ರಾಮಾಯಣ ಶೂಟಿಂಗ್‌ನ ಫೋಟೋ ಲೀಕ್‌ – ಶೂಟಿಂಗ್‌ ವೇಳೆ ಮೊಬೈಲ್‌ ನಿಷೇಧ

ರಾಮಾಯಣ ಶೂಟಿಂಗ್‌ನ ಫೋಟೋ ಲೀಕ್‌ – ಶೂಟಿಂಗ್‌ ವೇಳೆ ಮೊಬೈಲ್‌ ನಿಷೇಧ

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಕಥೆ ಆಧರಿಸಿ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ರಾಮಾಯಣ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ರಾಮನಾಗಿ ರಣಬೀರ್ ಕಪೂರ್, ರಾವಣನ ಪಾತ್ರದಲ್ಲಿ ಯಶ್​ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಶೂಟಿಂಗ್‌ ಆರಂಭವಾಗುತ್ತಿದ್ದಂತೆ ಸೆಟ್‌ ಫೋಟೋ, ಕಲಾವಿದರ ಫೋಟೋ ವೈರಲ್‌ ಆಗಿತ್ತು. ಇದೀಗ ಶೂಟಿಂಗ್‌ ಸೆಟ್‌ಗೆ ಫೋನ್‌ ಬ್ಯಾನ್‌ ಮಾಡಲಾಗಿದೆಯಂತೆ..

ಇದನ್ನೂ ಓದಿ: ಧೋನಿ ಬಾಯ್ಸ್ ಫಾರ್ಮ್ ಕಳ್ಕೊಂಡ್ರಾ.. CSK ಟೀಂ ಕಥೆ ಏನು?

ಹೌದು, ರಾಮಾಯಣ ಶೂಟಿಂಗ್‌ ಆರಂಭವಾದ ಮೊದಲ ದಿನವೇ ಶೂಟಿಂಗ್ ಸೆಟ್ ಫೋಟೋ ಲೀಕ್  ಆಗಿತ್ತು. ಎರಡನೇ ದಿನ ನಟ ಅರುಣ್ ಗೋವಿಲ್ ಮತ್ತು ನಟಿ ಲಾರಾ ದತ್ತ ಹಾಗೂ ಮತ್ತಿತರರು ಶೂಟಿಂಗ್ ನಲ್ಲಿ ಭಾಗಿಯಾದ ಫೋಟೋಗಳು ಲೀಕ್ ಆಗಿವೆ. ಹೀಗಾಗಿ ಶೂಟಿಂಗ್‌ ನಡೆಯೋ ಸ್ಥಳಕ್ಕೆ ಯಾರೂ ಫೋನ್‌ ತರಬಾರದು, ಫೋನ್‌ ಬಳಸಬಾರದು ಎಂದು ಕಟ್ಟಪ್ಪಣೆಯಾಗಿದೆ ಅಂತಾ ಹೇಳಲಾಗುತ್ತಿದೆ.

ಹಲವಾರು ತಿಂಗಳಿಂದ ಸುದ್ದಿಯಲ್ಲಿರುವ ರಾಮಾಯಣ ಸಿನಿಮಾದ ಶೂಟಿಂಗ್ ಕೊನೆಗೂ ಶುರುವಾಗಿದೆ. ಮೊನ್ನೆಯಿಂದ ಚಿತ್ರೀಕರಣವನ್ನು ಆರಂಭಿಸಿದ್ದಾರೆ ನಿರ್ದೇಶಕ ನಿತಿಶ್ ತೀವಾರಿ. ಈ ಹಂತದ ಚಿತ್ರೀಕರಣದಲ್ಲಿ ಸ್ಟಾರ್ ನಟರು ಭಾಗಿ ಆಗುತ್ತಿಲ್ಲ ಎನ್ನುವ ಮಾಹಿತಿ ಇದೆ. ಗುರುಕುಲ ದೃಶ್ಯದಿಂದ ಚಿತ್ರೀಕರಣ  ಆರಂಭಿಸಿದ್ದಾರೆ. ನಂತರದ ಚಿತ್ರೀಕರಣದಲ್ಲಿ ಸ್ಟಾರ್ ತಾರಾಗಣವೇ ಇರಲಿದೆ.

ಈ ನಡುವೆ ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಮಂಡೋದರಿ ಪಾತ್ರವನ್ನು ಹಿಂದಿಯ ಖ್ಯಾತ ಕಿರುತೆರೆ ನಟಿ ಸಾಕ್ಷಿ ತನ್ವರ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸಾಕಷ್ಟು ಸದ್ದು ಕೂಡ  ಮಾಡಿತ್ತು. ಈ ವಿಷಯ ಸ್ವತಃ ಸಾಕ್ಷಿಗೂ ತಲುಪಿತ್ತು. ಈ ಕುರಿತಂತೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಮಾಯಣ ಕುರಿತಂತೆ ಸಿನಿಮಾ ಆಗುತ್ತಿರುವ ವಿಷಯವನ್ನು ನಾನೂ ಬಲ್ಲೆ. ಆದರೆ, ಮಂಡೋದರಿ ಪಾತ್ರಕ್ಕೆ ನನ್ನ ಹೆಸರು ಬಳಕೆ ಆಗಿದ್ದು ನಾನೂ ಕೇಳಿದ್ದೇನೆ. ಆದರೆ, ಈವರೆಗೂ ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಈವರೆಗಿನ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.

Shwetha M