ಖ್ಯಾತ ಹಿರಿಯ ಪರಿಸರಶಾಸ್ತ್ರಜ್ಞ ವಿಧಿವಶ – ಮಾಧವ ಗಾಡ್ಗಿಲ್‌ ಇನ್ನು ನೆನಪು ಮಾತ್ರ!

ಖ್ಯಾತ ಹಿರಿಯ ಪರಿಸರಶಾಸ್ತ್ರಜ್ಞ ವಿಧಿವಶ – ಮಾಧವ ಗಾಡ್ಗಿಲ್‌ ಇನ್ನು ನೆನಪು ಮಾತ್ರ!

ಖ್ಯಾತ ಹಿರಿಯ ಪರಿಸರಶಾಸ್ತ್ರಜ್ಞ, ಪದ್ಮಶ್ರೀ ಮತ್ತು ಪದ್ಮಭೂಷಣ ವಿಜೇತ ಮಾಧವ ಗಾಡ್ಗಿಲ್‌ ಅವರು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್‌ ಗಲಾಟೆ ಕೇಸ್!‌ – ತನಿಖೆ ಸಿಬಿಐಗೆ  ವಹಿಸುವ ಅಗತ್ಯವಿಲ್ಲ ಎಂದ ಪರಮೇಶ್ವರ್‌!

ಮಾಧವ್ ಗಾಡ್ಗಿಲ್ ಭಾರತದ ಮೂಲಭೂತ ಪರಿಸರವಾದವನ್ನು ರೂಪಿಸಿದ ವಿಜ್ಞಾನಿಯಾಗಿದ್ದಾರೆ. ಪಶ್ಚಿಮ ಘಟ್ಟಗಳ ಪರ್ವತಗಳ ರಕ್ಷಣೆ ಕುರಿತ ಗ್ಯಾಡ್ಗಿಲ್ ಸಮಿತಿ ವರದಿ ಹಲವು ವಿವಾದಗಳಿಗೆ ಕಾರಣವಾಗಿತ್ತು. ಕುಟುಂಬಸ್ಥರ ಮಾಹಿತಿಯ ಪ್ರಕಾರ, ಪುಣೆಯ ವೈಕುಂಠ ಚಿತಾಗಾರದಲ್ಲಿ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಭಾರತದ ಸಾಮಾಜಿಕ-ರಾಜಕೀಯ ಕಾರ್ಯಸೂಚಿಯಲ್ಲಿ ಪರಿಸರವನ್ನು ತರುವಲ್ಲಿ ಮಾಧವ ಗಾಡ್ಗೀಲ್ ನಿರ್ಣಾಯಕ ಪಾತ್ರ ವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ಮೇಲೆ ಅವರು ನಿರ್ಣಾಯಕ ಪ್ರಭಾವ ಬೀರಿದ್ದರು. ನಿರ್ಲಕ್ಷಿಸಲ್ಪಟ್ಟ ಸಮಸ್ಯೆಗಳನ್ನು ಎತ್ತುವ ಮತ್ತು ಅವುಗಳ ಮೇಲೆ ದೃಢವಾಗಿ ನಿಲ್ಲುವ ನಿಲುವನ್ನು ಮಾಧವ್ ಗಾಡ್ಗಿಲ್ ತೆಗೆದುಕೊಂಡರು.

ಮಾಧವ ಗಾಡ್ಡಿಲ್ ಭಾರತದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಪಶ್ಚಿಮ ಘಟ್ಟಗಳ ಸಂರಕ್ಷಣಾ ಅಧ್ಯಯನಗಳು ಸಹ ಪ್ರಮುಖ ವಿವಾದಗಳಿಗೆ ಕಾರಣವಾಯಿತು. ಮಾಧವ್ ಗಾಡ್ಗಿಲ್ ಅವರಿಗೆ 84 ವರ್ಷ ವಯುಸ್ಸು ಆಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲತ್ತಿದ್ದರು.

Shwetha M