‘ಕಳ್ಳತನ, ಹಲ್ಲೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆ’ – ಆದಿಲ್ ಬಂಧನದ ಬೆನ್ನಲ್ಲೇ ಪ್ರಜ್ಞೆ ತಪ್ಪಿದ್ದೇಕೆ ರಾಖಿ ಸಾವಂತ್..!?

‘ಕಳ್ಳತನ, ಹಲ್ಲೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆ’ – ಆದಿಲ್ ಬಂಧನದ ಬೆನ್ನಲ್ಲೇ ಪ್ರಜ್ಞೆ ತಪ್ಪಿದ್ದೇಕೆ ರಾಖಿ ಸಾವಂತ್..!?

ಡ್ಯಾನ್ಸರ್, ಮಾಡೆಲ್, ಟಿವಿ ನಿರೂಪಕಿ.. ಅಷ್ಟೇ ಯಾಕೆ ಆಕೆ ಬಾಲಿವುಡ್ ನಟಿ ಕೂಡ ಹೌದು. ಇಷ್ಟೆಲ್ಲಾ ಇದ್ರೂ ರಾಖಿ ಸಾವಂತ್ ಮಾತ್ರ ತಮ್ಮ ವೈಯಕ್ತಿಕ ಜೀವನದಿಂದಲೇ ಪದೇಪದೆ ಸುದ್ದಿಯಾಗ್ತಿದ್ದಾರೆ. ಈಗಂತೂ ಗುಟ್ಟಾಗಿ ಆಗಿದ್ದ ಮದುವೆಯೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.  ಪತಿ ಆದಿಲ್ ಖಾನ್​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಮಾಧ್ಯಮಗಳ ಮುಂದೆಯೇ ರಾಖಿ ಪ್ರಜ್ಞೆ ತಪ್ಪಿದ್ದಾರೆ.

ಕಳೆದ ಸೋಮವಾರ ನಟಿ ರಾಖಿ ಸಾವಂತ್ ತಮ್ಮ ಪತಿ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ವಿರುದ್ಧ   ಮುಂಬೈನ ಒಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ನಿನ್ನೆ ಪೊಲೀಸರು ಆದಿಲ್​ನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಂಧಿಸಿದ್ದರು. ಒಂದ್ಕಡೆ ಆದಿಲ್​ನನ್ನ ಪೊಲೀಸರು ಅರೆಸ್ಟ್ ಮಾಡಿದ್ರೆ ಮತ್ತೊಂದೆಡೆ ರಾಖಿ ತಮ್ಮ ಪತಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ – ಸಮಂತಾ ಚಿತ್ರಕ್ಕೆ ಅಡ್ಡಿಯಾಗ್ತಿರೋದೇನು..!?

ತಮ್ಮ ಫ್ಲ್ಯಾಟ್​ನಲ್ಲಿ ಆದಿಲ್ ಖಾನ್ ನನಗೆ ಗೊತ್ತಿಲ್ಲದೆ ಹಣ ಹಾಗೂ ಆಭರಣ ಕಳ್ಳತನ ಮಾಡಿದ್ದಾನೆ. ಹಾಗೇ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ವರದಕ್ಷಿಣೆಗಾಗಿ ದೌರ್ಜನ್ಯ ನಡೆಸಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ರಾಖಿ ದೂರಿನ ಮೇರೆಗೆ ಪೊಲೀಸರು ಆದಿಲ್​ನನ್ನ ಬಂಧಿಸಿದ್ದಾರೆ. ರಾಖಿ ಸಾವಂತ್ ತನ್ನ ಸೋದರ ರಾಕೇಶ್ ಸಾವಂತ್ ಜೊತೆ ಪೊಲೀಸ್ ಠಾಣೆ ಮುಂದೆ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ರಾಖಿಯನ್ನ ಅವರ ಕಾರಿನ ಮುಂಭಾಗ ಕೂರಿಸಿ ಉಸಿರಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ರಾಖಿ ಸಾವಂತ್ ತಮ್ಮ ತಾಯಿ ಸಾವಿಗೂ ಆದಿಲ್ ಖಾನ್​ನೇ ಪರೋಕ್ಷ ಕಾರಣ ಎಂದು ಆರೋಪಿಸಿದ್ದಾರೆ. ತನ್ನ ತಾಯಿ ಬಹುದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ನಾನು ಮರಾಠಿ ಬಿಗ್ ಬಾಸ್​ನಲ್ಲಿ ಬ್ಯುಸಿಯಾಗಿದ್ದೆ. ಆದ್ರೆ ಆದಿಲ್ ಖಾನ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಬಿಲ್ ಕಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಿಲ್ ಖಾನ್ ಬಂಧನದ ಬಗ್ಗೆ ಮಾಹಿತಿ ನೀಡಿರೋ ಒಶಿವಾರಾ ಠಾಣೆ ಪೊಲೀಸರು ವರದಕ್ಷಿಣೆಗಾಗಿ ಹಲ್ಲೆ ನಡೆಸಿರೋದಾಗಿ ರಾಖಿ ಸಾವಂತ್ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 406, 323ರ ಅಡಿ ಆದಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ನಟಿ 41 ವರ್ಷದ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಉದ್ಯಮಿ  30 ವರ್ಷದ ಆದಿಲ್ ಖಾನ್​ ಗುಟ್ಟಾಗಿ ಮದುವೆಯಾಗಿದ್ರು. ಕೆಲ ತಿಂಗಳ ಹಿಂದಷ್ಟೇ ಈ ವಿಚಾರ ಬಹಿರಂಗವಾಗಿತ್ತು. ಬಳಿಕ ದಂಪತಿ ನಡುವೆ ಪದೇಪದೆ ಜಗಳ ನಡೆಯುತ್ತಲೇ ಇತ್ತು.

 

View this post on Instagram

 

A post shared by Viral Bhayani (@viralbhayani)

suddiyaana