ಆರ್ ಸಿಬಿಗೆ ಮುಂದಿನ ಪಂದ್ಯ ಚಿನ್ನಸ್ವಾಮಿಯಲ್ಲಿ – ಮತ್ತೆ ಕಾಡುತ್ತಾ ಹೋಂ ಫಿಚ್ ಭಯ?

ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಆರ್ಸಿಬಿ ಈಗ ಅದೇ ಪಂಜಾಬ್ ವಿರುದ್ಧ ಪಂಜಾಬ್ನಲ್ಲೇ ಸೇಡು ತೀರಿಸಿಕೊಂಡಿದೆ. 40 ಗಂಟೆಗಳ ಒಳಗೇ ಪಿಬಿಕೆಎಸ್ಗೆ ತಿರುಗೇಟು ಕೊಟ್ಟಿದೆ. ಮುಲ್ಲನ್ಪುರದ ಮಹಾರಾಜ ಯದ್ವಿಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 37ನೇ ಪಂದ್ಯದಲ್ಲಿ ರಜತ್ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಇದನ್ನೂ ಓದಿ : ಚಿನ್ನಸ್ವಾಮಿ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ – ಬೆಂಗಳೂರಿನ ಮೈದಾನದಲ್ಲಿ ಅದೆಷ್ಟು ದಾಖಲೆಗಳು?
ಪಂಜಾಬ್ ಪರ ಪ್ರಭ್ ಸಿಮ್ರಾನ್ ಸಿಂಗ್ 33 ರನ್ ಗಳಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬಹುಬೇಗನೇ ವಿಕೆಟ್ ಒಪ್ಪಿಸಿದ್ರು. ಹೀಗಾಗಿ ಪಂಜಾಬ್ಗೆ ಉತ್ತಮ ಸ್ಕೋರ್ ಕಲೆಹಾಕೋಕೆ ಸಾಧ್ಯವಾಗ್ಲಿಲ್ಲ. ಬೌಲಿಂಗ್ನಲ್ಲಿ ಪಂಜಾಬ್ ತಂಡವನ್ನ ಕಟ್ಟಿಹಾಕಿದ ಆರ್ಸಿಬಿ 158 ರನ್ಗಳ ಗುರಿ ಬೆನ್ನಟ್ಟಿತ್ತು. ಬಟ್ ಆರಂಭದಲ್ಲೇ ಆಘಾತ ಎದುರಾಗಿತ್ತು. ಫಿಲ್ ಸಾಲ್ಟ್ 1 ರನ್ ಬಾರಿಸಿ ವಿಕೆಟ್ ಕಳ್ಕೊಂಡ್ರು. ಬಟ್ ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 100 ರನ್ಗಳ ಜೊತೆಯಾಟವಾಡಿದ್ರು.. ಇಬ್ಬರೂ ಅರ್ಧಶತಕ ಸಿಡಿಸಿದ್ರು. ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 174.28 ಸ್ಟ್ರೈಕ್ ರೇಟ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ 61 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 73 ರನ್ ಗಳಿಸಿದ್ರು. ಅಲ್ದೇ ಪಡಿಕ್ಕಲ್ಗೂ ಕೂಡ ಇಂಥಾದ್ದೊಂದು ಕಮ್ ಬ್ಯಾಕ್ ಬೇಕಿತ್ತು. ಯಾಕಂದ್ರೆ ಈ ಸೀಸನ್ನಲ್ಲಿ ಪಡಿಕ್ಕಲ್ ಬ್ಯಾಟಿಂಗ್ ಯಾವುದೇ ದೊಡ್ಡ ಇನ್ನಿಂಗ್ಸ್ ಬಂದಿರ್ಲಿಲ್ಲ. ಪಂಜಾಬ್ ವಿರುದ್ಧದ ಮ್ಯಾಚಲ್ಲಿ ಬೆಂಗಳೂರಲ್ಲಿ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡ್ಲಾಗಿತ್ತು. ಹೀಗಾಗಿ ಮುಂದಿನ ಪಂದ್ಯಗಳಿಗೆ ಚಾನ್ಸ್ ಸಿಗ್ಬೇಕು ಅಂದ್ರೆ ಇಂಥಾದ್ದೊಂದು ಇನ್ನಿಂಗ್ಸ್ನ ಅಗತ್ಯ ಇದ್ದೇ ಇತ್ತು.
ನಿನ್ನೆ ಮ್ಯಾಚಲ್ಲಿ ಮತ್ತೊಂದು ಹೈಲೆಟ್ ಆಗಿದ್ದು ಅಂದ್ರೆ ಒಂದೇ ಎಸೆತದಲ್ಲಿ 4 ರನ್ ಓಡಿದ್ದು. 3ನೇ ಓವರ್ ನ ಕೊನೇ ಬಾಲ್ನಲ್ಲಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ನಾಲ್ಕು ರನ್ ಓಡಿದ್ರು. ಹಾಗಂತ ಇಲ್ಲೇನು ಯಾವ್ದೇ ಮಿಸ್ ಫೀಲ್ಡ್ ಆಗಿರಲಿಲ್ಲ. ಆರ್ಶ್ ದೀಪ್ ಸಿಂಗ್ ಎಸೆದ ಲೆಂಗ್ತ್ ಡೆಲಿವರಿಯನ್ನು ದೇವದತ್ ಪಡಿಕ್ಕಲ್ ಡೀಪ್ ಮಿಡ್ ವಿಕೆಟ್ ನತ್ತ ಭಾರಿಸಿದರು. ಈ ವೇಳೆ ಫೈನ್ ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ನೇಹಲ್ ವದೇರಾ ಬಾಲ್ ಬೌಂಡರಿ ಲೈನ್ ದಾಟದಂತೆ ತಡೆದ್ರು. ಅತ್ತ ಕ್ರೀಸ್ ನಲ್ಲಿದ್ದ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ನೋಡ ನೋಡುತ್ತಲೇ 4 ರನ್ ಓಡಿದ್ರು. 36 ವರ್ಷದ ಕೊಹ್ಲಿ ಫಿಟ್ನೆಸ್ಗೆ ಫ್ಯಾನ್ಸ್ ಶಹಬ್ಬಾಸ್ ಹೇಳ್ತಿದ್ದಾರೆ.
ಪಂಜಾಬ್ ವಿರುದ್ಧ ಆರ್ ಸಿಬಿ ಗೆದ್ದಮೇಲೆ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ಗೆ ಕಿಚಾಯಿಸೋ ರೀತಿ ಸೆಲೆಬ್ರೇಟ್ ಮಾಡಿದ್ರು. ಇದು ಶ್ರೇಯಸ್ ಅಯ್ಯರ್ ಅವರ ಸೌಂಡ್ ಸೆಲೆಬ್ರೇಷನ್ಗೆ ರಿಯಾಕ್ಷನ್ ಎಂದು ತುಂಬಾ ಜನ ಪೋಸ್ಟ್ ಮಾಡ್ತಿದ್ದಾರೆ. ಬಟ್ ಸತ್ಯ ಏನಂದ್ರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ ಕಿವಿ ಕಡೆ ಕೈಯಿಟ್ಟು ಸೌಂಡ್ ಕೇಳಿಸ್ತಿಲ್ಲ ಅಂತಾ ಸನ್ನೆ ಮಾಡಿರಲಿಲ್ಲ. ಬದಲಾಗಿ ಮುಲ್ಲನ್ಪುರ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ ಮಾಡಿದ ಸನ್ನೆಯನ್ನೇ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಕೆಕೆಆರ್ ವಿರುದ್ಧ 111 ರನ್ಗಳನ್ನ ಡಿಫೆನ್ಸ್ ಮಾಡಿಕೊಂಡ ಬಳಿಕ ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಸೌಂಡ್ ಕೇಳಿಸುತ್ತಿಲ್ಲ. ಮತ್ತಷ್ಟು ಜೋರಾಗಿ ಕೂಗಿ ಎಂದಷ್ಟೇ ಸನ್ನೆ ಮಾಡಿದ್ದರು. ಈ ವಿಡಿಯೋವನ್ನು ಎಡಿಟ್ ಮಾಡಿ, ಬೆಂಗಳೂರಿನಲ್ಲಿ ಆರ್ಸಿಬಿ ಅಭಿಮಾನಿಗಳನ್ನು ಶ್ರೇಯಸ್ ಅಯ್ಯರ್ ಕಿಚಾಯಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದೇ ನಿಜ ಅನ್ಕೊಂಡಿರೋ ಫ್ಯಾನ್ಸ್ ಶ್ರೇಯಸ್ ಅಯ್ಯರ್ ವರ್ತನೆಗೆ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ ಎನ್ನುತ್ತಿದ್ದಾರೆ. ಬಟ್ ಇದು ಸುಳ್ಳು.
ಸದ್ಯ ಟೂರ್ನಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಆರ್ಸಿಬಿ ಐದು ಮ್ಯಾಚ್ಗಳನ್ನ ಗೆದ್ದಿದೆ. ಮೂರು ಮ್ಯಾಚ್ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬಟ್ ನೆಕ್ಸ್ಟ್ ಮ್ಯಾಚ್ ಇರೋದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ. ಹೋಂ ಗ್ರೌಂಡ್ನಲ್ಲಿ ಸತತ ಮೂರು ಮ್ಯಾಚ್ ಸೋತಿರೋ ರೆಡ್ ಆರ್ಮಿ ಏಪ್ರಿಲ್ 24ಕ್ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ 9ನೇ ಪಂದ್ಯ ಆಡಲಿದೆ. ಈಗಾಗ್ಲೇ ಜೈಪುರದಲ್ಲಿ ರಾಜಸ್ಥಾನ ಆರ್ಸಿಬಿ ವಿರುದ್ಧ ಸೋಲು ಕಂಡಿತ್ತು. ಆ ಸೋಲಿನ ಪ್ರತೀಕಾರಕ್ಕೆ ಆರ್ಆರ್ ತಂಡ ಕಾಯ್ತಿದೆ.