RCB ಟೀಮ್ ಗೆ ಫ್ಯಾನ್ಸ್ 5 ಪ್ರಶ್ನೆ! – ಆರ್​ಸಿಬಿ ಫ್ಯಾನ್ಸ್ ಸಿಟ್ಟಿಗೆ ಕಾರಣಗಳೇನು..?

RCB ಟೀಮ್ ಗೆ ಫ್ಯಾನ್ಸ್ 5 ಪ್ರಶ್ನೆ! – ಆರ್​ಸಿಬಿ ಫ್ಯಾನ್ಸ್ ಸಿಟ್ಟಿಗೆ ಕಾರಣಗಳೇನು..?

ಒಂದು ಸೋಲಾದ್ರೆ ಸುಮ್ಮನಾಗಬಹುದು.. ಎರಡು ಸೋಲಾದ್ರೆ ಸಹಿಸಿಕೊಳ್ಳಬಹುದು.. ಆದ್ರೆ ಒಂದು, ಎರಡು, ಮೂರು, ನಾಲ್ಕು ಅಂತಾ ಮುಗ್ಗರಿಸುತ್ತಲೇ ಹೋದ್ರೆ ಮನ್ನಿಸೋದಾದ್ರೂ ಹೇಗೆ ಹೇಳಿ. ಆರ್​ಸಿಬಿ, ಆರ್​ಸಿಬಿ ಅಂತಾ ಜೀವ ಬಿಡೋ ಫ್ಯಾನ್ಸ್ ಇದ್ರೂ ಪ್ಲೇಯರ್ಸ್ ಮಾತ್ರ ಅಟ್ಟರ್​ಫ್ಲಾಪ್ ಫರ್ಮಾಮೆನ್ಸ್ ನೀಡ್ತಿದ್ದಾರೆ. ಇವತ್ತು ಗೆಲ್ತಾರೇನೋ, ಇವತ್ತು ಗೆಲ್ತಾರೇನೋ ಅಂತಾ ಕಾಯೋ ಅಭಿಮಾನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸಿಡಿದೆದ್ದಿದ್ದಾರೆ. ಕ್ಯಾಪ್ಟನ್ ಆದ್ರೂ ಫ್ಲಾಪ್ ಶೋ ಕೊಡ್ತಿರೋ ಫಾಪ್ ವಿರುದ್ಧ ಕಿಡಿ ಕಾರಿದ್ದಾರೆ. ಮ್ಯಾನೇಜ್​ಮೆಂಟ್ ಗೆ ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಆರ್​ಸಿಬಿ ಫ್ಯಾನ್ಸ್ ಸಿಟ್ಟಿಗೆ ಕಾರಣಗಳೇನು..? ಆರ್​ಸಿಬಿ ಫ್ರಾಂಚೈಸಿಗೆ ಕೇಳಿರೋ ಪ್ರಶ್ನೆಗಳೇನು..? ಕ್ಯಾಪ್ಟನ್ ಚೇಂಜ್ ಮಾಡ್ತಾರಾ..? ಕೊಹ್ಲಿ ಮುನಿಸಿಕೊಂಡು ಟೀಂ ಬಿಟ್ಟು ಹೋದ್ರಾ..? ಈ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: 3 ರನ್ ಗೆ ಧೋನಿ ಬಂದಿದ್ದೇಕೆ? – ಜಡ್ಡುಗೆ ಕ್ರಿಕೆಟ್ ತಲಪತಿ ಎಂದಿದ್ಯಾರು?- ರುತುರಾಜ್ ಲೆಕ್ಕಕ್ಕಷ್ಟೇ ನಾಯಕನಾ?

ಕಳೆದ 16 ಸೀಸನ್​ಗಳಲ್ಲೂ ಆರ್​ಸಿಬಿ ಒಂದೇ ಒಂದು ಕಪ್ ಗೆದ್ದಿಲ್ಲ. ಹೋಗ್ಲಿ ಈ ಸಲನಾದ್ರೂ ಚೆನ್ನಾಗಿ ಆಡ್ತಾರೆ ಅಂದ್ರೆ ಆರಂಭದಲ್ಲೇ ಆಡಿರೋ ನಾಲ್ಕು ಮ್ಯಾಚ್​ಗಳಲ್ಲಿ 3ರಲ್ಲಿ ಸೋತು ಸುಣ್ಣವಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಬಿಟ್ರೆ ಬೇರೆ ಆಟಗಾರರಿಗೆ ಗೆಲುವು ಲೆಕ್ಕಕ್ಕೇ ಇಲ್ಲ ಎನ್ನುವಂತಾಗಿದೆ. ಆರ್​​ಸಿಬಿ ಆಟಗಾರರ ಈ ಕೆಟ್ಟ ಪ್ರದರ್ಶನದಿಂದ ಲಾಯಲ್​ ಫ್ಯಾನ್ಸ್​​​ ತಾಳ್ಮೆಯ ಕಟ್ಟೆಯೊಡೆದಿದೆ. ರೊಚ್ಚಿಗೆದ್ದಿರುವ ಅಭಿಮಾನಿಗಳು​ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ದಾರೆ. ಇಷ್ಟು ವರ್ಷ ಆರ್​ಸಿಬಿ ಕಪ್​ ಗೆಲ್ಲದಿದ್ರೂ ಅಟ್​​ಲೀಸ್ಟ್ ಅಫ್ ಫೈಟ್ ಕೊಡ್ಬೇಕು ಅನ್ನೋ ಮನಸ್ಥಿತಿನಾದ್ರೂ ಇತ್ತು. ಆದ್ರೆ ಈ ಸಲ ಹೊಸ ಅಧ್ಯಾಯ ಅಂತಾ ಸೀಸನ್ ಆರಂಭಿಸಿದ್ರೂ ಹಿಂದೆಂದಿಗಿಂತಲೂ ಹೀನಾಯ ಪ್ರದರ್ಶನ ನೀಡ್ತಿದೆ. ಆರ್​​ಸಿಬಿ ಹ್ಯಾಟ್ರಿಕ್​ ಸೋಲಿನ ಬಳಿಕ ಅಭಿಮಾನಿಗಳಿಗೆ ಸಾಲು ಸಾಲು ಪ್ರಶ್ನೆಗಳು ಕಾಡ್ತಿವೆ.

ಪ್ರಶ್ನೆ 1 : ಮ್ಯಾಕ್ಸ್​​​ ವೆಲ್ ನ ಕೈ ಬಿಟ್ಟಿಲ್ಲ ಏಕೆ?

ಗ್ಲೆನ್ ಮ್ಯಾಕ್ಸ್​​ವೆಕ್.. ಅಬ್ಬಬ್ಬಾ.. ಒಂದು ಕಾಲದಲ್ಲಿ ಮ್ಯಾಕ್ಸಿ ಗ್ರೌಂಡ್​ಗೆ ಬಂದ್ರು ಅಂದ್ರೆ ಸಿಕ್ಸ್, ಫೋರ್ ಅಂತಾ ಬೌಲರ್​ಗಳ ಬೆವರಿಳಿಸಿತ್ತಿದ್ರು. ಎದುರಾಳಿ ಆಟಗಾರರನ್ನ ಫೀಲ್ಡ್ ತುಂಬಾ ಓಡಾಡಿಸ್ತಿದ್ರು. ಆದ್ರೆ ಈ ಸಲ ಅದೇನ್ ಆಗಿದ್ಯೋ ಏನೋ. ಕ್ರಿಕೆಟ್​ ಗಂಧ ಗಾಳಿಯೇ ಗೊತ್ತಿಲ್ಲದವ್ರಂತೆ ಆಟ ಆಡ್ತಿದ್ದಾರೆ. ಬಹುಶಃ ಔಟಾಗೋಕೆ ಕ್ರೀಸ್​​ಗೆ ಬಂದವ್ರಂತೆ ಅಷ್ಟೇ ಅರ್ಜೆಂಟ್​ನಲ್ಲಿ ಪೆವಿಲಿಯನ್ ಸೇರ್ತಿದ್ದಾರೆ. ಇದೇ ಇಂಡಿಯನ್​ ಪಿಚ್​​ಗಳಲ್ಲಿ ಆಸ್ಟ್ರೇಲಿಯಾ ಪರ ವರ್ಲ್ಡ್​ ಕಪ್​ನಲ್ಲಿ ಧೂಳೆಬ್ಬಿಸಿದ್ದ ಮ್ಯಾಕ್ಸಿ ಈಗ ಆರ್​​ಸಿಬಿ ಪರ ಅಟ್ಟರ್​ಫ್ಲಾಪ್​​ ಆಗಿದ್ದಾರೆ. ಆಡಿರೋ ಐದು ಮ್ಯಾಚ್​ಗಳನ್ನೂ ಸೇರಿ ಜಸ್ಟ್ 32 ರನ್ ಹೊಡೆದಿದ್ದಾರೆ. ಬಹುಶಃ ನಮ್ಮ ಗಲ್ಲಿ ಕ್ರಿಕೆಟರ್ಸ್ ಗೇನಾದ್ರೂ ಚಾನ್ಸ್ ಕೊಟ್ಟಿದ್ರೆ ಒಂದೇ ಮ್ಯಾಚ್​ನಲ್ಲಿ ಇದಕ್ಕಿಂತ ಜಾಸ್ತಿನೇ ರನ್ ಬಾರಿಸ್ತಿದ್ರು. ಅಷ್ಟು ಹೀನಾಯ ರೀತಿಯಲ್ಲಿ ಮ್ಯಾಕ್ಸಿ ವಿಕೆಟ್​ ಒಪ್ಪಿಸಿದ್ದಾರೆ. ಆದ್ರೂ ಪ್ಲೇಯಿಂಗ್​​ ಇಲೆವೆನ್​​ನಲ್ಲಿ ಚಾನ್ಸ್​ ಸಿಗ್ತಿರೋದ್ಯಾಕೆ ಅನ್ನೋದೆ ಅರ್ಥವಾಗ್ತಿಲ್ಲ. ಮೊದ್ಲು ಈ ಮ್ಯಾಕ್ಸಿನ ಟೀಂನಿಂದ ಹೊರಗಿಡಿ ಎಂದು ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

ಪ್ರಶ್ನೆ 2 : ಕ್ಯಾಮರೂನ್​​ ಗ್ರೀನ್ ಗೆ ಯಾಕಿಷ್ಟು ಚಾನ್ಸ್?

ಒಂದಲ್ಲ ಎರಡಲ್ಲ.. ಬರೋಬ್ಬರಿ 18.5 ಕೋಟಿಗೆ ಆರ್​​ಸಿಬಿ ಸೇರಿದ ಕ್ಯಾಮರೂನ್​ ಗ್ರೀನ್​​ ಬ್ಯಾಟಿಂಗ್​ನಲ್ಲೂ ಇಲ್ಲ. ಬೌಲಿಂಗ್​ನಲ್ಲೂ ಇಲ್ಲ. ಆದ್ರೂ ಪ್ಲೇಯಿಂಗ್​ XIನಲ್ಲಿ ಮಾತ್ರ ಸ್ಥಾನ ಫಿಕ್ಸ್​ ಆಗಿದೆ. ಆಡಿರೋ ಐದು  ಪಂದ್ಯಗಳಿಂದ 68 ರನ್​ಗಳಿಸಿರೋ ಗ್ರೀನ್, ಬೌಲಿಂಗ್​ನಲ್ಲಿ 9.40ರ ಎಕಾನಮಿಯಲ್ಲಿ ಉದಾರವಾಗಿ ರನ್​​ ಬಿಟ್ಟು ಕೊಡ್ತಿದ್ದಾರೆ. ಆದ್ರೂ, ಆರ್​​ಸಿಬಿ ಮ್ಯಾನೇಜ್​​ಮೆಂಟ್​​ ಗ್ರೀನ್ ಗೆ ಚಾನ್ಸ್ ಕೊಡ್ತಿರೋದೇಕೆ ಅನ್ನೋದೇ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಪ್ರಶ್ನೆ 3 : ವೈಶಾಕ್​ ವಿಜಯ್​ ಕುಮಾರ್​ ಚೆನ್ನಾಗಿ ಆಡಿದ್ದೇ ತಪ್ಪಾ?

ಆರ್​ಸಿಬಿ ತಂಡ ಮೊದ್ಲಿಂದಲೂ ಕನ್ನಡಿಗರಿಗೆ ಚಾನ್ಸ್ ಕೊಡಲ್ಲ ಅನ್ನೋ ಕುಖ್ಯಾತಿ ಪಡೆದಿದೆ. ನಮ್ಮ ಕನ್ನಡಿಗರು ಬೇರೆ ಬೇರೆ ಟೀಮ್​ಗಳಲ್ಲಿ ಧೂಳೆಬ್ಬಿಸಿ ಟ್ರೋಫಿ ತಂದು ಕೊಟ್ರೂ ಆರ್​ಸಿಬಿಯಲ್ಲಿ ಮಾತ್ರ ಚಾನ್ಸ್ ಕೊಡಲ್ಲ. ಈ ಸೀಸನ್​ನಲ್ಲಿ ಬೆಂಗಳೂರು ತಂಡದಲ್ಲಿರೋ ಕನ್ನಡಿಗ ವೈಶಾಕ್​ ವಿಜಯ್​ಕುಮಾರ್​ ಸಿಕ್ಕ ಒಂದು ಅವಕಾಶದಲ್ಲಿ ಎಕಾನಮಿಕಲ್​​​ ಪರ್ಫಾಮೆನ್ಸ್​ ನೀಡಿದ್ರು. 4 ಓವರ್​​ಗಳಲ್ಲಿ 23 ರನ್​ ಕೊಟ್ಟು, 1 ವಿಕೆಟ್​ ಕೂಡ ಉರುಳಿಸಿದ್ರು. ಆದ್ರೆ, ಆ ಬಳಿಕ ವೈಶಾಕ್​ಗೆ ಅವಕಾಶ ಸಿಕ್ಕೇ ಇಲ್ಲ.. MOSTLY ವೈಶಾಕ್​ ಉತ್ತಮ ಪ್ರದರ್ಶನ ನೀಡಿದ್ದೇ ತಪ್ಪಾಯ್ತು ಅನ್ಸುತ್ತೆ. ವೈಶಾಕ್​ಗೆ ಚಾನ್ಸ್ ಕೊಟ್ಟು ಮ್ಯಾಚ್ ಗೆಲ್ಲಿಸಿಬಿಟ್ರೆ ಆರ್​ಸಿಬಿ ಪ್ಲೇಆಫ್​ಗೆ ಹೋಗ್ಬೇಕಾಗುತ್ತೆ. ಮತ್ತೆ ಎಕ್ಸ್​​ಟ್ರಾ ಮ್ಯಾಚ್ ಆಡ್ಬೇಕಾಗುತ್ತೆ ಅನ್ನೋ ಭಯ ಕಾಡ್ತಿರಬಹುದು ಎಂದು ಅಭಿಮಾನಿಗಳು ಮ್ಯಾನೇಜ್​ಮೆಂಟ್ ಕಾಲೆಳೆಯುತ್ತಿದ್ದಾರೆ..

ಪ್ರಶ್ನೆ 4 : ವಿಲ್ ಜಾಕ್ಸ್, ಕರಣ್ ಶರ್ಮಾ ಬೆಂಚ್ ಗೆ ಸೀಮಿತನಾ?   

ಸದ್ಯ ಆರ್​​ಸಿಬಿ ಅಭಿಮಾನಿಗಳನ್ನ ಕಾಡ್ತಿರೋ ಪ್ರಮುಖವಾದ ಪ್ರಶ್ನೆಯಿದು. 2023ರಿಂದ 55 ಟಿ20 ಮ್ಯಾಚ್​ ಆಡಿರೋ ವಿಲ್​​​ ಜಾಕ್ಸ್​​, 165.93ರ ಸ್ಟ್ರೈಕ್​ರೇಟ್​​ನಲ್ಲಿ 1,598 ರನ್​ ಚಚ್ಚಿದ್ದಾರೆ. 2 ಸೆಂಚುರಿ, 10 ಹಾಫ್​​ ಸೆಂಚುರಿ ಹೊಡೆದಿದ್ದಾರೆ. ಇಂತಾ ಸಾಲಿಡ್​ ರೆಕಾರ್ಡ್​ ಹೊಂದಿರೋ ಆಟಗಾರನನ್ನ ಆರ್​​​ಸಿಬಿ ಮ್ಯಾನೇಜ್​ಮೆಂಟ್​​​ ಬೆಂಚ್​ ಸೀಮಿತ ಮಾಡಿದೆ. ಹಾಗೇ ಉಳಿದೆಲ್ಲಾ ತಂಡದ ಸ್ಪಿನ್ನರ್ಸ್​ ಐಪಿಎಲ್​ ಅಖಾಡದಲ್ಲಿ ವಿಕೆಟ್​ ಬೇಟೆಯಾಡ್ತಿದ್ದಾರೆ. ನಮ್ಮ ಆರ್​​ಸಿಬಿಯಲ್ಲಿ ವರ್ಲ್ಡ್​​ ಕ್ಲಾಸ್​ ಸ್ಪಿನ್ನರ್​ ಇಲ್ಲ. ಇರೋದ್ರಲ್ಲಿ ಅನುಭವಿ ಕರಣ್​ ಶರ್ಮಾ ಬೆಸ್ಟ್​. ಕಳೆದ ಸೀಸನ್​​ನಲ್ಲಿ ಡಿಸೆಂಟ್​ ಪರ್ಫಾಮೆನ್ಸ್​ ಕೂಡ ನೀಡಿದ್ರು. ಆದ್ರೂ ಈ ಸೀಸನ್​ನಲ್ಲಿ ಒಂದೇ ಪಂದ್ಯಕ್ಕೆ ಸೀಮಿತವಾಗಿದ್ದಾರೆ.

ಪ್ರಶ್ನೆ 5 : ಫಾಫ್ ಡು ಪ್ಲೆಸ್ಸಿಸ್ ಕ್ಯಾಪ್ಟನ್ಸಿ ಬೇಕಾ..?

ಈ ಫಾಫ್ ಡುಪ್ಲೆಸ್ಸಿಸ್ ಕಥೆಯಂತೂ ಹೇಳೋದೇ ಬೇಡ. ಅದ್ಯಾವ ಸೀಮೆ ಕ್ಯಾಪ್ಟನ್ನೋ ಅಭಿಮಾನಿಗಳಿಗೆ ಅರ್ಥನೇ ಆಗ್ತಿಲ್ಲ. ಹೊಡಿಬಡಿ ಎನ್ನುವಂತೆ ಬ್ಯಾಟಿಂಗ್​ನೂ ಮಾಡ್ತಿಲ್ಲ. ಯಾವ ಓವರ್​ಗೆ ಯಾವ ಬೌಲರ್​ನ ಕಳಿಸ್ಬೇಕು ಅನ್ನೋ ಐಸಿಯಾನೇ ಇಲ್ಲ. ರಾಜಸ್ತಾನ ಮತ್ತು ಕೆಕೆಆರ್ ವಿರುದ್ಧದ ಮ್ಯಾಚ್​ಗಳಲ್ಲಂತೂ ಆರಂಭದಲ್ಲೇ ಆರ್​ಸಿಬಿ ಬೌಲರ್​​ಗಳು ಚಚ್ಚಿಸಿಕೊಳ್ತಿದ್ರೂ ಯಾವ ಸ್ಟ್ರಾಟಜಿಯನ್ನೂ ಮಾಡೋ ಗೋಜಿಗೇ ಹೋಗ್ಲಿಲ್ಲ. ಇನ್ನು ಫೀಲ್ಡಿಂಗ್ ಸೆಟ್ ಮಾಡೋದ್ರಲ್ಲೂ ಎಡವುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತು ಫಾಫ್ ನಡುವೆ ಫೀಲ್ಡ್​ನಲ್ಲೇ ಕಿರಿಕ್ ಆಗಿತ್ತು. ಕೊಹ್ಲಿ ಎಷ್ಟೇ ಹೇಳಿದ್ರೂ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿರಲಿಲ್ಲ. ಇದ್ರಿಂದ ಕೊಹ್ಲಿ ಕೂಡ ಕ್ಯಾಪ್ಟನ್ ವಿರುದ್ಧ ಗರಂ ಆದವರಂತೆ ಕಂಡು ಬಂದಿದ್ರು.

ಈಗಾಗ್ಲೇ 5ರಲ್ಲಿ 4 ಪಂದ್ಯ ಸೋತಿರುವ ಆರ್​ಸಿಬಿಗೆ ಮುಂದಿನ 9 ಪಂದ್ಯಗಳೂ​​​​​​​​​​​, ನಾಕೌಟ್​ನಂತೆಯೇ ಇದೆ. ಘಟಾನುಘಟಿ ತಂಡಗಳಾದ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದ್ರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ, ಗುಜರಾತ್​ ಎದುರು ಹೋರಾಟ ನಡೆಸಬೇಕಿದೆ. ಇದೇ ಥರ ಆಟ ಮುಂದುವರಿಸಿದ್ರೆ ಆರ್​ಸಿಬಿ ಖೇಲ್ ಖತಂ ಗ್ಯಾರಂಟಿ. ಹಾಗಂತ ಪ್ಲೇಆಫ್​ ಕನಸನ್ನೂ ಕಂಪ್ಲೀಟ್ ಕೈ ಬಿಡುವ ಅವಶ್ಯಕತೆಯೂ ಇಲ್ಲ. ನಥಿಂಗ್ ಇಂಪಾಸಿಬಲ್​ ಅನ್ನೋದನ್ನ ಮರೆಯುವಂತಿಲ್ಲ. ಯಾಕಂದ್ರೆ, ಇಲ್ಲಿ ಸತತ 5 ಪಂದ್ಯ ಸೋತು ಚಾಂಪಿಯನ್ ಪಟ್ಟಕ್ಕೇರಿದ ಎಕ್ಸಾಂಪಲ್ಸ್ ಇವೆ. ಇದಕ್ಕಾಗಿ ಆರ್​ಸಿಬಿ ಒಗ್ಗಟ್ಟಿನ ಹೋರಾಟ ನಡೆಸಬೇಕಷ್ಟೇ.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಅಗ್ರೆಸ್ಸಿವ್ ಆಟ ಆಡಿದಾಗ ಪ್ಲೇ ಆಫ್  ತಲುವುಪೋದು ಕಷ್ಟವೇನೂ ಅಲ್ಲ. ಆದ್ರೆ ಸದ್ಯಕ್ಕಂತೂ ವಿರಾಟ್ ಕೊಹ್ಲಿ ಒಬ್ರೇ ಆರ್​ಸಿಬಿಗಾಗಿ ಲಾಯಲ್ ಆಗಿ ಆಡ್ತಿದ್ದಾರೆ. ರಾಜಸ್ತಾನ ವಿರುದ್ಧ ಶತಕವನ್ನೂ ಬಾರಿಸಿದ್ರು. ಆದ್ರೂ ಟೀಂ ಗೆಲ್ಲಲಿಲ್ಲ. ಬಳಿಕ ತುಂಬಾ ಅಭಿಮಾನಿಗಳು ವಿರಾಟ್ ಕೊಹ್ಲಿಯವ್ರಿಗೆ ಆರ್​ಸಿಬಿ ಟೀಂ ಬಿಡುವಂತೆ ಸಲಹೆ ನೀಡಿದ್ದರು. ನೀವು ಎಷ್ಟೇ ಹೋರಾಟ ಮಾಡಿದ್ರೂ ಟೀಂ ಪ್ಲೇಯರ್ಸ್ ಸಪೋರ್ಟ್ ಸಿಗಲ್ಲ. ಸೆಂಚುರಿ ಹೊಡೆದ್ರೂ ಟೀಂ ಗೆದ್ದಿಲ್ಲ ಅಂದ್ರೆ ಪ್ರಯೋಜನ ಇಲ್ಲ. ಮುಂದಿನ ಸೀಸನ್​ನಿಂದ ಬೇರೆ ಟೀಮ್​ಗೆ ಆಡಿ ಅಂತಾ ಸಜೇಷನ್ಸ್ ನೀಡಿದ್ರು. ಒಟ್ಟಿನಲ್ಲಿ, ಇಷ್ಟು ದಿನ ಇದ್ದ ಲಾಯಲ್​ ಅಭಿಮಾನಿಗಳ ಪ್ರೀತಿ, ಅಭಿಮಾನ.. ಹ್ಯಾಟ್ರಿಕ್​​ ಸೋಲಿನ ಬಳಿಕ ಆಕ್ರೋಶವಾಗಿ ಬದಲಾಗಿದೆ. ಟೀಮ್​ನಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಆದ್ರೆ ಇನ್ನಾದ್ರೂ ಆರ್​ಸಿಬಿ ಮ್ಯಾನೇಜ್​ಮೆಂಟ್ ಎಚ್ಚೆತ್ತುಕೊಳ್ಳುತ್ತೋ ಇಲ್ಲ ಮತ್ತದೇ ಬಂದ ಪುಟ್ಟ ಹೋದ ಪುಟ್ಟ ಅಂತಾ ಪ್ಲೇಯರ್ಸ್ ಕ್ರೀಸ್​ ಟು ಪೆವಿಲಿಯನ್ ಪರೇಡ್ ನಡೆಸ್ತಾರೋ ನೊಡ್ಬೇಕು.

Shwetha M