ಜೆಡಿಎಸ್‌ ಭದ್ರಕೋಟೆಯಲ್ಲಿ ರಾಹುಲ್‌ ಗಾಂಧಿ ಮತಶಿಕಾರಿ – ಸ್ಟಾರ್‌ ಚಂದ್ರು ಪರ ಅಬ್ಬರದ ಪ್ರಚಾರ

ಜೆಡಿಎಸ್‌ ಭದ್ರಕೋಟೆಯಲ್ಲಿ ರಾಹುಲ್‌ ಗಾಂಧಿ ಮತಶಿಕಾರಿ – ಸ್ಟಾರ್‌ ಚಂದ್ರು ಪರ ಅಬ್ಬರದ ಪ್ರಚಾರ

ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಇದೀಗ ಸಕ್ಕರೆ ನಾಡು ಮಂಡ್ಯಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎಂಟ್ರಿಯಾಗಿದೆ. ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಅಬ್ಬರದ ಪ್ರಚಾರ ನಡೆಸಿದರು.

ಹಳೆ ಮೈಸೂರು ಭಾಗದಿಂದ ಆಗಮಿಸಿದ್ದ ಸಹಸ್ರಾರು ಕಾರ್ಯಕರ್ತರತ್ತ ಕೈ ಬೀಸಿದ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರಕ್ಕೆ ಬಲ ತುಂಬಿದರು. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಂಡ್ಯಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ರಾಹುಲ್‌ ಗಾಂಧಿ, ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ರೂಪಿಸಿದ್ದ ಬೃಹತ್‌ ವೇದಿಕೆಯಲ್ಲಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಂಡ್ಯದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಇದನ್ನೂ ಓದಿ: ಬಾಹುಬಲಿ ಬಟ್ಲರ್.. ಸೋತ ಕೆಕೆಆರ್! – ಐಪಿಎಲ್ ಗೆಲ್ಲೋದು ಇವ್ರೇನಾ?

ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನವನ್ನ ಉಳಿಸಲು‌ ನಾವು ಘಟ್‌ಬಂಧನ್ ಮೂಲಕ ಬಂದಿದ್ದೇವೆ. ಅವರು ಕೇವಲ 25 ಮಂದಿ ಉಳಿವಿಗಾಗಿ ಜನರ ಮುಂದೆ ಬಂದಿದ್ದಾರೆ. ನಾವು ಜನರಿಗಾಗಿ, ಸಂವಿಧಾನ ರಕ್ಷಣೆಗಾಗಿ ಚುನಾವಣೆಗೆ ಬಂದಿದ್ದೇವೆ. ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಗೃಹ ಲಕ್ಷ್ಮಿ ಯೋಜನೆಯಿಂದ‌ ಮಹಿಳೆಯರು ನೆಮ್ಮದಿ ಬದುಕು. ಇದೇ ವೇಳೆ ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಎಐಸಿಸಿ ಮೂಲಕವೂ ರಾಷ್ಟ್ರ ಮಟ್ಟದಲ್ಲಿ ಐದು ಗ್ಯಾರಂಟಿಗಳ ಘೋಷಣೆ ಮಾಡಲಾಗಿದೆ. ರೈತರ ಸಂಕಷ್ಟ ಕರ್ನಾಟಕ, ತಲಂಗಾಣಕ್ಕೆ ಅಲ್ಲ ಬಿಜೆಪಿ‌ ಆಡಳಿತರೂಢ ರಾಜ್ಯಗಳಲ್ಲೂ ಇದೆ. ಪಾದಯಾತ್ರೆ ಮಾಡಿ ರೈತರ ಕಷ್ಟವನ್ನ ಅರಿತಿದ್ದೇನೆ ಎಂದು ಹೇಳಿದರು.

Shwetha M