‘ಕಾಳಿ’ಗೆ ಜೊತೆಯಾದ ಸಿಂಗಾರದ ಸಿರಿ ಸಪ್ತಮಿ ಗೌಡ

‘ಕಾಳಿ’ಗೆ ಜೊತೆಯಾದ ಸಿಂಗಾರದ ಸಿರಿ ಸಪ್ತಮಿ ಗೌಡ

ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರ ಸಿನಿಮಾದ ಯಶಸ್ಸಿನಿಂದಾಗಿ ನಟಿ ಸಪ್ತಮಿ ಗೌಡ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಸಪ್ತಮಿ ಗೌಡ ಯಾವ ಸಿನಿಮಾ ಒಪ್ಪಿಕೊಳ್ತಾರೆ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿತ್ತು. ಇದೀಗ ಸಪ್ತಮಿ ಗೌಡ, ನಟ ಅಭಿಷೇಕ್ ಅಂಬರೀಶ್ ಜೊತೆಗೆ ನಟಿಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುವುದು ಪಕ್ಕಾ ಆಗಿದ್ದು, ನವೆಂಬರ್ 28ರಂದು ಚಿತ್ರದ ಮುಹೂರ್ತ ನಡೆದಿದೆ.

ಇದನ್ನೂ ಓದಿ:  ಉದ್ಯಮಿ ಯಶಸ್ ಜೊತೆ ಹಸೆಮಣೆಯೇರಿದ ಅದಿತಿ ಪ್ರಭುದೇವ – ಗಣ್ಯರು, ಅಭಿಮಾನಿಗಳಿಂದ ಶುಭ ಹಾರೈಕೆ

ನಟಿ ಸಪ್ತಮಿ ಗೌಡ ಇದುವರೆಗೂ ಹತ್ತಕ್ಕೂ ಹೆಚ್ಚು ಸಿನಿಮಾ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ಅದರಲ್ಲಿ ಕಾಳಿ ಚಿತ್ರದಲ್ಲಿ ವಿಭಿನ್ನ ಪಾತ್ರವಿದೆ. ಈ ಬಗ್ಗೆ ಮಾತನಾಡಿದ ಸಪ್ತಮಿ ಗೌಡ, ಕಾಂತಾರ ಸಿನಿಮಾದ ನಂತರ ನಾನು ಎಂತಹ ಪಾತ್ರದಲ್ಲಿ ನಟಿಸಬೇಕು ಎಂದುಕೊಂಡಿದ್ದೇನೋ ಅಂತಹದ್ದೇ ಪಾತ್ರ ಸಿಕ್ಕಿದೆ. ನನ್ನ ಮೊದಲ ಸಿನಿಮಾಗೂ, ಎರಡನೇ ಸಿನಿಮಾದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಈಗ ಕಾಂತಾರ ಮತ್ತು ಕಾಳಿಯ ಸಿನಿಮಾದ ಪಾತ್ರಕ್ಕೂ ವ್ಯತ್ಯಾಸವಿದೆ. ಈ ರೀತಿ ಪ್ರತಿ ಪಾತ್ರವೂ ವಿಭಿನ್ನಾಗಿರಬೇಕು ಎಂದು ಯೋಚಿಸಿ ಕಥೆಗಳನ್ನು ಓಕೆ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಕಾಳಿಯ ಜತೆಗೆ ಇನ್ನೊಂದು ಸಿನಿಮಾವನ್ನು ಸಪ್ತಮಿ ಗೌಡ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅದರ ಅನೌನ್ಸ್‌ಮೆಂಟ್‌ ಆಗಲಿದೆ.

suddiyaana