ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ – ವೀಕ್ಷಕರ ಪಾಸ್​ ನಿಷೇಧಿಸಿದ ಸ್ಪೀಕರ್ ಓಂ ಬಿರ್ಲಾ

ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ – ವೀಕ್ಷಕರ ಪಾಸ್​ ನಿಷೇಧಿಸಿದ ಸ್ಪೀಕರ್ ಓಂ ಬಿರ್ಲಾ

ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ಸಂಸತ್‌ನಲ್ಲಿ ಬುಧವಾರ ಭದ್ರತಾ ಲೋಪ ಸಂಭವಿಸಿದೆ. ಇಬ್ಬರು ಸಂಸತ್‌ ಒಳಗೆ ಟಿಯರ್‌ ಗ್ಯಾಸ್‌ ದಾಳಿ ನಡೆಸಿದ್ದರು. ಈ ದಾಳಿಯಿಂದಾಗಿ ಸಂಸತ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಅವಘಡ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ವೀಕ್ಷಕರ ಪಾಸ್​ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಬುಧವಾರ ಮಧ್ಯಾಹ್ನದ ವೇಳೆ ಲೋಕಸಭೆಯ ಕಲಾಪದ ಸಂದರ್ಭದಲ್ಲಿ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಬಳಿ ನುಗ್ಗಿದ್ದು, ಬಳಿಕ ಸ್ಮೋಕ್​ ಕ್ರ್ಯಾಕರ್​ ಸಿಡಿಸಿದ್ದರು. ಇದರಿಂದ ಕೆಲಕಾಲ ಸಂಸತ್ತಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಕಲಾಪ ಪುನರಾರಂಭಗೊಂಡಿದೆ. ಪ್ರಾಣತ್ಯಾಗಕ್ಕೂ ಸಿದ್ಧ ಆದರೆ ಕಲಾಪ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಪ್ರೇಕ್ಷಕರ ಪಾಸ್​ನ್ನು ನೀಡಲಾಗುವುದಿಲ್ಲ ಎಂದು ಓಂ ಬಿರ್ಲಾ ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ! – ಸಂಸತ್‌ ಮೇಲೆ ದಾಳಿ ನಡೆಸಿದ ಮನೋರಂಜನ್ ತಂದೆ ಹೀಗೆ ಹೇಳಿದ್ಧೇಕೆ?

ಸದನ ಅಂದೂ ನಡೆದಿತ್ತು. ಇಂದೂ ನಡೆಯಲಿದೆ, ಭಾರತದ ಜನರ ಆಶೋತ್ತರಗಳಿಗಾಗಿ ನಾವು ಇಲ್ಲಿ ಸೇರಿದ್ದೇವೆ, ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರೆಲ್ಲರ ಜತೆ ಕುಳಿತು ಮಾತನಾಡಲಿದ್ದೇನೆ, ನಿಮ್ಮೆಲ್ಲರ ರಕ್ಷಣೆ ನನ್ನ ಹೊಣೆ. ಯಾವುದೇ ಕಾರಣಕ್ಕೂ ಸದಸ್ಯರು ಭಯಪಡುವ ಹಾಗಿಲ್ಲ. ಸದಸನದಲ್ಲಿ ಹರಡಲಾಗಿದ್ದ ಹೊಗೆಯ ಪ್ರಾಥಮಿಕ ಮಾಹಿತಿ ನನ್ನ ಬಳಿ ಇದೆ. ಎಲ್ಲವನ್ನೂ ನಿಮ್ಮ ಗಮನಕ್ಕೆ ತರಲಿದ್ದೇನೆ.  ನಾನೂ ನಿಮ್ಮ ಜತೆಗೆ ಕುಳಿತಿಲ್ಲವೇ ಎಂದು ಸ್ಪೀಕರ್ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ. ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ. ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪ್ರವೇಶ ಪಾಸ್‌ಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅತಿಕ್ರಮಣಕಾರರನ್ನು ಹಿಡಿಯಲು ಸಂಸದರು ಮುಗಿಬಿದ್ದಿದ್ದರಿಂದ ಗದ್ದಲ ಸೃಷ್ಟಿಸಿತು. ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Shwetha M