ಸಂತೋಷ್, ವಿಜಯೇಂದ್ರ ವರುಣಾ ಅಖಾಡಕ್ಕೆ ಎಂಟ್ರಿ – ಸಿದ್ದು ಕಟ್ಟಿಹಾಕಲು ಹೇಗಿದೆ ರಣತಂತ್ರ?

ಸಂತೋಷ್, ವಿಜಯೇಂದ್ರ ವರುಣಾ ಅಖಾಡಕ್ಕೆ ಎಂಟ್ರಿ – ಸಿದ್ದು ಕಟ್ಟಿಹಾಕಲು ಹೇಗಿದೆ ರಣತಂತ್ರ?

ರಾಜ್ಯ ರಾಜಕಾರಣದಲ್ಲಿ ವರುಣ ಮತಕ್ಷೇತ್ರ ಭಾರೀ ಸಂಚಲನ ಸೃಷ್ಟಿಸಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ವಿ. ಸೋಮಣ್ಣರನ್ನ ಕಣಕ್ಕಿಳಿಸಲಾಗಿದೆ. ಇದೀಗ ಸಿದ್ದರಾಮಯ್ಯರನ್ನ ಹಣಿಯೋಕೆ ಬಿ.ಎಲ್ ಸಂತೋಷ್ ಹಾಗೂ ಬಿ.ವೈ ವಿಜಯೇಂದ್ರ ಅಖಾಡಕ್ಕೆ ಧುಮುಕಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಸೋಮಣ್ಣ ಜೊತೆ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಸಂಸದ ಪ್ರತಾಪ್​​ ಸಿಂಹ ಒಳಗೊಂಡ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ವೇಳೆ ವರುಣಾ ಕ್ಷೇತ್ರದ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆದಿದ್ದಾರೆ. ಅಮಿತ್ ಶಾ ಕೂಡ ಸಿದ್ದರಾಮಯ್ಯ ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳದೆ ವರುಣಾ ಕ್ಷೇತ್ರದ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಲು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ಬಿ.ಎಲ್​​ ಸಂತೋಷ್ ಮೈಸೂರಿನಲ್ಲಿ ಆಕ್ಟಿವ್​ ಆಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ತಲೆಬಿಸಿ ಶುರುವಾಗಿದೆ. ನಾಳೆ ಸಿದ್ದರಾಮಯ್ಯ ಕೂಡ ವರುಣಾ ಕ್ಷೇತ್ರದಲ್ಲಿ ಭರ್ಜರಿ ಮತಬೇಟೆ ನಡೆಸಲಿದ್ದಾರೆ.

suddiyaana