IPL ಟ್ರೋಫಿ RCBಗೋ.. PBKSಗೋ – ಮೋದಿ ಸ್ಟೇಡಿಯಂ ಪಿಚ್ ಯಾರಿಗೆ ಪ್ಲಸ್?

IPL ಟ್ರೋಫಿ RCBಗೋ.. PBKSಗೋ – ಮೋದಿ ಸ್ಟೇಡಿಯಂ ಪಿಚ್ ಯಾರಿಗೆ ಪ್ಲಸ್?

ಹೊಸ ಕ್ಯಾಪ್ಟನ್ಸ್.. ಹೊಸ ಟೀಮ್​ಮೇಟ್ಸ್ ಜೊತೆ 18ನೇ ಸೀಸನ್ ಆರಂಭಿಸಿದ ಬೆಂಗಳೂರು ಮತ್ತು ಪಂಜಾಬ್ ತಂಡಗಳು ಈಗ ಫೈನಲ್​ಗೆ ಬಂದು ನಿಂತಿವೆ. ಟೇಬಲ್ ಟಾಪರ್ಸ್ ನಡುವೆ ಚಾಂಪಿಯನ್ ಟೈಟಲ್​ಗಾಗಿ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಟ್ರೋಫಿ ಗೆಲ್ಲೋಕೆ ಉಭಯ ತಂಡಗಳೂ ಮೋಸ್ಟ್ ಡಿಸರ್ವಿಂಗ್ ಆಗಿವೆ. ಪಂಜಾಬ್​ಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿ ಆರ್​ಸಿಬಿ ಕಪ್ ಗೆಲ್ಲೋಕೆ ಕಾಯ್ತಿದ್ರೆ ಫೈನಲ್​ನಲ್ಲೇ ಹಳೇ ಪಂದ್ಯಗಳ ಸೋಲಿಗೆ ಸೇಡು ತೀರಿಸಿಕೊಂಡು ಚಾಂಪಿಯನ್ ಆಗೋಕೆ ಪಂಜಾಬ್ ಕೂಡ ಕಾಯ್ತಾ ಇದೆ. ಹಾಗೇ ಕ್ಲೈಮ್ಯಾಕ್ಸ್ ಮ್ಯಾಚಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋ ಲೆಕ್ಕಾಚಾರಗಳೂ ನಡೀತಿವೆ.

ಇದನ್ನೂ ಓದಿ : RCB ತಂಡಕ್ಕೆ ಬಿಗ್‌ ಶಾಕ್‌ – ಫೈನಲ್‌ನಲ್ಲಿ ಸಾಲ್ಟ್‌ ಆಡೋದು ಅನುಮಾನ

ಆರ್​ಸಿಬಿ ಅಭಿಮಾನಿಗಳನ್ನ ಕಾಡ್ತಿರೋ ಅತಿದೊಡ್ಡ ಪ್ರಶ್ನೆ ಅಂದ್ರೆ ಇದೆ. ಮಿಡಲ್ ಆರ್ಡರ್​ನಲ್ಲಿ ಆಪತ್ಬಾಂಧವನಾಗಿ ಫಿನಿಶರ್ ರೋಲ್ ಪ್ಲೇ ಮಾಡ್ತಿದ್ದ ಟಿಮ್ ಡೇವಿಡ್ ಫೈನಲ್ ಮ್ಯಾಚ್ ಆಡ್ತಾರಾ ಇಲ್ವಾ ಅನ್ನೋದು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾಯಗೊಂಡಿದ್ದ ಡೇವಿಡ್, ಲಕ್ನೋ ವಿರುದ್ಧವೂ ಕಣಕ್ಕಿಳಿದಿರಲಿಲ್ಲ. ಹಾಗೇ ಕ್ವಾಲಿಫೈಯರ್ 1ನಲ್ಲೂ ಕಾಣಿಸಿಕೊಂಡಿಲ್ಲ. ಸೋ ಫೈನಲ್ ಮ್ಯಾಚ್​ಗಾದ್ರೂ ಕಮ್ ಬ್ಯಾಕ್ ಮಾಡ್ತಾರಾ ಅಂದ್ರೆ ಅದೂ ಕೂಡ ಕನ್ಫರ್ಮ್ ಆಗ್ತಿಲ್ಲ. ಈ ಬಗ್ಗೆ ಮಾತ್ನಾಡಿರುವ ನಾಯಕ ರಜತ್ ಪಾಟಿದರ್, ಡೇವಿಡ್​ ವೈದ್ಯಕೀಯ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಅಧಿಕಾರಿಗಳು ಹೇಳೋವರೆಗೂ ಅವ್ರನ್ನ ಆಡಿಸ್ಬೇಕಾ ಅನ್ನೋ ಬಗ್ಗೆ ಏನನ್ನೂ ಹೇಳೋಕೆ ಸಾಧ್ಯ ಇಲ್ಲ ಎಂದಿದ್ದಾರೆ. ಹೀಗಾಗಿ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೇ ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸ್ತಾರೆ. ಆ ನಂತ್ರ ರಜತ್ ಪಾಟಿದಾರ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ ಬರ್ತಾರೆ. ಟಿಮ್ ಡೇವಿಡ್ ಫಿಟ್ ಆಗದಿದ್ರೆ ಮತ್ತೆ ಲಿಯಾಮ್ ಲಿವಿಂಗ್‌ಸ್ಟೋನ್ಗೆ ಚಾನ್ಸ್ ಕೊಡ್ಬೋದು. ಉಳಿದಂತೆ ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ ಆಡ್ತಾರೆ.

ಬೆಂಗಳೂರು ವರ್ಸಸ್ ಪಂಜಾಬ್ ನಡುವಿನ ಈ ಹೈವೋಲ್ಟೇಜ್ ಮ್ಯಾಚಲ್ಲಿ ಆರ್​ಸಿಬಿಯ ಮೂವರು ಆಟಗಾರರ ಮೇಲೆ ಎಲ್ಲರ ಕಣ್ಣಿದೆ. ವಿರಾಟ್ ಕೊಹ್ಲಿ, ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ ಆರ್​ಸಿಬಿ ಪರ ಅತೀಹೆಚ್ಚು ರನ್ ಕಲೆ ಹಾಕಿದ್ದಾರೆ. ಹಾಗೇ ಪಂಜಾಬ್ ವಿರುದ್ಧ 36 ಇನ್ನಿಂಗ್ಸ್​ಗಳಲ್ಲಿ 1,116 ರನ್ ಕಲೆ ಹಾಕಿದ್ದಾರೆ. ಇನ್ನು ಜೋಶ್ ಹೇಜಲ್​ವುಡ್ ಈ ಸೀಸನ್​ನಲ್ಲಿ ಇದುವರೆಗೆ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭುವನೇಶ್ವರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಪಂಜಾಬ್ ವಿರುದ್ಧ ಇದುವರೆಗೆ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಈ ಮೂವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಲಿದೆ.

ಪಂಜಾಬ್ ತಂಡದ ಆಟಗಾರರು ಕೂಡ 18ನೇ ಸೀಸನ್​ನಲ್ಲಿ ಚರಿತ್ರೆ ಸೃಷ್ಟಿಸೋಕೆ ಕಾಯ್ತಿದ್ದಾರೆ. ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿಯೋ ಲೆಕ್ಕಾಚಾರದಲ್ಲಿದ್ದಾರೆ. ಅದ್ರ ಜೊತೆ ಜೊತೆಗೆ ಆರ್​ಸಿಬಿ ವಿರುದ್ಧ ಸೇಡು ತೀರಿಸಿಕೊಳ್ಳೋಕೂ ಕಾಯ್ತಿದ್ದಾರೆ. ಈ ಸೀಸನ್​ನಲ್ಲಿ ಆರ್​ಸಿಬಿ ಮತ್ತು ಪಂಜಾಬ್ ನಡುವೆ ಈವರೆಗೂ ಮೂರು ಪಂದ್ಯಗಳು ನಡೆದಿವೆ. ಈ ಪೈಕಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ದಾಖಲಿಸಿತ್ತು. ಆ ನಂತ್ರ ಮುಲ್ಲನ್​ಫುರದಲ್ಲಿ ನಡೆದ ಫೈಟಲ್ಲಿ ಆರ್​ಸಿಬಿ ಗೆದ್ದು ರಿವೇಂಜ್ ತೀರಿಸಿಕೊಂಡಿತ್ತು. ಹಾಗೇ ಮೇ 29ರಂದು ನಡೆದ ಕ್ವಾಲಿಫೈಯರ್ 1ನಲ್ಲಿ ಬೆಂಗಳೂರು ಬಾಯ್ಸ್ ಕಂಪ್ಲೀಟ್ ಡಾಮಿನೇಟ್ ಮಾಡಿ ಹೀನಾಯವಾಗಿ ಸೋಲಿಸಿದ್ರು. ಡೈರೆಕ್ಟ್ ಟು ಫಿನಾಲೆ ಟಿಕೆಟ್ ಗೆದ್ದು ಬೀಗಿದ್ರು. ಸೋ ರಜತ್ ಪಡೆ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಸೋತಿರೋ ಪಂಜಾಬ್ ಕೂಡ ಫೈನಲ್​ನಲ್ಲೇ ರಿವೇಂಜ್ ತಗೊಳ್ಳೋಕೆ ಕಾಯ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೂಲ್ ಌಂಡ್ ಕಾಮ್ ಆಗಿ ಟೀಂ ಲೀಡ್ ಮಾಡಿ ಫೈನಲ್ ಪಂದ್ಯಕ್ಕೆ ಅದೇ ಮೊಮೆಂಟಮ್ ಕಂಟಿನ್ಯೂ ಮಾಡೋಕೆ ನೋಡ್ತಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ ಪಂಜಾಬ್​ನಲ್ಲಿ ಇರೋರೆಲ್ಲಾ ಯಂಗ್​ಸ್ಟರ್ಸ್. ದೊಡ್ಡ ದೊಡ್ಡ ಮ್ಯಾಚ್​ಗಳನ್ನ ಆಡಿದ ಅನುಭವ ಕೆಲವರಿಗಷ್ಟೇ ಇದೆ. ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್ ಮತ್ತು ಮಾರ್ಕಸ್ ಸ್ಟೊಯಿನಿಸ್​ಗೆ ಮಾತ್ರ ಐಪಿಎಲ್​ನಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಇನ್ನು ಅರ್ಷದೀಪ್ ಸಿಂಗ್ ಕಳೆದ ವರ್ಷದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದರು. ಸೋ ಈ ನಾಲ್ವರ ಮೇಲೆಯೇ ಹೆಚ್ಚು ಡಿಪೆಂಡ್ ಆಗ್ಬೇಕಾಗುತ್ತೆ. ಯಂಗ್​ಸ್ಟರ್ಸ್​ಗೆ ಲೀಡ್ ಮಾಡ್ಬೇಕಾಗುತ್ತೆ. ಮುಂಬೈ ವಿರುದ್ಧದ ಆಟಗಾರರೇ ಇಲ್ಲಿನ ಪ್ಲೇಯಿಂಗ್ 11ನಲ್ಲೂ ಕಂಟಿನ್ಯೂ ಮಾಡ್ಬೋದು.

ಇಂದಿನ ಫೈನಲ್ ಪಂದ್ಯದಲ್ಲಿ ಯಾರೇ ಗೆದ್ರೂ ಉಭಯ ತಂಡಗಳ ನಾಯಕರು ಇತಿಹಾಸ ಬರೆಯಲಿದ್ದಾರೆ. ಆರ್​ಸಿಬಿ ಕ್ಯಾಪ್ಟನ್ 31 ವರ್ಷದ ರಜತ್ ಪಾಟಿದಾರ್ ಅವ್ರಿಗೆ ವಿಶಿಷ್ಟ ದಾಖಲೆ ನಿರ್ಮಿಸುವ ಅವಕಾಶವಿದೆ.  ಆರ್​ಸಿಬಿ ಗೆದ್ರೆ ಪಾಟಿದಾರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಪ್ರಶಸ್ತಿ ಗೆದ್ದ ನಾಯಕರ ಪಟ್ಟಿಗೆ ಸೇರಲಿದ್ದಾರೆ. ತಮ್ಮ ಮೊದಲ ನಾಯಕತ್ವದ ಸೀಸನ್​ನಲ್ಲೇ ಚಾಂಪಿಯನ್ ಪಟ್ಟಕ್ಕೇರಿದವ್ರ ಲಿಸ್ಟ್​​ಗೆ ಸೇರ್ತಾರೆ.  ಇಲ್ಲಿಯವರೆಗೆ ಹಾರ್ದಿಕ್ ಪಾಂಡ್ಯ ಮತ್ತು ಶೇನ್ ವಾರ್ನ್​ ಮಾತ್ರ ಈ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಗೆದ್ರೆ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಯಾರೂ ಬರೆಯದ ದಾಖಲೆ ಬರೆಯಲಿದ್ದಾರೆ. ಐಪಿಎಲ್‌ನಲ್ಲಿ ಎರಡು ವಿಭಿನ್ನ ಫ್ರಾಂಚೈಸಿಗಳಿಗೆ ಬ್ಯಾಕ್ ಟು ಬ್ಯಾಕ್ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ. 2024ರ ಸೀಸನ್​ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿತ್ತು.

ಒಂದು ಪಂದ್ಯದ ಸೋಲು ಗೆಲುವಿಗೆ ಟಾಸ್ ಕೂಡ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾ ಅಥವಾ ಫೀಲ್ಡಿಂಗ್ ಮಾಡ್ಬೇಕಾ ಅನ್ನೋದು ಕೂಡ ಗೇಮ್ ಚೇಂಜಿಂಗ್ ಟ್ವಿಸ್ಟ್ ಕೊಡುತ್ತೆ. ಸದ್ಯ ಫೈನಲ್ ಪಂದ್ಯ ನಡೆಯಲಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಈ ಸೀಸನ್​ನಲ್ಲಿ ಒಟ್ಟು 8 ಮ್ಯಾಚ್​ಗಳನ್ನ ಆಡಿಸಲಾಗಿದೆ. ಈ ವೇಳೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿರೋದು ಒಂದೇ ಸಲ. ಉಳಿದ 7 ಪಂದ್ಯಗಳಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತಂಡ 2 ಬಾರಿ ಮಾತ್ರ ಗೆದ್ದಿದೆ. ಅಂದ್ರೆ ಈ ಮೈದಾನದಲ್ಲಿ ಆಡಿದ 8 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 6 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಚೇಸಿಂಗ್​ನಲ್ಲಿ 2 ತಂಡಗಳು ಮಾತ್ರ ಚೇಸ್ ಮಾಡಿವೆ. ಅಂದ್ರೆ ಈ ಅಂಕಿ ಅಂಶಗಳನ್ನ ನೋಡಿದ್ರೆ ಫಸ್ಟ್ ಬ್ಯಾಟಿಂಗ್ ಮಾಡುವ ತಂಡಗಳ ಗೆಲುವಿನ ಪರ್ಸೆಂಟೇಜ್ ಜಾಸ್ತಿ ಇದೆ. ಸೋ ಇಲ್ಲಿ ಟಾಸ್ ಗೆದ್ದವ್ರು ಬಹುಶಃ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಳ್ಬೋದು. ಬಟ್ ಕ್ವಾಲಿಫೈಯರ್ 2ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಮುಂಬೈ 200 ಪ್ಲಸ್ ಸ್ಕೋರ್ ಮಾಡಿದ್ರೂ ಪಂಜಾಬ್ ಎದುರು ಸೋಲಬೇಕಾಯ್ತು. ಹೀಗಾಗಿ ಇಲ್ಲಿ ಟಾಸ್ ಏನು ಅಷ್ಟೊಂದು ಪರಿಣಾಮ ಬೀರಲ್ಲ.

Shantha Kumari

Leave a Reply

Your email address will not be published. Required fields are marked *