ಕಳಚಿತು ಸಂಗೀತಾ ಸ್ನೇಹದ ಮುಖವಾಡ – ಸಂಗೀತಾ, ನಮ್ರತಾ ಸೇಡು, ಬಿಗ್‌ಬಾಸ್ ಮನೆ ದಂಗು..!
ಸ್ನೇಹದ ನೆಪದಲ್ಲಿ ಸ್ವಾರ್ಥಿಯಾದ ಸಂಗೀತಾ – ಕಾರ್ತಿಕ್, ತನಿಷಾ ಮೇಲೆ ಅದೆಂಥಾ ದ್ವೇಷ?

ಕಳಚಿತು ಸಂಗೀತಾ ಸ್ನೇಹದ ಮುಖವಾಡ – ಸಂಗೀತಾ, ನಮ್ರತಾ ಸೇಡು, ಬಿಗ್‌ಬಾಸ್ ಮನೆ ದಂಗು..!ಸ್ನೇಹದ ನೆಪದಲ್ಲಿ ಸ್ವಾರ್ಥಿಯಾದ ಸಂಗೀತಾ – ಕಾರ್ತಿಕ್, ತನಿಷಾ ಮೇಲೆ ಅದೆಂಥಾ ದ್ವೇಷ?

ಸ್ನೇಹ ಅಂದರೆ ನಂಬಿಕೆ. ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ಇರುವ ಗೌರವ. ಸ್ನೇಹಕ್ಕೆ ಒಂದು ಮೌಲ್ಯವಿದೆ. ಸ್ನೇಹಿತರು ಯಾವಾಗಲೂ ನಮ್ಮ ಪರ ಇರಬೇಕು. ನಾವು ಏನೂ ಮಾಡಿದರು ಸಹಿಸಿಕೊಂಡೇ ಇರಬೇಕು. ನನ್ನ ಜೊತೆ ಬಿಟ್ಟು ಮತ್ಯಾರಿಗೂ ಸಹಾಯ ಮಾಡಬಾರದು. ಇದು ಸ್ನೇಹ ಆಗುವುದಿಲ್ಲ, ಅದು ಸ್ವಾರ್ಥ. ಬಹುಶಃ ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ಇದಕ್ಕೆ ತಾಜಾ ಉದಾಹರಣೆ. ಜೊತೆಗೆ ನಮ್ರತಾ ಬಾಯಿ ಕಂಡು ಅಬ್ಬಬ್ಬಾ.. ಇದೇನು ಬಾಯಿಯೋ ಬೊಂಬಾಯಿಯೋ ಅಂತಾ ವೀಕ್ಷಕರು ಕೇಳುತ್ತಿದ್ದಾರೆ.

ಇದನ್ನೂ ಓದಿ:  ಈ ವಾರ ಡಬಲ್ ಎಲಿಮಿನೇಷನ್ -ಬಿಗ್‌ಬಾಸ್ ಮನೆಯಿಂದ ಇಶಾನಿ ಮತ್ತು ಭಾಗ್ಯಶ್ರೀ ಔಟ್

ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಕಾರ್ತಿಕ್ ಟೀಂನಿಂದ ಸಂಗೀತಾ ಶೃಂಗೇರಿ ಅವರು ವಿನಯ್ ಟೀಂಗೆ ಶಿಫ್ಟ್ ಆಗಿದ್ದಾರೆ. ಬಿಗ್ ಬಾಸ್ ಸವಾಲು ಹಾಕುವ ಹೊಸ ಟಾಸ್ಕ್ ನೀಡಿದ್ದು, ಅದರಲ್ಲಿ ಸಂಗೀತಾ ಕಾರ್ತಿಕ್‌ಗೆ ಹಾಕಿದ ಸವಾಲು ಕೇಳಿ ಅನೇಕರು ಶಾಕ್ ಆಗಿದ್ದಾರೆ. ಸಂಗೀತಾ, ಕಾರ್ತಿಕ್ ಮತ್ತು ತನಿಷಾ ಉತ್ತಮ ಸ್ನೇಹಿತರಾಗಿದ್ದರು. ಆದರೆ, ಕಾರ್ತಿಕ್ ಮತ್ತು ತನಿಷಾ ಕಡೆಯಿಂದ ಯಾವ ತಪ್ಪು ಆಗುವಂತಿಲ್ಲ ಅನ್ನೋದು ಸಂಗೀತಾಳ ವಾದ. ಸಂಗೀತಾ ಹೇಗೆ ಬೇಕಾದರೂ ಇರಬಹುದು. ಆದರೆ, ಕಾರ್ತಿಕ್ ಮತ್ತು ತನಿಷಾ ಸಂಗೀತಾ ವಿರುದ್ಧ ಹೋಗುವಂತಿಲ್ಲ. ಟಾಸ್ಕ್ ವೇಳೆ ಅನಿವಾರ್ಯವಾಗಿ ಬೇರೆ ನಿರ್ಧಾರ ಕೈಗೊಂಡಿದ್ದಕ್ಕೆ ಸಂಗೀತಾ ಆಡಿದ ಮಾತು, ಸಂಗೀತಾಳ ಮನಸ್ಥಿತಿ ನೋಡಿದಾಗಲೇ ಈಕೆ ಇವರ ಸ್ನೇಹ ಮಾಡಿದ್ದು ಕೇವಲ ಸ್ವಾರ್ಥಕ್ಕಾಗಿ ಅನ್ನೋದು ವೀಕ್ಷಕರಿಗೆ ಮನದಟ್ಟಾಗಿತ್ತು. ಅದಕ್ಕೆ ಸರಿಯಾಗಿ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಸಂಗೀತಾಳಿಗೆ ಪರೋಕ್ಷವಾಗಿಯೇ ಸ್ನೇಹದ ಬಗ್ಗೆ ಒಂದೆರೆಡು ಕಿವಿಮಾತು ಹೇಳಿದ್ದರು. ಆದರೆ, ಸಂಗೀತಾ ಮಾತ್ರ ಪರಮಸ್ವಾರ್ಥಿಯಾಗಿ ಈ ವಾರದ ಆರಂಭದಲ್ಲೇ ಅನೇಕ ಮನಸುಗಳಿಗೆ ಗಾಯ ಮಾಡಿದ್ದಾರೆ. ಇನ್ನು ಸಂಗೀತಾ ಜೊತೆಯಾಗಿದ್ದು ನಮ್ರತಾ. ಮೊದಲೇ ಏಕವಚನದಲ್ಲಿ ಬೈಗುಳಕ್ಕೆ ನಮ್ರತಾ ಬಿಗ್‌ಬಾಸ್ ಮನೆಯಲ್ಲಿ ಫೇಮಸ್.

ಕಾರ್ತಿಕ್ ಹಾಗೂ ತುಕಾಲಿ ಸಂತು ಇಬ್ಬರೂ ತಲೆಯನ್ನು ಸಂಪೂರ್ಣ ಶೇವ್ ಮಾಡಿಕೊಳ್ಳಬೇಕು ಎಂದು ಸಂಗೀತಾ ಹೇಳಿದ್ದಾರೆ. ಟಾಸ್ಕ್ ಗೋಸ್ಕರ ಕಾರ್ತಿಕ್ ಮತ್ತು ತುಕಾಲಿ ಸಂತು ಸವಾಲನ್ನು ಸ್ವೀಕರಿಸಿದ್ದಾರೆ. ಇದನ್ನು ನೋಡಿ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಏನ್ ಆಗ್ತಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದ್ದು, ಅದನ್ನು ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಗಜಕೇಸರಿ ಹಾಗೂ ಸಂಪತ್ತಿಗೆ ಸವಾಲ್ ಎಂದು ಎರಡು ತಂಡವನ್ನು ಮಾಡಲಾಗಿತ್ತು. ಸ್ಪರ್ಧಿಗಳು ತಮ್ಮ ಎದುರಾಳಿ ತಂಡಕ್ಕೆ ಸವಾಲನ್ನು ನೀಡಿದ್ದರು. ಈ ಬಾರಿ ಸಂಗೀತಾ ಅವರು ಕಾರ್ತಿಕ್ ಟೀಂನಲ್ಲಿ ಇಲ್ಲ. ಹೀಗಾಗಿ ಸಂಗೀತಾ ಅವರು ಕಾರ್ತಿಕ್, ತುಕಾಲಿ ಸ್ಟಾರ್ ಸಂತುಗೆ ತಲೆ ಕೂದಲನ್ನು ಶೇವ್ ಮಾಡಬೇಕು ಅಂತ ಸವಾಲು ನೀಡಿದ್ದರು. ಕೂದಲು ಎಲ್ಲಿಯೂ ಹೋಗಲ್ಲ, ಮತ್ತೆ ಬರುತ್ತೆ. ನನ್ನ ತಂಡಕ್ಕೋಸ್ಕರ, ಪಾಯಿಂಟ್ಗೋಸ್ಕರ ಈ ಸವಾಲನ್ನು ಸ್ವೀಕಾರ ಮಾಡ್ತೀನಿ ಅಂತ ಕಾರ್ತಿಕ್ ಅವರು ಶೇವ್ ಮಾಡಿಸಿಕೊಂಡಿದ್ದಾರೆ. ಸಂತು ಕೂಡ ಶೇವ್ ಮಾಡಿಸಿಕೊಂಡಿದ್ದಾರೆ. ಸಂಗೀತಾ ಅವರು ಈ ರೀತಿ ಸವಾಲು ಕೊಟ್ಟಿದ್ದು ನೋಡಿ ತನಿಷಾ ಕುಪ್ಪಂಡಗೆ ಸಿಟ್ಟು ಬಂದಿದೆ. ಇಬ್ಬರ ಬದಲು ಒಬ್ಬರಿಗೆ ಈ ಟಾಸ್ಕ್ ಕೊಡಿ, ಇಷ್ಟ ಬಂದ ಹಾಗೆ ಮಾತಾಡಬೇಡಿ, ಅದು ಆಗಲ್ಲ  ಅಂತ ತನಿಷಾ ಅವರು ಸಂಗೀತಾಗೆ ಹೇಳಿದ್ದಾರೆ. ನೀವು ಸಡನ್ ಆಗಿ ಮಾತನಾಡಬೇಡಿ ಅಂತ ಸಂಗೀತಾ ಅವರು ತನಿಷಾಗೆ ಹೇಳಿದ್ದಾರೆ. ಇನ್ನೊಂದು ಕಡೆ ನಮ್ರತಾ ಗೌಡ, ಬಾಯಿಗೆ ಇದೆ ಅಂತ ಮಾತಾಡಬೇಡಿ, ಏನ್ ಪ್ರಾಬ್ಲಮ್ ನಿಂದು? ಮುಚ್ಕೊಂಡು ಇರಬೇಕು ಎಂದು ತನಿಷಾ ಜೊತೆ ಜಗಳ ಆಡಿದ್ದಾರೆ. ಸಂಗೀತಾ ಅವರು ಈ ಸವಾಲು ಕೊಟ್ಟಿದ್ದು, ಕಾರ್ತಿಕ್ ತಲೆ ಬೋಳಿಸಿಕೊಂಡಿದ್ದು ನೋಡಿ ತನಿಷಾ ಬೇಸರ ಮಾಡಿಕೊಂಡಿದ್ದಾರೆ. ನಿಮಗೆ ಖುಷಿ ಆಯ್ತಾ ಮೇಡಂ ಎಂದು ತನಿಷಾ ಅವರು ಸಂಗೀತಾಗೆ ಕೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ತಿಳಿದು ಅನೇಕರು ಬೇಸರ ಮಾಡಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸ್ಟಾರ್ ಸಂತು ಅವರಿಗೆ ಸಂಗೀತಾ ಈ ರೀತಿ ಟಾಸ್ಕ್ ನೀಡಿದ್ದು ನೋಡಿ ಅನೇಕರಿಗೆ ಬೇಜಾರಾಗಿದೆ. ಕಾರ್ತಿಕ್ ಹಾಗೂ ತನಿಷಾ ಅವರು ನನಗೆ ಆದ್ಯತೆ ಕೊಡಲ್ಲ, ಟಾಸ್ಕ್ನಲ್ಲಿ ಅವರು ನನ್ನ ಹೆಸರನ್ನು ತಗೊಳ್ಳಲ್ಲ ಅಂತ ಸಂಗೀತಾಗೆ ಬೇಸರವಿದೆ. ಇನ್ನು ಕಾರ್ತಿಕ್ ಅವರು ತನಿಷಾರನ್ನು ಬೆಂಬಲಿಸಿದ್ರೆ ಅದು ಸಂಗೀತಾಗೆ ಇಷ್ಟವಾಗಲ್ಲ. ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಸ್ನೇಹವಿದೆ. ಕಾರ್ತಿಕ್ ತನ್ನನ್ನು ಬಿಟ್ಟು ಬೇರೆಯವರಿಗೆ ಆದ್ಯತೆ ಕೊಟ್ಟರೆ ಅದನ್ನು ಸಂಗೀತಾ ಒಪ್ಪೋದಿಲ್ಲ. ಸಂಗೀತಾ ಮನಸಲ್ಲಿರುವ ಸೇಡು ಈ ಟಾಸ್ಕ್‌ನಲ್ಲಿ ಬಯಾಲಾಗಿದೆ. ಸಂಗೀತಾಳ ಸ್ನೇಹದ ನೆಪದಲ್ಲಿ ಇಷ್ಟು ದಿನ ಇದ್ದ ಸ್ವಾರ್ಥದ ಮುಖವಾಡ ಕಳಚಿಬಿದ್ದಿದೆ.

Sulekha