ಕಾರ್ತಿಕ್, ಸಂಗೀತಾ ಮಧ್ಯೆ ಹುಳಿ ಹಿಂಡ್ತೀನಿ ಎಂದ ವಿನಯ್ – ಹಳೇ ಸ್ನೇಹಿತರ ಗೆಲುವು ಸಹಿಸಿಕೊಳ್ಳದೆ ಚಡಪಡಿಸಿದ ಸಂಗೀತಾ

ಕಾರ್ತಿಕ್, ಸಂಗೀತಾ ಮಧ್ಯೆ ಹುಳಿ ಹಿಂಡ್ತೀನಿ ಎಂದ ವಿನಯ್ – ಹಳೇ ಸ್ನೇಹಿತರ ಗೆಲುವು ಸಹಿಸಿಕೊಳ್ಳದೆ ಚಡಪಡಿಸಿದ ಸಂಗೀತಾ

ಬಿಗ್ ಬಾಸ್ ಶೋನಲ್ಲಿ ಈ ಬಾರಿ ಹ್ಯಾಪಿ ಇದೆ ಅಂತಾ ಹೇಳಿದ್ದೇ ಬಂತು. ಬರೀ ಕಿತ್ತಾಟ, ಕೂಗಾಟ, ದ್ವೇಷವೇ ಶೋನ ಹೈಲೆಟ್ಸ್ ಆಗಿದೆ. ಇದರ ಮಧ್ಯೆ ಸ್ನೇಹದ ವಿಚಾರವಾಗಿ ಎಡವಿದ ಸಂಗೀತಾಗೆ ನೆಮ್ಮದಿಯೇ ಇಲ್ಲ. ವಿನಯ್ ಟೀಂನಲ್ಲಿ ಆಡುತ್ತಿರುವ ಸಂಗೀತಾಗೆ ತನಿಷಾ, ಕಾರ್ತಿಕ್ ಗೆಲುವನ್ನು ತಡೆದುಕೊಳ್ಳಲಾಗ್ತಿಲ್ಲ. ಇತ್ತ ವಿನಯ್ ಟೀಮ್‌ನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಹುಳಿಹಿಂಡುವ ಪ್ರಯತ್ನ ಮತ್ತಷ್ಟೂ ಹೆಚ್ಚಾಗಿದೆ.

ಇದನ್ನೂ ಓದಿ: ವಿನಯ್ ಚಮಚ ಈಗ ನಮ್ರತಾ ಅಲ್ಲ..ಸಂಗೀತಾ..! – ಗುಂಪುಗಾರಿಕೆ ವಿರುದ್ಧ ಡ್ರೋನ್ ಹಾರಾಟ..!

ಕಾರ್ತಿಕ್ ಮತ್ತು ತನಿಷಾ ನಡುವಿನ ಸ್ನೇಹವನ್ನು ಕಟ್ ಮಾಡಿಕೊಂಡು ವಿನಯ್ ಟೀಮ್ ಸೇರಿರುವ ಸಂಗೀತಾಗೆ ಮಾಡಿದ್ದುಣ್ಣೋ ಮಹಾರಾಯ ಸ್ಥಿತಿ ಎದುರಾಗಿದೆ. ಯುನಿಟಿ ಇಲ್ಲ ಎನ್ನುವ ಕಾರಣಕ್ಕೆ ಸಂಗೀತಾ ಕಾರ್ತಿಕ್ ಟೀಂನಿಂದ ವಿನಯ್ ಟೀಂಗೆ ಬಂದರು. ಆದರೆ ಹಳೆಯ ಟೀಂ ಗೆದ್ದರೆ ಅವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಹೌದು, ಲೆವಿಸ್ಟಾ ಕಾಫಿ ಟಾಸ್ಕ್ ಬಂದಾಗ ತನಿಷಾ, ಸಿರಿ ಅವರು ಗೆದ್ದರು. ಅದನ್ನು ಸಂಗೀತಾಗೆ ನೋಡಲು ಆಗಲೇ ಇಲ್ಲ. ಜಯ ಘೋಷಣೆ ಆಗುತ್ತಿದ್ದಂತೆ ಅವರು ಅಲ್ಲಿಂದ ಹೊರಗಡೆ ಹೋದರು. ಇದರ ಬಗ್ಗೆ ನಮ್ರತಾ ಕೂಡ ವಿನಯ್ ಮುಂದೆ ಹೇಳಿಕೊಂಡಿದ್ದಾರೆ. ತನಿಷಾ ಗೆಲ್ಲುತ್ತಿದ್ದಂತೆ ಸಂಗೀತಾ ಅವರು ಬೇಸರ ಮಾಡಿಕೊಂಡು ಹೋದರು ಎಂದು ನಮ್ರತಾ ವಿನಯ್ ಮುಂದೆ ಹೇಳಿದ್ದಾರೆ. ಆಗ ವಿನಯ್, ಮತ್ತು ಸ್ನೇಹಿತ್ ಅವರು ಬೇಸರ ಆದರೆ ಮಾಡಿಕೊಳ್ಳಲಿ ಬಿಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಸಂಗೀತಾಗೆ ಕಾರ್ತಿಕ್, ತನಿಷಾ ಗೆಲುವು ಸಹಿಸಲು ಆಗುತ್ತಿಲ್ಲ ಎಂದು ವಿನಯ್ ಹೇಳಿದ್ದಾರೆ.

ಇನ್ನು ಸಂಗೀತಾ ಅವರನ್ನು ವಿನಯ್ ಗೌಡ ಟೀಂ ಹೃದಯತುಂಬಿ ಸ್ವೀಕರಿಸಿಲ್ಲ ಅನ್ನೋದಂತೂ ಸತ್ಯ. ಯಾಕೆಂದರೆ ಸಂಗೀತಾ ಬಗ್ಗೆ ಬೆನ್ನ ಹಿಂದೆ ಮಾತಾಡುತ್ತಲೇ ಇದ್ದಾರೆ. ಸಂಗೀತಾರಿಂದ ನಮ್ಮ ತಂಡ ಗೆಲ್ಲಬಹುದು, ಕಾರ್ತಿಕ್ ಟೀಂನಲ್ಲಿದ್ದ ಒಗ್ಗಟ್ಟನ್ನು ಒಡೆದು ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ ಅಂತಲೇ ಅಂದುಕೊಂಡಿರೋದು ಗೊತ್ತಾಗಿದೆ. ಇನ್ನೊಂದು ಕಡೆ ಕಾರ್ತಿಕ್, ಸಂಗೀತಾ ಮಧ್ಯೆ ಹುಳಿ ಹಿಂಡ್ತೀನಿ ಅಂತ ವಿನಯ್ ಅವರು ಒಪನ್ ಆಗಿ ಹೇಳಿದ್ದಾರೆ. ವಿನಯ್ ತಂಡದ ಮುಂದೆ ಕಾರ್ತಿಕ್, ತನಿಷಾ ಬಗ್ಗೆ ಸಂಗೀತಾ ಅವರು ಚಾಡಿ ಹೇಳುತ್ತಿದ್ದಾರೆ. ಆದರೆ ವಿನಯ್, ಸ್ನೇಹಿತ್, ನಮ್ರತಾ ಗೌಡ ಅವರು ನನ್ನ ಬೆನ್ನ ಹಿಂದೆ ಚೂರಿ ಹಾಕ್ತಿರೋದು ಸಂಗೀತಾಗೆ ಅರ್ಥ ಆಗ್ತಿಲ್ಲ.

Sulekha