಯ್ತಾ ಇದ್ದ ದಿನ ಹತ್ತಿರವಾಗ್ತಿದೆ.. ಸೀತಾ ರಾಮ ಕಲ್ಯಾಣ ನೋಡಲು ವೀಕ್ಷಕರು ಕಾಯ್ತಿದ್ದಾರೆ… ಮದುವೆಯ ಸಿದ್ಧತೆ ನೋಡ್ತಿದ್ದರೆ, ನಿಜವಾಗಿಯೂ ಇಲ್ಲಿ ಮದುವೆಯೇ ಆಗ್ತಿದೆಯೇನೋ ಎಂಬಂತೆ ಸಂಭ್ರಮ ಕಳೆಗಟ್ಟಿದೆ.. ಬಂಧು ಮಿತ್ರರನ್ನು ಮದುವೆ ಆಹ್ವಾನಿಸಲು ಹೀರೋ ಹೀರೋಯಿನ್, ಉಳಿದ ಸೀರಿಯಲ್‌ಗಳ ಹೀರೋ ಹೀರೋಯಿನ್‌ ಮನೆಗೂ ಹೋಗ್ತಿದ್ದಾರೆ..ಒಟ್ನಲ್ಲಿ ದೇಸಾಯಿ ಕುಟುಂಬ ಅವರ ಸ್ಟೇಟಸ್ಗೆ ತಕ್ಕಂತೆ ಮದುವೆ ಆಮಂತ್ರಣ ನಡೆಯುತ್ತಿದೆ..ಇನ್ನು ಆಮಂತ್ರಣದ ಬಾಕ್ಸ್  ನೋಡಿದ್ರೆ ಅದ್ಧೂರಿ ವಿವಾಹ ಹೀಗೂ ಮಾಡಿಸ್ಬಹುದು ಎಂಬ ಹೊಸ ಐಡಿಯಾವನ್ನೇ ವೀಕ್ಷಕರಿಗೆ ಕೊಟ್ಟಂತಿದೆ ಸೀರಿಯಲ್‌ ನಿರ್ದೇಶಕರು.. ಆಮಂತ್ರಣಪತ್ರಿಕೆಯ ಜೊತೆಗೆ ಡ್ರೈ ಫ್ರೂಟ್ಸ್, ಚಿನ್ನ, ಬೆಳ್ಳಿಯ ಕಾಯಿನ್‌, ಡ್ರೆಸ್ ಕೊಟ್ಟು ಮದುವೆಗೆ ಇನ್ ವೈಟ್ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಸೀತಾ ಮಾತ್ರ ಸಿಂಪಲ್ ಆಗಿ ಮದುವೆ ಕಾರ್ಡ್ ಕೊಟ್ಟು ಮದುವೆಗೆ ಆಹ್ವಾನಿಸುತ್ತಿದ್ದಾಳೆ. ಇದರ ನಡುವೆ ಸೀತಾ ಮತ್ತು ಸಿಹಿ ಭೂಮಿಕಾಳ ಮನೆಗೆ ಬಂದಿದ್ದಾರೆ… ಸೀತಾಳ ಫ್ರೆಂಡ್ ಭೂಮಿಕಾಳನ್ನು ಮದುವೆಗೆ ಆಹ್ವಾನಿಸಲು ಸೀತಾ ಬಂದಿದ್ದಾಳೆ. ಆದ್ರೆ ಈಗ ವೀಕ್ಷಕರಿಗೆ  ಕೆಲ ಪ್ರಶ್ನೆಗಳು ಮೂಡಿದೆವೆ ಅಷ್ಟೇ ಅಲ್ಲದೇ ಸೀರಿಯಲ್ ಟೀಂ ಸ್ವಲ್ಪ ತಲೆ ಉಪಯೋಗಿಸಿ ಸ್ಕ್ರಿಪ್ಟ್ ಬರೀಬೇಕಲ್ವಾ ಅಂತಾ ಹೇಳಿದ್ದಾರೆ.

ಸೀರಿಯಲ್ ಅಂದಮೇಲೆ ಅಲ್ಲಿ ಟ್ವಿಸ್ಟ್‌ ಅಂಡ್‌ ಟರ್ನ್‌ ಸನ್ನವೇಶಗಳು ಇದ್ದೇ ಇರುತ್ತವೆ.. ರೀಲ್ ಆದರೂ ಎಲ್ಲವನ್ನು ರಿಯಲ್ ಆಗಿಯೇ ತೋರಿಸುವ ಪ್ರಯತ್ನವನ್ನು ಸೀರಿಯಲ್‌ ಟೀಂ ಮಾಡುತ್ತೆ…. ಮದುವೆ ಮಾಡಿ ಗಂಡನ ಮನೆಗೆ ಕಳುಹಿಸೋದು.. ಫ್ರೆಂಡ್ಸ್‌ ನ ಮೀಟ್ ಮಾಡೋದು.. ಹೀಗೆ ಎಲ್ಲವೂ ಇರಲೇಬೇಕು.. ಇನ್ನು ಒಂದು ಚಾನೆಲ್ ಅಂದರೆ ಅದರಲ್ಲಿ ಬರುವ ಹತ್ತಾರು ಧಾರಾವಾಹಿಗಳು ಕೂಡ ವೀಕ್ಷಕರ ಪಾಲಿಗೆ ಒಂದೊಂದು ಕುಟುಂಬದ ರೀತಿಯಲ್ಲೇ ಕಾಣಿಸ್ತಾ ಇರುತ್ತವೆ.. ಹೀಗಾಗಿ ಮದುವೆ ಸಂದರ್ಭ,  ಎಂಗೇಜ್‌ಮೆಂಟ್‌ ಅಥವಾ ಯಾವುದೋ ಒಂದು ಸೀರಿಯಲ್‌ನ ಕ್ಯಾರೆಕ್ಟರ್‌ಗಳ ನಡುವೆ  ಸಮಸ್ಯೆಯಾದಂತಹ ಸಂದರ್ಭದಲ್ಲಿ ಅದೇ ಚಾನೆಲ್‌ ನಲ್ಲಿ ಬರುವ ಮತ್ತೊಂದು ಧಾರಾವಾಹಿಯ ಕುಟುಂಬದವರು ಆಗಿ ಬರುತ್ತಾರೆ. ಇದೀಗ ಸೀತಾರಾಮ ಸೀರಿಯಲ್‌ನ ಮದುವೆ ಸಂಭ್ರಮದಲ್ಲೂ ಉಳಿದ ಸೀರಿಯಲ್‌ಗಳ ಪಾತ್ರಧಾರಿಗಳು ಭಾಗಿಯಾಗಲು ಸಜ್ಜಾಗುತ್ತಿದ್ದಾರೆ.. ಈಗಾಗಲೇ ಆಹ್ವಾನ ಪತ್ರಿಕೆ ಹಂಚುವ ಕೆಲಸ ಜೋರಾಗಿ ನಡೆಯುತ್ತಿದೆ.. ರಾಮನ ಮನೆಯಿಂದ ರೆಡಿಯಾಗಿರುವ ಲಗ್ನಪತ್ರಿಕೆ ನೋಡುಲು ಎರಡು ಕಣ್ಣು ಸಾಲದು ಎನ್ನುವಷ್ಟು ಚೆಂದವಿದೆ..  ಇನ್ನು ಸೀತಾ ಮದುವೆ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾಳೆ. ಸೀತಮ್ಮನ ಮದುವೆ ಕೆಲಸಗಳನ್ನು ಸಿಹಿಯೇ ಮುಂದೆ ನಿಂತು ಮಾಡುತ್ತಿದ್ದಾಳೆ. ಡ್ರೆಸ್ ಸೆಲೆಕ್ಟ್ ಮಾಡುವುದಾಗಲಿ, ಒಡವೆ ಸೆಲೆಕ್ಟ್ ಮಾಡುವುದಾಗಲಿ ಸಿಹಿಯೇ ಮುಂದೆ. ಈಗ ಲಗ್ನ ಪತ್ರಿಕೆಯನ್ನೂ ಹಂಚುತ್ತಿದ್ದು, ಭೂಮಿ ಟೀಚರ್ ಮನೆಗೆ ಬಂದಿದ್ದಾರೆ.

ಭೂಮಿಗೂ ಫ್ರೆಂಡ್‌ನ ಕಂಡು ಬಹಳ ಖುಷಿ ಆಯ್ತು. ವಿಶೇಷ ಏನು ಅಂತ ಕೇಳಿದಾಗ ಬಿಗ್ ಸರ್ಪೈಸ್ ಇದೆ ಅಂಡ್ ಗುಡ್ ನ್ಯೂಸ್ ಅಂತ ಹೇಳಿದ ಸೀತಾ, ಗೌತಮ್ ಬಂದ ಬರಲಿ ಅಂತಾ ಹೇಳುತ್ತಾಳೆ. ಗೌತಮ್‌ ಬಂದ ಬಳಿಕ ಲಗ್ನ ಪತ್ರಿಕೆ ಕೊಟ್ಟು ಮದುವೆಯ ವಿಚಾರ ತಿಳಿಸುತ್ತಾಳೆ ಸೀತಾ. ಮದುವೆ ಕಾರ್ಡ್‌ ತೆಗೆದು ಕೊಂಡ ಭೂಮಿಕಾ, ಸೀತಾ-ರಾಮ, ಅದ್ಭುತವಾಗಿದೆ ಹೆಸರು ಎಂದಷ್ಟೆ ಹೇಳುತ್ತಾಳೆ. ಆದರೆ ರಾಮ್ ಯಾರು ಎಂಬುದೇ ಭೂಮಿಗೆ ಗೊತ್ತಾಗಲಿಲ್ಲ. ಈ ಸೀನ್ ನಿಂದಾಗಿ ವೀಕ್ಷಕರಿಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಸೀತಾ, ಭೂಮಿಕಾ ಭೇಟಿ ವಿಚಾರಕ್ಕೆ ವೀಕ್ಷಕರಿಗೂ ಆಕ್ಷೇಪವಿಲ್ಲ ಬಿಡಿ. ಆದರೆ ಬೆಸ್ಟ್ ಫ್ರೆಂಡ್ಸ್ ಅಂತಾರೆ. ಸಿಕ್ಕಾಗ ಆತ್ಮೀಯತೆಯಿಂದ ಮಾತನಾಡುತ್ತಾರೆ. ಆದರೂ ಮದುವೆಗೂ ಮುನ್ನ ಇಬ್ಬರಿಗೂ ಯಾವ ವಿಚಾರವೂ ಗೊತ್ತೆ ಇರುವುದಿಲ್ಲ. ಇವೆಲ್ಲಾ ಇಷ್ಟೊಂದು ನಾಟಕೀಯವಾಗಿ ಮಾಡೋದು ಯಾಕೆ ಎಂಬುದೇ ವೀಕ್ಷಕರ ಪ್ರಶ್ನೆ. ಬೆಸ್ಟ್ ಫ್ರೆಂಡ್ ಎಂದಾಗ ಭೇಟಿ ಆಗೋದು ಬೇಡ, ಆದ್ರೆ, ಫೋನ್ ಮಾಡಿ ಮಾತನಾಡೋದು.. ಭಾವನೆಗಳನ್ನು ಹಂಚಿಕೊಳ್ಳೋದು.. ಗುಡ್ ನ್ಯೂಸ್ ಹಂಚಿಕೊಳ್ಳಬೇಕು  ಇದ್ದೇ ಇರುತ್ತೆ. ಮೊದಲೇ ಸೀತಾಗೆ ಪ್ರಿಯಾ ಬಿಟ್ಟರೆ ಬೇರೆ ಯಾರು ಇರಲಿಲ್ಲ. ಎಂಗೇಜ್ಮೆಂಟ್ ಗ್ರ್ಯಾಂಡ್ ಆಗಿಯೇ ಮಾಡಿಕೊಂಡಿದ್ದಳು ಸೀತಾ, ಆಗಲೂ ಭೂಮಿಗೆ ಯಾಕೆ ತಿಳಿಸಲಿಲ್ಲ ಅಂತಾ ವೀಕ್ಷಕರು ಪ್ರಶ್ನೆ ಕೇಳ್ತಾ ಇದ್ದಾರೆ..

ಸೀತಾ ಮಾತ್ರ ಅಲ್ಲ ಭೂಮಿ ಮದುವೆಯಲ್ಲೂ ಇದೇ ಥರ ಆಗಿತ್ತು. ಭೂಮಿಗೆ ಮದುವೆ ನಿಶ್ಚಯವಾಗಿತ್ತು, ಗೊಂದಲ, ಬೇಸರದಲ್ಲಿ ಇದ್ದಳು. ಆಗಲೂ ಸೀತಾ ಎಂಬ ಸ್ನೇಹಿತೆಯನ್ನು ನೆನಪಿಸಿಕೊಳ್ಳಲಿಲ್ಲ. ಮದುವೆ ದಿನ ಹೋಗಿ ಆಹ್ವಾನ ಪತ್ರಿಕೆ ಕೊಟ್ಟಾಗ ಸೀತಾ ಫುಲ್ ಖುಷಿಯಾಗಿದ್ದಳು. ಈಗ ಸೀತಾ ಮದುವೆ, ಅದೇ ದೃಶ್ಯ ಮತ್ತೆ ರಿಪೀಟ್ ಆಗಿದೆ. ಮನೆ ಮಾತ್ರ ಬದಲಾಗಿದೆ. ಯಾಕೆ ಹೀಗೆ? ಲಗ್ನ ಪತ್ರಿಕೆ ಹಂಚೋದನ್ನು ತೋರಿಸಬೇಕು ಅಂತ ಫ್ರೆಂಡ್‌ಶಿಪ್ ಮಾಡಿಸ್ತಾರಾ ನಿರ್ದೇಶಕರು..? ಸ್ಕ್ರಿಪ್ಟ್ ಬರೆಯುವಾಗ ಸೀರಿಯಲ್ ಟೀಂ ಯಾಕೆ ತಲೆ ಓಡಿಸಲ್ಲ ಅನ್ನೋ ಪ್ರಶ್ನೆ ಪ್ರತಿನಿತ್ಯ ಸೀರಿಯಲ್ ನೋಡುವ ವೀಕ್ಷಕರ ಮನದಲ್ಲಿ ಮೂಡಿದೆ.

Shwetha M