ನಾಯಕತ್ವದಿಂದ ಕೆಳಗಿಳಿದ ಧೋನಿ – CSK ತಂಡಕ್ಕೆ ಹೊಸ ಸಾರಥಿ!  

ನಾಯಕತ್ವದಿಂದ ಕೆಳಗಿಳಿದ ಧೋನಿ – CSK ತಂಡಕ್ಕೆ ಹೊಸ ಸಾರಥಿ!  

ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಫಿವರ್‌ ಶುರುವಾಗಿದೆ.  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಶುಕ್ರವಾರದಿಂದಲೇ ಶುರುವಾಗಲಿದೆ. ಚೆನ್ನೈ ಸೂಪರ್​ ಕಿಂಗ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಶುಕ್ರವಾರ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಈ ಮುನ್ನವೇ ಸಿಎಸ್‌ಕೆ  ಫ್ಯಾನ್ಸ್​ಗೆ ಬಿಗ್​​ ಶಾಕ್​​​ ಎದುರಾಗಿದೆ.

ಹೌದು, ಶುಕ್ರವಾರದಿಂದ ಐಪಿಎಲ್‌ ಶುರುವಾಗಲಿದೆ. ಈ ಮಧ್ಯೆಯೇ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಸ್ಥಾನದಿಂದ ಅನುಭವಿ ಆಟಗಾರ ಎಂಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ರುತುರಾಜ್‌ ಗಾಯಕ್ವಾಡ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ: IPLಗೂ ಮುನ್ನ ದೇವರ ಮೊರೆ ಹೋದ ಕೆ.ಎಲ್‌ ರಾಹುಲ್​​ – IPLನಲ್ಲಿ ಭಕ್ತನ ಕೈಹಿಡಿತಾನಾ ಮಹಾಕಾಳೇಶ್ವರ..?

ಸಿಎಸ್​ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಇವರ ಬದಲಿಗೆ ಈಗ ಋತುರಾಜ್​​ ಗಾಯಕ್ವಾಡ್​​ ಸಿಎಸ್​ಕೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಚೆನ್ನೈ ಪ್ರಾಂಚೈಸಿ ತಿಳಿಸಿದೆ. ಇಷ್ಟೇ ಅಲ್ಲ ಧೋನಿ ಆಟಗಾರನಾಗಿ ಚೆನ್ನೈ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಿಎಸ್‌ಕೆ ತಿಳಿಸಿದೆ.

2008ರ ಐಪಿಎಲ್ ಆರಂಭದಿಂದಲೂ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಕೇವಲ ಆಟಗಾರನಾಗಿ ಇನ್ನು ಮುಂದೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Shwetha M