ತಮಿಳು ಶೋನಲ್ಲಿ ಮಲೆನಾಡಿನ ಹುಡ್ಗಿ.. – ಕನ್ನಡ ಸಾಂಗ್.. ಶಿವಾನಿ ಮ್ಯಾಜಿಕ್!
ಶೋನಲ್ಲಿ ವಿಜಯ್ ಪ್ರಕಾಶ್ ಟ್ವಿಸ್ಟ್

ಜೀಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸಕ್ಸಸ್ ಕಂಡಿದೆ. ಇದೀಗ 21 ನೇ ಸೀಸನ್ ನಡಿತಾ ಇದ್ದು, ಅಂತಿಮ ಹಂತದಲ್ಲಿದೆ. ಈ ಶೋ ನೂರಾರು ಗಾಯಕರನ್ನ ಕರುನಾಡಿಗೆ ಪರಿಚಯಿಸಿದೆ. ಕೆಲವರು ಈ ಶೋಗೆ ಬಂದ್ಮೇಲೆ ತಮ್ಮದೇ ಆದ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಶೋ, ಬೇರೆ ಭಾಷೆಯ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ಇದೀಗ ಸರಿಗಮಪ ಸೀಸನ್ 19 ರ ರನ್ನರ್ ಅಪ್ ಆಗಿದ್ದ ಶಿವಾನಿ ನವೀನ್ ಈಗ ತಮಿಳು ಸರಿಗಮಪ ಸೀಸನ್ 5ರಲ್ಲಿ ಅವಕಾಶ ಪಡೆದಿದ್ದಾರೆ. ಅದೂ ಕೂಡ ಆಡಿಷನ್ನಲ್ಲಿ ಕನ್ನಡದ ಸಾಂಗ್ ಹೇಳಿ ಈ ಶೋಗೆ ಸೆಲೆಕ್ಟ್ ಆಗಿದ್ದಾರೆ.
ಇದನ್ನೂ ಓದಿ: ಶುಗರ್ ಗೆ ಮದ್ದು ಸೊಂಪು ನೀರು! – ತೂಕ ಇಳಿಕೆಗೂ ಇದುವೇ ಮದ್ದು!
ಶಿವಾನಿ ನವೀನ್.. ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಸ್ಪರ್ಧಿಸಿದ್ದ ಈಕೆ ಕರುನಾಡಿನ ಜನರ ಮನಗೆದ್ದಿದ್ರು. ತನ್ನ ಗಾಯನದ ಮೂಲಕ ಮೋಡಿ ಮಾಡಿದ್ದ ಶಿವಾನಿ ಸೀಸನ್ 19 ರ ರನ್ನರ್ ಅಪ್ ಆಗಿದ್ರು. ಈ ಶೋ ಬಳಿಕ ಹಲವು ಆಲ್ಬಂ ಸಾಂಗ್ಗಳಿಗೂ ತಮ್ಮ ಧ್ವನಿ ನೀಡಿ, ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದಾರೆ. ಕರುನಾಡಿನ ಮಗಳು ಶಿವಾನಿ ತಮ್ಮ ಕಂಠಸಿರಿಯನ್ನು ತಮಿಳು ಸಂಗೀತ ಪ್ರೇಮಿಗಳಿಗೂ ಉಣಬಡಿಲು ಸಜ್ಜಾಗಿದ್ದಾರೆ. ಇದೀಗ ಜೀ ತಮಿಳು ವಾಹಿನಿಯ ‘ಸರಿಗಮಪ ಸೀನಿಯರ್ಸ್ ಸೀಸನ್ ಐದಕ್ಕೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಅದೂ ಕೂಡ ಕನ್ನಡ ಸಾಂಗ್ ಹಾಡೋ ಮೂಲಕ. ಇದು ಶಿವಾನಿ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಅಂದ್ಹಾಗೆ ಶಿವಾನಿ ಆಡಿಷನ್ನಲ್ಲಿ ಫಸ್ಟ್ಗೆ 2011ರಲ್ಲಿ ರಿಲೀಸ್ ಆದ ತಮಿಳಿನ ‘ವಾಗೈ ಸೂಡ ವಾ’ ಚಿತ್ರದ ‘ಪೋರಾನೆ ಪೋರಾನೆ..’ ಹಾಡನ್ನು ಹಾಡಿದ್ದರು. ಶಿವಾನಿ ಹಾಡನ್ನು ಕೇಳಿ ವೇದಿಕೆ ಮೇಲಿದ್ದ ಜಡ್ಜ್ಗಳು ಹಾಗೂ ಜ್ಯೂರಿಗಳು ಫಿದಾ ಆಗಿದ್ದಾರೆ. ಎಲ್ಲರೂ ಅವರನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದ್ರೆ ಗಾಯಕ ವಿಜಯ್ ಪ್ರಕಾಶ್ ಗ್ರೀನ್ ಸಿಗ್ನಲ್ ಕೊಡದೇ ವೆಟಿಂಗ್ ಲಿಸ್ಟ್ನಲ್ಲಿ ಇರುವಂತೆ ಸೂಚಿಸಿದ್ದರು. ವಿಜಯ್ ಪ್ರಕಾಶ್ ಈ ಡಿಸಿಷನ್ ನೋಡಿ ಉಳಿದ ಜಡ್ಜಸ್, ಜ್ಯೂರಿ ಮೆಂಬರ್ಸ್ ಶಾಕ್ ಆಗಿದ್ರು. ಮುಖ ಮುಖ ನೋಡಿಕೊಂಡಿದ್ರು. ಅಷ್ಟೇ ಅಲ್ಲ ಶಿವಾನಿ ಹಾಗೂ ಆಕೆಯ ಮನೆಯವರು ವೇದಿಕೆಯಿಂದ ಹೊರ ನಡೆದಿದ್ರು. ಈ ವೇಳೆ ಶಿವಾನಿಗೆ ವಿಜಯ್ ಪ್ರಕಾಶ್ ಚಮಕ್ ಕೊಟ್ಟಿದ್ದಾರೆ. ಇದ್ರಿಂದ ಎಲ್ಲರೂ ಶಾಕ್ ಆಗಿದ್ದಾರೆ.
ಹೌದು, ವೈಟಿಂಗ್ ಲಿಸ್ಟ್ನಲ್ಲಿ ಇರಿ ಅಂತಾ ಹೇಳ್ತಿದ್ದಂತೆ ಶಿವಾನಿ ಹಾಗೂ ಆಕೆಯ ಮನೆಯವರು ವೇದಿಕೆಯಿಂದ ನಿರ್ಗಮಿಸಿದ್ರು. ಈ ವೇಳೆ ವಿಜಯ್ ಪ್ರಕಾಶ್ ಶಿವಾನಿಯನ್ನ ವಾಪಾಸ್ ಕರ್ದಿದ್ದಾರೆ. ಶಿವಾನಿ ಬನ್ನಿ ಬನ್ನಿ ನಿಮ್ಮ ವಾಯ್ಸ್ ಪರೀಕ್ಷೆ ಮಾಡಬೇಕು ಅಂತ ಹೇಳಿದ್ರು. ಶಿವಾನಿ ಬಳಿ ಸೋಜುಗದ ಸೂಜು ಮಲ್ಲಿಗೆ ಹಾಡನ್ನು ಹಾಡಲು ಹೇಳಿದ್ರು. ಈ ಹಾಡನ್ನು ಶುರು ಮಾಡುತ್ತಿದ್ದಂತೆ ಶಿವಾನಿ ಧ್ವನಿ ಕೇಳಿ ಜಡ್ಜ್ಗಳೇ ಫಿದಾ ಆಗಿದ್ದಾರೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಬಳಿಕ ವಿಜಯ್ ಪ್ರಕಾಶ್ ಆಕೆಯನ್ನ ಸೆಲೆಕ್ಟ್ ಮಾಡಿದ್ದಾರೆ. ಈ ವೇಳೆ ಶಿವಾನಿ ಭಾವುಕರಾದ್ರು. ಅವರ ತಂದೆ ತಾಯಿ ಕೂಡ ಮಗಳ ಸಾಧನೆಗೆ ಆನಂದಭಾಷ್ಪ ಸುರಿಸಿದರು. ಅದಾದ್ಮೇಲೆ ಶಿವಾನಿಯನ್ನು ಫಸ್ಟ್ಗೆ ಯಾಕೆ ಸೆಲೆಕ್ಟ್ ಮಾಡಿಲ್ಲ ಅನ್ನೋದನ್ನ ವಿಜಯ್ ಪ್ರಕಾಶ್ ಹೇಳಿದ್ರು. “ನನಗೆ ಶಿವಾನಿ ಯಾವ ರೇಂಜ್ನಲ್ಲಿ ಮಾದೇವ ಹಾಡನ್ನು ಹಾಡುತ್ತಾಳೆ ಎಂಬುದು ಗೊತ್ತಿತ್ತು. ಅದನ್ನು ಇಲ್ಲಿ ಎಲ್ಲರಿಗೂ ಕೇಳಿಸಬೇಕಿತ್ತು. ಹಾಗಾಗಿ, ನಾನು ಟ್ವಿಸ್ಟ್ ನೀಡಿದೆ ಎಂದು ವಿಜಯ್ ಪ್ರಕಾಶ್ ಹೇಳಿದ್ದಾರೆ.
ಅಂದ್ಹಾಗೆ ಶಿವಾನಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದವರು. ಈಕೆಯ ತಂದೆ ತಾಯಿ ಇಬ್ರೂ ಆರ್ಕೆಸ್ಟ್ರಾ ಸಿಂಗರ್ಸ್. ಹೀಗಾಗಿ ತಂದೆ ತಾಯಿ ಜೊತೆ ಈಕೆಯೂ ಸಾಕಷ್ಟು ವೇದಿಕೆಯಲ್ಲಿ ಹಾಡ್ತಿದ್ರು. ಆದ್ರೆ ಕಳೆದ ಮೂರು ವರ್ಷದ ಹಿಂದೆ ಮನೆಗೆ ಆದಾರಸ್ಥಂಭ ಆಗಿದ್ದ ತಂದೆಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ತಂದೆಗೆ ಯಾವುದೋ ಬೇರೆ ಮೆಡಿಸಿನ್ ಕೊಟ್ಟಿದ್ರು. ಇದ್ರಿಂದಾಗಿ ತಂದೆ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದೀಗ ಶಿವಾನಿ ತಂದೆಗೆ ಹಾಡ್ಬಾರ್ದು ಅಂತಾ ಡಾಕ್ಟರ್ ಹೇಳಿದ್ದಾರೆ. ಅದ್ರಿಂದಾಗಿ ಈ ಕುಟುಂಬ ಆರ್ಥಿಕ ಸಮಸ್ಯೆ ಶುರುವಾಯ್ತು. ಮನೆಯಲ್ಲಿದ್ದ ಇನ್ಟ್ರುಮೆಂಟ್ ಎಲ್ಲ ಸೇಲ್ ಮಾಡೋ ಪರಿಸ್ಥಿತಿ ಬಂತು ಅಂತಾ ಶಿವಾನಿ ಕಷ್ಟದ ದಿನಗಳನ್ನ ಹೇಳ್ಕೊಂಡಿದ್ದಾರೆ.
ಕಷ್ಟದ ದಿನಗಳನ್ನ ಕಳೆದ ಶಿವಾನಿ ಈಗ ತಮಿಳು ರಿಯಾಲಿಟಿ ಶೋಗೆ ಸೆಲೆಕ್ಟ್ ಆಗಿದ್ದಾರೆ. ಆಡಿಷನ್ನಲ್ಲೇ ಎಲ್ಲಾ ಜಡ್ಜಸ್ನ ಇಂಪ್ರೆಸ್ ಮಾಡಿದ್ದಾರೆ. ಶಿವಾನಿ ಹಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ತಮಿಳು ಹಾಡನ್ನು ಕಲಿತು ಇಷ್ಟು ಅದ್ಭುತವಾಗಿ ಹಾಡಿದ್ದಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ನಮ್ಮ ಕನ್ನಡತಿ ಈ ಶೋನಲ್ಲಿ ವಿನ್ ಆಗ್ಲೀ. ಈಕೆಯ ಸಂಗೀತ ಪಯಣ ಹೀಗೆ ಸಾಗಲಿ.. ಸಂಗೀತ ಲೋಕದಲ್ಲಿ ದೊಡ್ಡ ಸಾಧನೆ ಮಾಡಲಿ ಅನ್ನೋದೇ ಎಲ್ಲರ ಆಶಯ.