ಜಾಮೀನು ಸಿಕ್ಕರೂ ತಪ್ಪದ ಸಂಕಷ್ಟ!- SIT ಅಧಿಕಾರಿಗಳ ಈ ನಿರ್ಧಾರದಿಂದ ರೇವಣ್ಣಗೆ  ಮತ್ತೆ ಆತಂಕ?

ಜಾಮೀನು ಸಿಕ್ಕರೂ ತಪ್ಪದ ಸಂಕಷ್ಟ!- SIT ಅಧಿಕಾರಿಗಳ ಈ ನಿರ್ಧಾರದಿಂದ ರೇವಣ್ಣಗೆ  ಮತ್ತೆ ಆತಂಕ?

ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ ಕಾನೂನು ಸಂಕಷ್ಟ ಬೆಂಬಿಡದೇ ಕಾಡುತ್ತಿದೆ. ಎರಡು ಪ್ರಕರಣದಲ್ಲಿ ಬೇಲ್‌ ಸಿಕ್ಕರೂ ಕೂಡ ರೇವಣ್ಣ ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ.. ಯಾಕಂದ್ರೆ ವಿಶೇಷ ತನಿಖಾ ತಂಡ ಮತ್ತೆ ರೇವಣ್ಣಗೆ ಶಾಕ್‌ ನೀಡಿದೆ. ಇದೀಗ ಎಸ್‌ಐಟಿ ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ.

ಇದನ್ನೂ ಓದಿ: ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ – ಪಾಸ್‌ಪೋರ್ಟ್‌ ರದ್ದಾಗುತ್ತಾ?

ಹೌದು, ಕೆಆರ್​ ನಗರದ ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಜೈಲಿಗೆ ಹೋಗಿ ಜಾಮೀನು ಪಡೆದು ಹೊರ ಬಂದಿದ್ದರು. ಜಾಮೀನು ಪಡೆದರೂ ರೇವಣ್ಣಗೆ  ಮತ್ತೆ ಸಂಕಷ್ಟ ಶುರುವಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇದೀಗ ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್‍ಗೆ ಎಸ್‍ಐಟಿ ಅರ್ಜಿ ಅಲ್ಲಿಸಿದೆ. ಹೈಕೋರ್ಟ್‍ನ ಜನಪ್ರತಿನಿಧಿಗಳ ಪೀಠಕ್ಕೆ ಅರ್ಜಿ ಸಲ್ಲಿಸಿದ ಎಸ್‍ಐಟಿ, ಕೆಳ ನ್ಯಾಯಾಲಯದ ಜಾಮೀನು ಆದೇಶ ರದ್ದು ಮಾಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ನಡೆಯುವ ವಾದ-ಪ್ರತಿಪಾದ ತೀವ್ರ ಕುತೂಹಲ ಕೆರಳಿಸಿದೆ.

ಎಸ್‍ಐಟಿ ಪರ ಎಸ್‍ಪಿಪಿ ರವಿ ವರ್ಮಕುಮಾರ್ ಹಾಗೂ ರೇವಣ್ಣ ಪರ ಸಿವಿ ನಾಗೇಶ್ ವಾದ ಮಂಡಿಸುವ ಸಾಧ್ಯತೆಗಳಿವೆ. ಇನ್ನು ಎಸ್‍ಐಟಿ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಗೆ ರೇವಣ್ಣ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shwetha M