ತವರಿನಲ್ಲಿ ಆರ್ಸಿಬಿಗೆ ಹೀನಾಯ ಸೋಲು – ಚಿನ್ನಸ್ವಾಮಿಯಲ್ಲಿ ಗೆದ್ದು ಬೀಗಿದ ಕೆಕೆಆರ್ ಟೀಮ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದು ಬೀಗಿದೆ.
ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕೆಕೆಆರ್ ಅಬ್ಬರದ ಬ್ಯಾಟಿಂಗ್ಗೆ ಆರ್ಸಿಬಿ ಫುಲ್ ಸೈಲೆಂಟ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಕೆಕೆಆರ್ ತಂಡವು ಇನ್ನೂ 19 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಸುಲಭ ಗೆಲುವು ಸಾಧಿಸಿದೆ. ಆರ್ಸಿಬಿ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್ ಕೇವಲ 16.5 ಓವರ್ಗಳಲ್ಲಿ 186 ರನ್ ಗಳಿಸೋ ಮೂಲಕ ಗೆದ್ದು ಬೀಗಿದೆ. ಕೆಕೆಆರ್ ಪರ ಸುನಿಲ್ ನರೈನ್ 47, ವೆಂಕಟೇಶ್ ಅಯ್ಯರ್ 50, ಸಾಲ್ಟ್ 30, ಶ್ರೇಯಸ್ ಅಯ್ಯರ್ 39, ರಿಂಕು ಸಿಂಗ್ 5 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 7 ವರ್ಷಗಳ ಬಳಿಕ ಗರಿಷ್ಠ ತಾಪಮಾನ! – ಬಿಸಿಲ ಝಳಕ್ಕೆ ಜನ ಹೈರಾಣ
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಓಪನರ್ ಆಗಿ ಬಂದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದರು. ಕೇವಲ 59 ಬಾಲ್ನಲ್ಲಿ 4 ಸಿಕ್ಸರ್, 4 ಫೋರ್ ಸಮೇತ 83 ರನ್ ಸಿಡಿಸಿದ್ರು. ಮೊದಲಿಗೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹರ್ಷಿತ್ ರಾಣಾ 2ನೇ ಓವರಿನ 5ನೇ ಬಾಲ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್ಗೆ ಸಿಕ್ಸರ್ ಬಾರಿಸಲು ಹೋದ ಫಾಫ್ ಕ್ಯಾಚ್ ನೀಡಿದ್ರು. ಬಳಿಕ ಕ್ಯಾಮೆರಾನ್ ಗ್ರೀನ್ ಕೂಡ 2 ಸಿಕ್ಸರ್, 4 ಫೋರ್ ಸಮೇತ 33 ರನ್ ಗಳಿಸಿದ್ರು.
ಕ್ಯಾಮರಾನ್ ಗ್ರೀನ್ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್ ಬೀಸಿದ್ರು. ಕೇವಲ 19 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ ಸಮೇತ 29 ರನ್ ಸಿಡಿಸಿದ್ರು. ಎರಡು ಬಾರಿ ಮ್ಯಾಕ್ಸ್ವೆಲ್ಗೆ ಲೈಫ್ ಸಿಕ್ಕಿತು. ಕೊನೆಗೆ ಸುನಿಲ್ ನರೈನ್ ಬೌಲಿಂಗ್ನಲ್ಲಿ 14ನೇ ಓವರ್ನಲ್ಲಿ ಮತ್ತೆ ಸಿಕ್ಸ್ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದ್ರು.
ಕೊನೆಗೆ ಬಂದ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಮೂರು ಸಿಕ್ಸರ್ ಸಮೇತ ದಿನೇಶ್ ಕಾರ್ತಿಕ್ 20 ರನ್ ಸಿಡಿಸಿದ್ರು. ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಪೇರಿಸಿ 183 ರನ್ಗಳ ಗುರಿ ನೀಡಿತ್ತು.