ಕಸಾಯಿಖಾನೆಗೆ ಕರೆತಂದವನ ಕೊಂದ ಎಮ್ಮೆ- ಮೂಕ ಪ್ರಾಣಿಯ ಸೇಡಿಗೆ ಬೆಚ್ಚಿಬಿದ್ದ ಜನ..!

ಕಸಾಯಿಖಾನೆಗೆ ಕರೆತಂದವನ ಕೊಂದ ಎಮ್ಮೆ- ಮೂಕ ಪ್ರಾಣಿಯ ಸೇಡಿಗೆ ಬೆಚ್ಚಿಬಿದ್ದ ಜನ..!

ಕಸಾಯಿಖಾನೆಗೆ ಎಮ್ಮೆಯೊಂದನ್ನ ಹಿಡಿದುಕೊಂಡು ಬಂದವನೇ ಬಲಿಯಾಗಿರುವ ಘಟನೆಯೊಂದು ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, ಎಮ್ಮೆ ತನ್ನನ್ನು ಕಾಪಾಡಿಕೊಳ್ಳಲು ಹೋಗಿ 25 ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದೆ. ಮೂಕ ಪ್ರಾಣಿಯ ಸೇಡು ನೋಡಿ ಅಲ್ಲಿನ ಜನ ಕೂಡಾ ಬೆಚ್ಚಿಬಿದ್ದಿದ್ದಾರೆ.  ಚಿತ್ರದುರ್ಗ ಮೂಲದ ಸಾದೀಕ್ (22) ಮೃತ ಯುವಕ. ಸಾದೀಕ್ ಎಮ್ಮೆಯೊಂದನ್ನು ವಾಹನದ ಮೂಲಕ ಮೊಗ್ರಾಲ್ ಪುತ್ತೂರಿನಲ್ಲಿರುವ ಕಸಾಯಿಖಾನೆಗೆ ತಂದಿದ್ದ. ಬಳಿಕ ಯುವಕರ ತಂಡ ಎಮ್ಮೆಯನ್ನು ವಾಹನದಿಂದ ಕೆಳಗಿಳಿಸುವಾಗ ಹಗ್ಗ ತುಂಡಾಗಿದೆ. ಅಷ್ಟರಲ್ಲಿ ರೊಚ್ಚಿಗೆದ್ದ ಎಮ್ಮೆ ಯುವಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಸಾದೀಕ್ ಎಮ್ಮೆಯನ್ನು ಹಿಡಿಯಲು ಹೋಗಿದ್ದಾನೆ. ಆಗ ಕುಪಿತಗೊಂಡಿದ್ದ ಎಮ್ಮೆ ಸಾದೀಕ್  ಹೊಟ್ಟೆಗೆ ಕೊಂಬಿನಿಂದ ತಿವಿದು ಮೇಲಕ್ಕೆತ್ತಿ ಎಸೆದಿದೆ. ಅಲ್ಲದೇ  ಸಾರ್ವಜನಿಕ ಪ್ರದೇಶಕ್ಕೆ ನುಗ್ಗಿದೆ.

ಇದನ್ನೂ ಓದಿ: ಪಿಸ್ತೂಲ್ ಹಿಡಿದು ಮನಬಂದಂತೆ ಫೈರಿಂಗ್ – ಪಾಪಿ ಅಟ್ಟಹಾಸಕ್ಕೆ ಅಮಾಯಕ ಜೀವಗಳು ಬಲಿ!

ಎಮ್ಮೆಯ ತಿವಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಸಾದೀಕ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಇತ್ತ, ರೊಚ್ಚಿಗೆದ್ದ ಎಮ್ಮೆ ಸಾರ್ವಜನಿಕರ ಮೇಲೂ ದಾಂಧಲೆ ನಡೆಸಿದೆ. ರಸ್ತೆಯಲ್ಲಿದ್ದ ವಾಹನ ಸವಾರರ ಮೇಲೂ ದಾಳಿ ನಡೆಸಿದೆ. ಇದನ್ನು ನೋಡಿ ಆತಂಕಕ್ಕೊಳಗಾದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಮಾತ್ರವಲ್ಲದೆ, ಎಮ್ಮೆ ಹಲವು ಅಂಗಡಿಗಳಿಗೆ ನುಗ್ಗಿ ಹಾನಿ ಮಾಡಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ ಎಮ್ಮೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಬ್ಬಂದಿಗೆ ಸಾರ್ವಜನಿಕರು ಕೂಡ ಸಾಥ್ ನೀಡಿದ್ದಾರೆ. ಅದರಂತೆ ಎಲ್ಲರು ಒಟ್ಟು ಸೇರಿ ಎಮ್ಮೆಯನ್ನು ಹಗ್ಗ ಹಾಕಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

 

suddiyaana