ಸರಿಗಮಪ ವಿನ್ನರ್ ಶಿವಾನಿ.. ಬಾಳು ಬೆಳಗುಂದಿ ಕತೆ ಏನು? – ಫಿನಾಲೆಯಲ್ಲೂ ಮೋಸ ಆಯ್ತಾ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ. ಇದೀಗ ಸರಿಗಮಪ ಸೀಸನ್ 21 ಕೂಡ ಅದ್ದೂರಿಯಾಗಿ ಮುಗಿದಿದೆ. ಗುರುವಾರ ಸೀಸನ್ 21 ರ ಗ್ರ್ಯಾಂಡ್ ಫಿನಾಲೆ ಮುಗಿದಿದ್ದು, ವಿನ್ನರ್ ಯಾರು? ರನ್ನರ್ ಅಪ್ ಯಾರು ಅನ್ನೋದು ರಿವೀಲ್ ಆಗಿದೆ. ಈ ಬಾರಿಯ ಸೀಸನ್ ನಲ್ಲಿ ವಿಶೇಷವಾಗಿ ಮಹಿಳಾ ಸ್ಪರ್ಧಿಗಳೇ ಟಾಪ್ 3 ನಲ್ಲಿ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ದುರಂತ – ಇಂದಿನಿಂದ ಸಿಐಡಿ ತನಿಖೆ ಆರಂಭ
ವೀಕ್ಷಕರ ಅಚ್ಚು ಮೆಚ್ಚಿನ ಸಿಂಗಿಂಗ್ ಶೋ ಸರಿಗಮಪ ಸೀಸನ್ 21 ಮುಕ್ತಾಯಗೊಂಡಿದೆ. ಗುರುವಾರ ಗ್ರ್ಯಾಂಡ್ಫಿನಾಲೆ ಶೂಟಿಂಗ್ ಮುಕ್ತಾಯವಾಗಿದೆ. ಸೀಸನ್ 21ರ ಕೊನೆ ಘಟ್ಟದಲ್ಲಿ ಆರು ಮಂದಿ ಸ್ಪರ್ಧಿಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದರು. ಈ ಆರು ಮಂದಿ ಸ್ಪರ್ಧಿಗಳಲ್ಲಿ ‘ಸರಿಗಮಪ’ ಟೈಟಲ್ ಯಾರ ಮುಡಿಗೇರುತ್ತೆ ಎನ್ನುವ ಕೂತೂಹಲವಿತ್ತು. ಇದೀಗ ವೀಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಆರು ಫೈನಲಿಸ್ಟ್ಗಳಲ್ಲಿ ಈಗ ವಿನ್ನರ್ ಯಾರು ಅನ್ನೋದನ್ನ ಅನೌನ್ಸ್ ಮಾಡಲಾಗಿದೆ.
ಹೌದು, ಸರಿಗಮಪ ಸೀಸನ್ 21 ಗ್ರ್ಯಾಂಡ್ ಫಿನಾಲೆಯನ್ನ ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡೋದಿಕ್ಕೂ ಮುನ್ನ ಓಟಿಟಿಯಲ್ಲಿ ಫಿನಾಲೇಯ ನೇರ ಪ್ರಸಾರ ಮಾಡಲಾಗಿತ್ತು. ಜೀ 5ನಲ್ಲಿ ಗುರುವಾರ ಗ್ರ್ಯಾಂಡ್ ಫಿನಾಲೆ ನೇರ ಪ್ರಸಾರ ಮಾಡಲಾಗಿದೆ. ಫಿನಾಲೆಯಲ್ಲಿ ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ಹಾಗೂ ದ್ಯಾಮೇಶ ಅಂತಿಮ ಆರು ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶಿವಾನಿ, ರಶ್ಮಿ ಹಾಗೂ ಆರಾಧ್ಯ ರಾವ್ ಮಧ್ಯೆ ಪೈಪೋಟಿ ನಡೆದಿತ್ತು. ಕೊನೆಯ ಸೆಣೆಸಾಟದಲ್ಲಿ ಬೀದರ್ ನ ಶಿವಾನಿ ಸರಿಗಮಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಹೌದು, ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಈಕೆಯೇ ಸರಿಗಮಪ ವಿನ್ನರ್ ಆಗ್ಬೇಕು ಅಂತಾ ಅದೆಷ್ಟೋ ವೀಕ್ಷಕರು ಆಸೆ ಪಟ್ಟಿದ್ರು. ಇದೀಗ ಸೀಸನ್ 21ರ ಸರಿಗಮಪ ಟ್ರೋಫಿಯನ್ನು ದಕ್ಕಿಸಿಕೊಂಡಿದ್ದಾರೆ. ಶಿವಾನಿ ಸ್ವಾಮಿಗೆ ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸಿದ್ದಾರೆ.
ಇನ್ನು, ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಆರಾಧ್ಯಾಗೆ ಶಿವಾನಿ ಜೊತೆ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು. ಈಕೆ ಅದ್ಭುತ ಗಾಯನದ ಮೂಲಕ ವೀಕ್ಷಕರನ್ನ ಮನರಂಜಿಸಿದ್ರು. ಆರಾಧ್ಯ ಗಾಯನಕ್ಕೆ ಸಂಗೀತ ಪ್ರೇಮಿಗಳು ಮನಸೋತಿದ್ರು. ಈಕೆ ವಿನ್ ಆಗಬೇಕು ಅನ್ನೋದು ಕೂಡ ಅನೇಕರ ಆಸೆ ಆಗಿತ್ತು. ಆದ್ರೆ ಆರಾಧ್ಯ ರನ್ನರ್ ಅಪ್ ಸ್ಥಾನಕ್ಕೆ ಖಷಿಪಟ್ಟುಕೊಂಡಿದ್ದಾರೆ. ಇನ್ನು ಸರಿಗಮಪ ಸೀಸನ್ 21 ರ ಎರಡನೇ ರನ್ನರ್ ಅಪ್ ರಶ್ಮಿ ಆಗಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಫಿನಾಲೆ ಜಡ್ಜ್ಮೆಂಟ್ ಸರಿಯಾಗಿದೆ. ನಿಜವಾದ ಪ್ರತಿಭೆಗೆ ವಿನ್ನರ್ ಪಟ್ಟ ಸಿಕ್ಕಿತು. ಈಗ 100% ಸಂಗೀತ ಜ್ಞಾನ ಇರುವವರಿಗೆಯೇ ನ್ಯಾಯ ಸಿಕ್ಕಿದೆ. ಸಂಗೀತದ ಜ್ಞಾನವುಳ್ಳ.. ಸಂಗೀತವನ್ನೆ ಉಸಿರಾಗಿಸಿಕೊಂಡು, ಇನ್ನು ಕೂಡ ಸಂಗೀತವನ್ನ ಕಲಿಯುತ್ತಿರುವ ಶಿವಾನಿ ಗೆಲುವು ನಿಜವಾದದ್ದು.. ಸಂಗೀತದ ಜ್ಞಾನವೇ ಇಲ್ಲದೆ ಇರುವವರನ್ನ ವಿನ್ ಮಾಡದೇ ಇರೋದು ಒಳ್ಳೆಯದ್ದೇ ಆಯ್ತು.. ಇವಾಗ ಈ ಶೋಗೆ ಒಂದು ಕಳೆ ಬಂತು. ಬಾಳು ಬೆಳಗುಂದಿಯನ್ನ ಕೊನೆವರೆಗೂ ಟಿಆರ್ಪಿ ಉಳಿಸಿಕೊಂಡಿದ್ದು ಅಂತಾ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.