ಸ್ಯಾಂಡಲ್ ವುಡ್ ಮರ್ಯಾದೆ ಪ್ರಶ್ನೆ!! – ಏನಿದು ಗೊತ್ತಾಯ್ತಾ?

ಸ್ಯಾಂಡಲ್ ವುಡ್ ಮರ್ಯಾದೆ ಪ್ರಶ್ನೆ!! – ಏನಿದು ಗೊತ್ತಾಯ್ತಾ?

ಅಯ್ಯೋ…ಮರ್ಯಾದೆ ಪ್ರಶ್ನೆ ಗುರೂ!. ಹೀಗೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಾ ಇದೆ..  ಇದು ಯಾವುದೋ ರೀಲ್ಸ್ ಸ್ಟಾರ್ ಹುಟ್ಟು ಹಾಕಿರುವ ಟ್ರೆಂಡ್ ಅಲ್ಲ.. ನಮ್ಮ ಸ್ಯಾಂಡಲ್‌ ವುಡ್‌ ತಾರೆಯರು ಒಬ್ಬರೊಬ್ಬರಂತೆ ಸೋಶಿಯಲ್ ಮೀಡಿಯಾ ಮೂಲಕ ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನ್ ಟ್ರೆಂಡ್ ಆಗುತ್ತೋ.. ಯಾವಾಗ ಯಾರ ಮರ್ಯಾದೆ ಹೋಗುತ್ತೆ ಅಂತಾ ಹೇಳೋದಿಕ್ಕೆ ಆಗಲ್ಲ.. ಜನ ಸಾಮಾನ್ಯರೇ ಆಗಿರ್ಲಿ..  ಅಥವಾ ಸೆಲೆಬ್ರಿಟಿಗಳೇ ಆಗಿರ್ಲಿ..  ಮರ್ಯಾದೆ ಪ್ರಶ್ನೆ ಬಂದರೆ ಸುಮ್ಮನಿರೋಕೆ ಸಾಧ್ಯ ಇಲ್ಲ.. ಆದ್ರೆ ಈಗ ಸ್ಯಾಂಡಲ್‌ ವುಡ್‌ ನ ಅನೇಕ ಮಂದಿಗೆ ಮರ್ಯಾದೆ ಪ್ರಶ್ನೆ ಎದುರಾಗಿದೆ. ಅವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ಓಪನ್ ಮಾಡಿದ್ರೆ ಸಾಕು..  ‘ಮರ್ಯಾದೆ ಪ್ರಶ್ನೆ’ ಎಂಬ ಪೋಸ್ಟ್ ಕಾಣ್ತಾ ಇದೆ.. ಸ್ಯಾಂಡಲ್‌ ವುಡ್‌ ನ ಹಲವು  ಸೆಲೆಬ್ರಿಟಿಗಳು ‘ಮರ್ಯಾದೆ ಪ್ರಶ್ನೆ’ಅಂತಾ ಪೋಸ್ಟ್ ಶೇರ್ ಮಾಡ್ತಾ ಇದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ – ಪ್ರಕರಣ ಸಿಐಡಿಗೆ ವರ್ಗಾವಣೆ

ಸಿಂಪಲ್ ಸುನಿ, ಶೈನ್ ಶೆಟ್ಟಿ, ಸಂಯುಕ್ತಾ ಹೊರನಾಡು, ನಿಶ್ವಿಕಾ ನಾಯ್ಡು, ಜಿಮ್ ಟ್ರೇನರ್ ಶ್ರೀನಿವಾಸ ಗೌಡ ಸೇರಿದಂತೆ ಅನೇಕರು ತಮ್ಮ ಖಾತೆಯಲ್ಲಿ ‘ಮರ್ಯಾದೆ ಪ್ರಶ್ನೆ’ ಅಂತಾ ಬರ್ಕೊಳ್ತಿದ್ದಾರೆ.. ಇವರ ಪೋಸ್ಟ್ ನೋಡಿ ಅಭಿಮಾನಿಗಳು ಫುಲ್  ತಲೆಕೆಡಿಸಿಕೊಂಡಿದ್ದಾರೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಇನ್ಸ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದರು. ‘ಅವರದ್ದು ಆಯ್ತಂತೆ ನಿಂದ್ಯಾವಾಗ.. ಮರ್ಯಾದೆ ಪ್ರಶ್ನೆ’ ಅಂತಾ ಸ್ಟೋರಿ ಹಾಕಿದ್ರು.. ಇತ್ತೀಚೆಗೆ ನಟಿ ದೀಪಿಕಾ ದಾಸ್ ತಮ್ಮ ಗೆಳಯನ ಜೊತೆಗೆ ಮದುವೆ ಆಗಿದ್ದಾರೆ. ಬಿಗ್ ಬಾಸ್‌ನಲ್ಲಿ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ತುಂಬಾನೇ ಹೈಲೈಟ್ ಆಗಿದ್ರು.. ಒಳ್ಳೆ ಜೋಡಿ ಅಂತಾ ವೀಕ್ಷಕರು ಹೇಳ್ತಾ ಬಂದಿದ್ರು.. ಹೀಗಾಗಿ ಶೈನ್ ಹಾಕಿರೋ ಪೋಸ್ಟ್ ನೋಡಿ ಇದು ದೀಪಿಕಾ ದಾಸ್ ಮದುವೆಗೆ ಸಂಬಂಧಪಟ್ಟಿರೋದು ಅಂತಾ ಫ್ಯಾನ್ಸ್ ಕಾಮೆಂಟ್ ಮಾಡಿದ್ರು.

ಇದು ಇಷ್ಟೇ ಆದ್ರೆ ಫ್ಯಾನ್ಸ್ ಅಷ್ಟೊಂದಾಗಿ ತಲೆ ಕೆಡಿಸಿಕೊಳ್ತಿರ್ಲಿಲ್ಲ.. ಶೈನ್ ಶೆಟ್ಟಿಗೆ ಮದುವೆ ಆದಷ್ಟು ಬೇಗ ಇದೆ ಅಂತಾ ಜನ ಸುಮ್ನಾಗ್ತಿದು.. ಆದ್ರೆ ಇದೇ ಹ್ಯಾಶ್‌ ಟ್ಯಾಗ್‌ ಇಟ್ಕೊಂಡ್ ಸ್ಯಾಂಡಲ್‌ ವುಡ್‌ ತಾರೆಯರು ಕೂಡ ಪೋಸ್ಟ್ ಮಾಡಿದ್ರು.. ಶೈನ್ ಶೆಟ್ಟಿ ಪೋಸ್ಟ್ ಮಾಡಿದ ಬೆನ್ನಲ್ಲೇ ನಿರಂಜನ್ ದೇಶ್‌ ಪಾಂಡೆ ಕೂಡಾ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ರು.. ಮನಸ್ಸಿಗೆ ಅನ್ಸಿದ್ದು ಹೇಳಿಬಿಡಬೇಕು. ಮರ್ಯಾದೆ ಪ್ರಶ್ನೆ ಅಂತ ನಿರಂಜನ್ ದೇಶ್‌ಪಾಂಡೆ ಅವರೂ ಪೋಸ್ಟ್ ಹಾಕಿದ್ದಾರೆ.

ಇನ್ನು  ನಟ ನಾಗಭೂಷನ್ ಕೂಡ ‘ಟಗರು ಪಲ್ಯ ಹಿಟ್ ಆಯ್ತು ವಿದ್ಯಾಪತಿನೂ ಹಿಟ್ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ರು.. ಯೋಗರಾಜ್ ಭಟ್ ನಿರ್ದೇಶನ ‘ಕರಟಕ ದಮನಕ’ ಸಿನಿಮದ ‘ಹಿತ್ತಲಕ ಕರಿಬ್ಯಾಡ ಮಾಮ’ ಹಾಡು ಭಾರೀ ಸೌಂಡ್ ಮಾಡಿತ್ತು. ನಿಶ್ವಿಕಾ ನಾಯ್ಡು ಮತ್ತು ಪ್ರಭುದೇವ ಈ ಹಾಡಿಗೆ ಕುಣಿದಿದ್ರು. ಅನೇಕರ ಮನಗೆದ್ದ ಈ ಹಾಡಿನ ಕುರಿತಾಗಿ ನಿಶ್ವಿಕಾ ‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ಅಂತಾ ಬರೆದು ಸ್ಟೋರಿ ಹಾಕಿದ್ರು..

ಇನ್ನು ನಿರ್ದೇಶಕ ಸಿಂಪಲ್ ಸುನಿ ಕೂಡ ಮರ್ಯಾದೆ ಪ್ರಶ್ನೆ ಅಂತ ಪೋಸ್ಟ್ ಹಂಚಿಕೊಂಡಿದ್ರು. ಅವತಾರ ಪುರುಷ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 22ರಂದು ತೆರೆ ಮೇಲೆ ಬರಲು ರೆಡಿಯಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಸುನಿ ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು.. ಮರ್ಯಾದೆ ಪ್ರಶ್ನೆ’ ಅಂತಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ರು.. ಈ ಮಧ್ಯೆ ನಿರೂಪ್ ಭಂಡಾರಿ ಅವರು ಕೂಡ.. ತಪ್ಪು ಮಾಡಿಲ್ಲಾಂದ್ರೆ ತಲೆ ತಗ್ಗಿಸಬೇಡ.. ಮಾರ್ಯದೆ ಪ್ರಶ್ನೆ ಅಂತಾ ಪೋಸ್ಟ್ ಹಾಕಿದ್ರು..

ನಟಿ ರುಕ್ಮಿಣಿ ವಸಂತ್ ಅವರು ಇದೇ ರೀತಿ ಪೋಸ್ಟ್ ಹಾಕಿದ್ರು.. ಎಳನೀರು ಕುಡಿಯಾಕ್ ಸ್ಟ್ರಾ ಅಂತಾ ಬರೆದ ನಟಿ ಮರ್ಯಾದೆ ಪ್ರಶ್ನೆ ಅಂತಾ ಬರೆದಿದ್ರು..  ಇವರಿಷ್ಟೇ ಅಲ್ಲ, ಸಂಯುಕ್ತಾ ಹೊರನಾಡು ಕೂಡ ಹೀಗೆ ಪೋಸ್ಟ್ ಹಾಕಿದ್ರು.. ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಅಂತಾ ಬರೆದುಕೊಂಡರೆ.. ಜಿಮ್ ಟ್ರೈನರ್ ಶ್ರೀನಿವಾಸ್ ಗೌಡ ಜಿಮ್ಗೆ ಬರೋರ ಬಗ್ಗೆ ಬರ್ಕೊಂಡಿದ್ದಾರೆ..  ‘ಜಿಮ್ ಸೇರ್ತೀರಾ.. ಕಾಸು ಕೊಡ್ತೀರ… ಆದ್ರೆ ಜಿಮ್ಗೆ ಬರೋದೆ ಇಲ್ಲ.. ಮರ್ಯಾದೆ ಪ್ರಶ್ನೆ’ ಅಂತಾ ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ..  ಅದರಲ್ಲೂ ಇನ್ಸ್ಟಾಗ್ರಾಂ ನಲ್ಲಿ  ‘ಮರ್ಯಾದೆ ಪ್ರಶ್ನೆ’ ಫುಲ್ ಟ್ರೆಂಟ್ ಆಗೋಗಿದೆ.. ಈ  ಮರ್ಯಾದೆ  ಸಿನಿಮಾನಾ? ಹೊಸ ಸಿನಿಮಾದ ಟೈಟಲ್ ಆಗಿರಬಹುದೇ? ಆ ಶೀರ್ಷಿಕೆ ಅನೌನ್ಸ್ ಮಾಡುವುದಕ್ಕೂ ಮುನ್ನವೇ ಹೀಗೆ ಟ್ರೆಂಡ್ ಮಾಡಲಾಗುತ್ತಿದೆಯೇ? ಪ್ರಚಾರಕ್ಕಾಗಿ ಹೊಸ ಪ್ಲ್ಯಾನ್ ಮಾಡಲಾಗಿದೆಯೇ? ಒಂದು ವೇಳೆ ಅದು ಸಿನಿಮಾದ ಟೈಟಲ್ ಆಗಿದ್ದರೆ ಆ ಚಿತ್ರಕ್ಕೆ ಹೀರೋ ಯಾರು? ಅಂತಾ ಜನರು ತಲೆ ಕೆಡಿಸ್ಕೊಂಡಿದ್ದರು. ಇದೀಗ ಇವೆಲ್ಲಾ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ..

ಇದೊಂದು ಸಿನಿಮಾದ ಶೀರ್ಷಿಕೆ. ಈ ಚಿತ್ರವನ್ನು ‘ಸಕ್ಕತ್ ಸ್ಟುಡಿಯೋ’ ಮೂಲಕ ಆರ್‌ ಜೆ ಪ್ರದೀಪ್ ಅವರು ನಿರ್ಮಾಣ ಮಾಡಿದ್ದು, ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ.  ಇದ್ರ ಪೋಸ್ಟರ್ ಅನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟರ್‌ ನಲ್ಲಿ ಇರುವ  ‘ದುಡ್ಡಿರೋರಿಗೆ ಎಲ್ಲಾ.. ದುಡಿಯೋರಿಗೆ ಏನೂ ಇಲ್ಲ’ ಲೈನ್ ಸಾಕಷ್ಟು ಗಮನ ಸೆಳೆದಿದೆ. ಈ ಲೈನ್ ನೋಡಿದಾಗ ಇದೊಂದು ಮಧ್ಯಮ ವರ್ಗದ ಕಥೆ ಅನ್ನೋದು ಪಕ್ಕಾ ಆಗಿದೆ..

Shwetha M