ಕುಸ್ತಿಯಲ್ಲಿ ಗೆದ್ದರೂ ಸಂಗೀತಾಗೆ ಸಿಕ್ಕಿದ್ದು ‘ಕಳಪೆ’ – ಯಾರಿಗೂ ಗೌರವ ನೀಡದ ಕಾರಣಕ್ಕೆ ಕಳಪೆ ಕೊಟ್ಟಿದ್ದೇವೆ ಎಂದ ವಿನಯ್ ಟೀಮ್

ಕುಸ್ತಿಯಲ್ಲಿ ಗೆದ್ದರೂ ಸಂಗೀತಾಗೆ ಸಿಕ್ಕಿದ್ದು ‘ಕಳಪೆ’ – ಯಾರಿಗೂ ಗೌರವ ನೀಡದ ಕಾರಣಕ್ಕೆ ಕಳಪೆ ಕೊಟ್ಟಿದ್ದೇವೆ ಎಂದ ವಿನಯ್ ಟೀಮ್

ಬಿಗ್‌ಬಾಸ್ ಮನೆಯಲ್ಲಿ ಪ್ರತಿವಾರ ಮನೆಯಲ್ಲಿ ಯಾರಾದರೂ ಒಬ್ಬರು ಕಳಪೆ ಪಾತ್ರ ವಹಿಸಲೇ ಬೇಕು. ಅದೇ ರೀತಿ ಈ ವಾರ ಕಳಪೆ ಪಟ್ಟ ಸಿಕ್ಕಿದ್ದು ಸಂಗೀತಾಗೆ. ವಿನಯ್ ತಂಡದ ಎಲ್ಲಾ ಸದಸ್ಯರು ಮಾತಾಡಿಕೊಂಡೇ ಸಂಗೀತಾರನ್ನು ಕಳಪೆ ಎಂದು ಪಟ್ಟ ಕಟ್ಟುತ್ತಾರೆ. ಆದರೆ, ಬಿಗ್‌ಬಾಸ್ ಮನೆಯಲ್ಲಿ ಚರ್ಚೆ ಮಾಡಿಕೊಂಡು ಈ ರೀತಿ ಆಯ್ಕೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ವೀಕ್ಷಕರದ್ದು.ಇದು ಸ್ಪಷ್ಟವಾಗಿ ಗ್ರೂಪಿಸಂ ಹಾಗೂ ಫಿಕ್ಸಿಂಗ್ ಗೇಮ್‌ನ ಇಂಪ್ಯಾಕ್ಟ್ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಆಚೆ ಹೋಗೋ ದಿನ ಬಂತು ಅಂದ್ರೆ ಒಬ್ಬನಿಗೆ ಹೊಡೆದ್ಬುಟ್ಟೇ ಹೋಗೋದು – ಬಿಗ್‌ಬಾಸ್ ಸ್ಪರ್ಧಿ ವಿನಯ್ ಮಾತಿನ ಅರ್ಥವೇನು?

ವಿನಯ್ ತಂಡದ ಎಲ್ಲರೂ ಮಾತಾಡಿಕೊಂಡು ಚರ್ಚೆ ಮಾಡಿಕೊಂಡು ಸಂಗೀತಾ ಅವರನ್ನ ಕಳಪೆ ಎಂದು ಸೂಚಿಸಿದ್ದಾರೆ. ಇನ್ನೂ ಹಲವರು ಅಂದರೆ ವಿನಯ್ ತಂಡದ ಹಲವರು ಸಂಗೀತಾ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ವಿನಯ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂಬುದು ಯಾರೂ ಹೇಳಬೇಕಾಗಿಲ್ಲ. ವಿನಯ್ ಕಣ್ಣು ಯಾವಾಗಲೂ ಸಂಗೀತಾ ಮೇಲೆ ಇರೋದು. ಅದರಲ್ಲೂ ವಿನಯ್ ಟೀಮ್ ನಲ್ಲಿರು ರಕ್ಷಕ್, ತುಕಾಲಿ ಸಂತೋಷ್, ನಮ್ರತಾ, ಸ್ನೇಹಿತ್, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಸ್ನೇಹಿತ್ ಅವರಂತೂ, ‘ಇಡೀ ಮನೆಯ ವಾತಾವರಣವೇ ಹಾಳಾಗಿದೆ’ ಎಂದೂ ಹೇಳಿದ್ದಾರೆ. ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಇಡೀ ಮನೆ ನನ್ನ ಅಗೇನಸ್ಟ್ ಇರೋ ಹಾಗಿದೆ ಅನಿಸ್ತಿದೆ’ ಎಂದೂ ಹೇಳಿದ್ದಾರೆ. ಅಂತಿಮವಾಗಿ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ.

‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ವಿನಯ್ ಗೌಡ ಸ್ಪಷ್ಟವಾಗಿ ಗ್ರೂಪಿಸಂ ಮಾಡುತ್ತಿದ್ದಾರೆ. ನಾಮಿನೇಷನ್, ಕಳಪೆ, ಕ್ಯಾಪ್ಟೆನ್ಸಿ ಹಾಗೂ ಬೆಸ್ಟ್ ಪರ್ಫಾಮೆನ್ಸ್… ವಿಷಯಗಳಲ್ಲಿ ಕೆಲ ಸ್ಪರ್ಧಿಗಳ ಬ್ರೇನ್ ವಾಶ್‌ ಮಾಡಿ, ಮ್ಯಾನಿಪ್ಯುಲೇಟ್ ಮಾಡುತ್ತಿದ್ದಾರೆ ವಿನಯ್. ನಾಮಿನೇಷನ್ ಮತ್ತು ಕಳಪೆ ವಿಚಾರದಲ್ಲಿ ಈಗಾಗಲೇ ಓಪನ್ ಚರ್ಚೆ ಮಾಡಿ ಕೆಲ ಸ್ಪರ್ಧಿಗಳನ್ನ ವಿನಯ್ ಇನ್‌ಫ್ಲುಯೆನ್ಸ್ ಮಾಡಿದ್ದರು. ಇದೀಗ ಪ್ಲಾನ್ ಪ್ರಕಾರ, ಸಂಗೀತಾ ಅವರಿಗೆ ‘ಕಳಪೆ’ ಪಟ್ಟ ಲಭಿಸಿದೆ. ಅದಕ್ಕೆ ‘’ಇನ್‌ಫ್ಲುಯೆನ್ಸ್ ಆದವರಿಂದ ಬಂದ ಕಾರಣಗಳೂ ‘ಕಳಪೆ’ಯಾಗಿತ್ತು’’ ಅನ್ನೋದು ವೀಕ್ಷಕರ ಅಭಿಪ್ರಾಯವಾಗಿದೆ. ಆದರೆ, ಇದೆಲ್ಲಾ ವಿಚಾರವನ್ನು ಮುಂದಿಟ್ಟುಕೊಂಡು ವೀಕ್ಷಕರು ಕೂಡಾ ಕಿಚ್ಚ ಸುದೀಪ್ ಈ ವಾರವಾದರೂ ಇದಕ್ಕೆಲ್ಲಾ ಬ್ರೇಕ್ ಹಾಕಲಿ ಅಂತಾ ಕಾಯುತ್ತಿದ್ದಾರೆ.

Sulekha