ಟುಕ್ ಟುಕ್ ತಿಲಕ್ ವರ್ಮಾ ಬೇಡ – ಪವರ್ ಹಿಟ್ಟರ್ಸ್ ಪ್ರಾಬ್ಲಂ ಏನು?
4ನೇ ಪಂದ್ಯನಾದ್ರೂ ಗೆಲ್ಲುತ್ತಾ ಭಾರತ?

ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನ ಸೋತು ಕ್ರಿಟಿಕಲ್ ಕಂಡೀಷನ್ನಲ್ಲಿರೋ ಭಾರತ ಇವತ್ತಿನ ಮ್ಯಾಚ್ ಗೆದ್ರಷ್ಟೇ ರೇಸ್ನಲ್ಲಿರ್ತಾರೆ. ಇಲ್ದಿದ್ರೆ ಇನ್ನೂ ಒಂದು ಪಂದ್ಯ ಬಾಕಿ ಇದ್ದಂಗೇ ಸರಣಿ ಸೋಲ್ತಾರೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತಕ್ಕೆ ಇನ್ನೂ ಗೆಲುವು ಅನ್ನೋದೇ ಸಿಕ್ಕಿಲ್ಲ. ಐರ್ಲೆಂಡ್ನಲ್ಲಿ ಐತಿಹಾಸಿಕ ಸೋಲಾದ್ರೆ ಇಂಗ್ಲೆಂಡ್ನಲ್ಲೂ ಶೇಪ್ಔಟ್ ಆಗ್ತಿದೆ. ಸರಣಿ ಗೆಲ್ಲೋಕೆ ಆಗದಿದ್ರೂ ಸಮಬಲ ಮಾಡಿಕೊಳ್ಳೋಕೆ ಚಾನ್ಸ್ ಇದೆ. ಅದೂ ಕೂಡ ಇವತ್ತು ಗೆದ್ರೆ ಮಾತ್ರ. ಌಂಡ್ ಇಲ್ಲಿ ಬ್ಯಾಟಿಂಗ್ ಆರ್ಡರ್ನಲ್ಲಿ ಕೆಲ ಚೇಂಜಸ್ ಮಾಡಿಕೊಳ್ಳಬೇಕು ಅಂತಾ ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ಸಜೇಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಇವರೇನಾ ವಿಶ್ವ ಚಾಂಪಿಯನ್ಸ್? – ಟೀಂ ಇಂಡಿಯಾಗೆ ಕಪ್ಪು ಚುಕ್ಕೆ
ಟುಕ್ ಟುಕ್ ತಿಲಕ್ ಬೇಡ.. ಸಂಜುಗೆ ಚಾನ್ಸ್ ಕೊಡಿ!
ಐರ್ಲೆಂಡ್ ಹಾಗೇ ಇಂಗ್ಲೆಂಡ್ ವಿರುದ್ಧದ ಮೊದಲ ಮ್ಯಾಚಲ್ಲಿ ಸಂಜು ಚೆನ್ನಾಗಿ ಆಡ್ಲಿಲ್ಲ ಅಂತಾ ಪ್ಲೇಯಿಂಗ್ 11ನಿಂದಲೇ ತೆಗೆದು ಅವ್ರ ಬದಲಿಗೆ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಟ್ರು. ಸೂರ್ಯವಂಶಿ ಬಂದಿದ್ದು ಪ್ರಾಬ್ಲಂ ಅಲ್ಲ. ಆದ್ರೆ ಸಂಜು ಹೊರಗಿಟ್ಟಿದ್ದು ತಪ್ಪು ಅಂತಾ ಶ್ರೀಕಾಂತ್ ಹೇಳಿದ್ದಾರೆ. ಯಾಕಂದ್ರೆ ಸಂಜು ವಿಶ್ವಕಪ್ನಲ್ಲಿ ಚೆನ್ನಾಗಿ ಆಡಿದ್ರು. ಆದ್ರೆ ತಿಲಕ್ ವರ್ಮಾ ಇಡೀ ವರ್ಷ ಚೆನ್ನಾಗಿ ಪರ್ಫಾಮ್ ಮಾಡಿಲ್ಲ. ಟೆಸ್ಟ್ ಮ್ಯಾಚ್ ಥರ ಬಾಲ್ ಎ ರನ್ ಅನ್ನೋ ಥರ ಬ್ಯಾಟಿಂಗ್ ಮಾಡ್ತಿದ್ದಾರೆ. ಹೀಗಿದ್ರೂ ತಿಲಕ್ ಮೇಲೆ ಯಾಕೆ ಡಿಪೆಂಡ್ ಆಗ್ತಿದ್ದಾರೆ. ವೈಸ್ ಕ್ಯಾಪ್ಟನ್ ಆದ್ರೂ ಪರ್ವಾಗಿಲ್ಲ ಅವ್ರನ್ನ ತಂಡದಿಂದ ಹೊರಗಿಡಿ. ಹಾಗೇ ಸಂಜುಗೆ ಅವಕಾಶ ಕೊಡಿ ಅಂದಿದ್ದಾರೆ. ಇಂಗ್ಲೆಂಡ್ನ ಪೇಸ್ ಹಾಗೂ ಬೌನ್ಸ್ ಪಿಚ್ಗಳಲ್ಲಿ ಶಾರ್ಟ್-ಪಿಚ್ ಎಸೆತಗಳನ್ನು ಎದುರಿಸಲು ತಿಲಕ್ ವರ್ಮಾ ಹೆದರುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗಿಂತ ಮುಂಚಿತವಾಗಿ ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸಿ, ಮ್ಯಾನೇಜ್ಮೆಂಟ್ ತಿಲಕ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಹಾಗಾದ್ರೆ ಸಂಜು ಫಾರ್ಮ್ ಬಗ್ಗೆ ಪ್ರಶ್ನೆ ಮಾಡೋದು ತಿಲಕ್ ಬಗ್ಗೆ ಯಾಕೆ ಮಾಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ನಲ್ಲಿ ತಿಲಕ್ ವರ್ಮಾ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವರ ಅತ್ಯುತ್ತಮ ಸ್ಕೋರ್ ಕೇವಲ 44 ರನ್ಗಳಷ್ಟೇ. ಆದ್ರೆ ಸಂಜು ಕೊನೆಯ ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್. ಹೀಗಿದ್ರೂ ಗಂಭೀರ್ ತಾರತಮ್ಯ ಮಾಡ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಇಲ್ಲಿ ತಿಲಕ್ರನ್ನ ಕೈಬಿಡಿ ಅನ್ನೋದಕ್ಕೆ ಕಾರಣಗಳೂ ಇವೆ.
ಟಿ-20ಐನಲ್ಲಿ ಟೆಸ್ಟ್ ಬ್ಯಾಟಿಂಗ್ ಆಡ್ತಿದ್ದಾರೆ ತಿಲಕ್ ವರ್ಮಾ!
ತಿಲಕ್ ವರ್ಮಾ ಅವರ ಅತಿದೊಡ್ಡ ವೀಕ್ನೆಸ್ ಮಿಡಲ್ ಆರ್ಡರ್ನಲ್ಲಿ ಸ್ಲೋವಾಗಿ ಬ್ಯಾಟಿಂಗ್ ಮಾಡೋದು. 2026ರಲ್ಲಿ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಲ್ಲಿ ಸ್ಪಿನ್ನರ್ಗಳ ವಿರುದ್ಧ 98 ಎಸೆತಗಳಲ್ಲಿ ಕೇವಲ 90 ರನ್ ಗಳಿಸಿದ್ದಾರೆ. ತಿಲಕ್ರ ಈ ಟುಕ್ ಟುಕ್ ಪರ್ಫಾಮೆನ್ಸ್ ಇನ್ನೊಂದು ಕಡೆ ಬ್ಯಾಟಿಂಗ್ ಮಾಡೋರಿಗೆ ಪ್ರೆಶರ್ ಕ್ರಿಯೇಟ್ ಮಾಡ್ತಿದೆ. ರನ್ಸ್ ಸ್ಲೋ ಆಗ್ತಿದೆ ಅಂತಾ ಬಿಗ್ ಹಿಟ್ಗೆ ಕೈಹಾಕಿ ಔಟ್ ಆಗ್ತಿದ್ದಾರೆ. ಹೀಗಿದ್ರೂ ಮ್ಯಾನೇಜ್ಮೆಂಟ್ ಮಾತ್ರ ತಿಲಕ್ ಬೆನ್ನಿಗೆ ನಿಂತಿದೆ. ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕು ಅನ್ನೋ ಕಾರಣಕ್ಕೆ ವೈಸ್ ಕ್ಯಾಪ್ಟನ್ಸಿಯನ್ನೂ ನೀಡಿರೋದು ಈಗ ಗುಟ್ಟಾಗಿ ಉಳಿದಿಲ್ಲ. ಆದ್ರೆ ಇಲ್ಲಿ ಗಂಭೀರ್ ಹಾಗೇ ಅಗರ್ಕರ್ ಫೇವರಿಸಂಗೆ ತಂಡ ಸಫರ್ ಆಗ್ತಿದೆ. ಇಂಗ್ಲೆಂಡ್ನಲ್ಲೂ ಸೋಲೋ ಹಂತಕ್ಕೆ ಬಂದಿರೋ ಭಾರತ ಚೇತರಿಸಿಕೊಳ್ಳಬೇಕು ಅಂದ್ರೆ ಪ್ಲೇಯಿಂಗ್ 11 ಹೇಗಿರಬೇಕು ಅನ್ನೋದನ್ನ ನೋಡೋಣ.
ಹೇಗಿರುತ್ತೆ ಪ್ಲೇಯಿಂಗ್ 11?
ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ಅಕ್ಷರ್ ಪಟೇಲ್
ಶಿವಂ ದುಬೆ
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ವರುಣ್ ಚಕ್ರವರ್ತಿ
ಪ್ರಿನ್ಸ್ ಯಾದವ್
ಹೀಗೆ ಬ್ಯಾಟಿಂಗ್ನಲ್ಲಿ ಒಂದು ಚೇಂಜಸ್ ಇರುತ್ತೆ.. ಬೌಲಿಂಗ್ನಲ್ಲಿ ಯಾವುದೇ ಬದಲಾವಣೆ ಅಗತ್ಯ ಇಲ್ಲ. ಒಟ್ನಲ್ಲಿ 1050 ದಿನಗಳ ಕಾಲ ಅಜೇಯ ವಿಜಯಯಾತ್ರೆ ಮಾಡಿದ್ದ ಭಾರತ ಈಗ ಒಂದು ಗೆಲುವೂ ನೋಡೋಕೆ ಆಗಿಲ್ಲ. ಶ್ರೇಯಸ್ ಕ್ಯಾಪ್ಟನ್ಸಿ ತೀರಾ ಕಳಪೆಯಾಗಿ ಸ್ಟಾರ್ಟ್ ಆಗಿದೆ. ಇದು ಹೀಗೇ ಮುಂದುವರಿದ್ರೆ ಟೀಂ ಇಂಡಿಯಾಗೆ ದೊಡ್ಡ ಡ್ಯಾಮೇಜ್ ಆಗಬಹುದು.

ನೋಡಿರಿ
