ಡಿ ಗ್ಯಾಂಗ್‌ಗೆ ಮತ್ತೆ ಕೋರ್ಟ್ ಶಾಕ್ – ನ.10ಕ್ಕೆ ದರ್ಶನ್‌, ಪವಿತ್ರಾ ವಿಚಾರಣೆ ಮುಂದೂಡಿಕೆ

ಡಿ ಗ್ಯಾಂಗ್‌ಗೆ ಮತ್ತೆ ಕೋರ್ಟ್ ಶಾಕ್ –  ನ.10ಕ್ಕೆ ದರ್ಶನ್‌, ಪವಿತ್ರಾ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 57ನೇ ಸೆಷನ್ ಕೋರ್ಟ್ ದರ್ಶನ್‌  ಸೇರಿದಂತೆ ಆರೋಪಿಗಳ ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್‌ ಸೇರಿದಂತೆ ಆರೋಪಿಗಳು ನವೆಂಬರ್‌ 3ರಂದು ಬೆಂಗಳೂರು 57ನೇ ಸೆಷನ್ ಕೋರ್ಟ್ ಹಾಜರಾಗಿದ್ರು. ಖುದ್ದು ಹಾಜರಾಗಲು ಕೋರ್ಟ್ ಸೂಚಿಸಿತ್ತು. ಇದರಂತೆ ಭಾರಿ ಬಿಗಿ ಭದ್ರತೆಯೊಂದಿಗೆ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಸೆಷನ್ ಕೋರ್ಟ್‌ಗೆ ಹಾಜರಾದರು. ಇದೀಗ ದರ್ಶನ್‌ ಸೇರಿದಂತೆ 17 ಮಂದಿಯ ವಿಚಾರಣೆಯನ್ನು ಕೋರ್ಟ್‌ ನವೆಂಬರ್‌ 10ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಒಂದೇ ಮನೆಯ ಮೂವರು ಮಕ್ಕಳಿಗೆ ಕಚ್ಚಿದ ವಿಷಕಾರಿ ಹಾವು!

ಕೋರ್ಟ್‌ಗೆ ಬರುವಾಗ ದರ್ಶನ್ ಸ್ವಲ್ಪ ಮಟ್ಟಿಗೆ ಕೂಲ್ ಆಗಿ ಕಾಣಿಸಿದರೂ ಕೂಡಾ ಪವಿತ್ರಾ ಗೌಡ ಮುಖದಲ್ಲಿ ಟೆನ್ಶನ್ ಎದ್ದು ಕಾಣುತ್ತಿತ್ತು. ಕೋರ್ಟ್​ಗೆ ಬರುವಾಗ ಕೂಡಾ ಪವಿತ್ರಾ ಗೌಡ ಚಿಂತಾಕ್ರಾಂತರಾಗಿ ಕುಳಿತಿದ್ದರು. ಪವಿತ್ರಾ ಗೌಡ ಅವರು ವಾಹನದಲ್ಲಿ ಬೇಸರದಲ್ಲಿ ಕುಳಿತಿರುವುದು ಕಂಡು ಬಂದಿದೆ. ದರ್ಶನ್ ಕೂಡಾ ಹಣೆಗೆ ಕುಂಕುಮದಿಂದ ಅಡ್ಡನಾಮ ಹಾಕಿಕೊಂಡಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್‌ ಸೇರಿ ಇತರ ಆರೋಪಿಗಳು ಆಗಸ್ಟ್‌ 14ರಂದು ಮತ್ತೆ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ಬಳಿಕ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ದೋಷಾರೋಪ ಹಿನ್ನೆಲೆಯಲ್ಲಿ 79 ದಿನಗಳ ಬಳಿಕ ಜೈಲಿನಿಂದ ದರ್ಶನ್‌ ಹೊರ ಬಂದು ನ್ಯಾಯಾಲಯಕ್ಕೆ ಆಗಮಿಸಿದರು.

Kishor KV