ವಿನಯ್ ಚಮಚ ಈಗ ನಮ್ರತಾ ಅಲ್ಲ..ಸಂಗೀತಾ..! – ಗುಂಪುಗಾರಿಕೆ ವಿರುದ್ಧ ಡ್ರೋನ್ ಹಾರಾಟ..!

ವಿನಯ್ ಚಮಚ ಈಗ ನಮ್ರತಾ ಅಲ್ಲ..ಸಂಗೀತಾ..! – ಗುಂಪುಗಾರಿಕೆ ವಿರುದ್ಧ ಡ್ರೋನ್ ಹಾರಾಟ..!

ಬಿಗ್‌ಬಾಸ್ ಮನೆಯಲ್ಲಿ ಆನೆ ನಡೆದಿದ್ದೇ ದಾರಿ ಎಂದು ದುರಹಂಕಾರದಿಂದ ಮೆರೆಯುತ್ತಿದ್ದ ವಿನಯ್ ಮದವನ್ನು ಕಿಚ್ಚ ಸುದೀಪ್ ಇಳಿಸಿದ್ದಾಯ್ತು. ಈಗ ಸಂಗೀತಾ ಸರದಿ. ನಾನೇ ಸರಿ. ಬೇರೆಯವರದ್ದೇ ತಪ್ಪು ಎಂಬ ಧೋರಣೆ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮೊದಲು ಕಾರ್ತಿಕ್ ಮತ್ತು ತನಿಷಾ ಸ್ನೇಹವನ್ನೇ ಸಂದೇಹದಿಂದ ನೋಡಿದ್ದರು ಸಂಗೀತಾ. ಈಗ ದೀದಿ ದೀದಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಡ್ರೋನ್ ಪ್ರತಾಪ್ ಕೂಡಾ ಸಂಗೀತಾಗೆ ಸರಿಯೆಂದು ಕಾಣಿಸುತ್ತಿಲ್ಲ. ಪ್ರತಾಪ್ ವಿರುದ್ಧವೂ ಚುಚ್ಚುಮಾತು ಆಡಿ ಸಂಗೀತಾ ವೀಕ್ಷಕರ ದೃಷ್ಟಿಯಲ್ಲಿ ಕಳಪೆಯಾಗಿದ್ದಾರೆ.

ಇದನ್ನೂ ಓದಿ: ಕಳಚಿತು ಸಂಗೀತಾ ಸ್ನೇಹದ ಮುಖವಾಡ – ಸಂಗೀತಾ, ನಮ್ರತಾ ಸೇಡು, ಬಿಗ್‌ಬಾಸ್ ಮನೆ ದಂಗು..!

ಬಿಗ್‌ಬಾಸ್ ಆರಂಭದಲ್ಲಿ ವೀಕ್ಷಕರ ಮನಗೆದ್ದಿದ್ದ ಸಂಗೀತಾ ಶೃಂಗೇರಿ ವರ್ತನೆ ಈಗ ಬರ್ತಾ ಬರ್ತಾ ಬದಲಾಗುತ್ತಿದೆ. ಮೊದಲು ವಿನಯ್ ರಂಪಾಟಕ್ಕೆ ತಕ್ಕ ಆಟ ಆಡಿ ವೀಕ್ಷಕರ ಮನಗೆದ್ದಿದ್ದರು ಸಂಗೀತಾ. ಆದರೆ, ಈಗ ವಿನಯ್ ಚಮಚ ಆಗಿ ಬದಲಾಗುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಕಾರ್ತಿಕ್ ಮತ್ತು ತನಿಷಾ ಜೊತೆಗಿನ ಸ್ನೇಹ ಕಟ್ ಆದ ಮೇಲೆ ಸಂಗೀತಾ,  ವಿನಯ್ ಗುಂಪಿನ ಜೊತೆ ಸೇರಿಕೊಂಡಿದ್ದಾರೆ. ಇದರ ಮಧ್ಯೆ ದೀದಿ ದೀದಿ ಎಂದು ಸಂಗೀತಾನ ಬೆಂಬಲಿಸುತ್ತಲೇ ಬಂದ ಪ್ರತಾಪ್ ವಿರುದ್ಧವೇ ಸಂಗೀತಾ ಚುಚ್ಚು ಮಾತುಗಳನ್ನು ಆಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದೆ. ಬಾತ್‌ರೂಮ್ ವಿಚಾರಕ್ಕೆ ವಿನಯ್ ಹಾಗೂ ಸ್ನೇಹಿತ್ ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದರು. ಇದನ್ನು ಪ್ರತಾಪ್ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ನೇಹಿತ್ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದನ್ನು ತಮ್ಮ ಗುಂಪಿನಲ್ಲಿ ಹೇಳಿಕೊಂಡು ನಕ್ಕಿದ್ದಾರೆ ವಿನಯ್. ‘ಇದೊಂದು ವಿಚಾರ ಇಟ್ಟುಕೊಂಡ್ರೆ ಕೊನೆಯವರೆಗೂ ಇದನ್ನೇ ಹೇಳ್ತಾ ಇರ್ತಾನೆ’ ಎಂದು ನಮ್ರತಾ ಹೇಳಿದ್ದಾರೆ. ‘ಒಂದು ವಿಚಾರ ಕಚ್ಕೊಂಡ್ರೆ ಮುಗ್ದೋಯ್ತು’ ಎಂದು ಸಂಗೀತಾ ನಗುತ್ತಾ ಹೇಳಿದ ಮಾತು ಅನೇಕರ ಕೋಪಕ್ಕೆ ಕಾರಣ ಆಗಿದೆ. ಸಂಗೀತಾ ಶೃಂಗೇರಿ ಅವರು ತುಂಬಾನೇ ಬದಲಾಗಿದ್ದಾರೆ. ವಿನಯ್ ಅವರ ಗುಂಪಿನ ಜೊತೆ ಸೇರಿದಾಗಿನಿಂದಲೂ ಅವರನ್ನು ವೀಕ್ಷಕರು ನೋಡುತ್ತಿರುವ ರೀತಿ ಬದಲಾಗಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ 11 ಸಾವಿರ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ದಿನ ಕಳೆದಂತೆ ಅವರ ಹಿಂಬಾಲಕರ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಇದೇ ರೀತಿ ಆದರೆ, ಅವರು ಶೀಘ್ರದಲ್ಲೇ ಮನೆಯಿಂದ ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ.

Sulekha