ಸಾಲು ಸಾಲು ರಜೆ – ಟಿಕೆಟ್‌ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್ ಮಾಲಕರು!

ಸಾಲು ಸಾಲು ರಜೆ – ಟಿಕೆಟ್‌ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್ ಮಾಲಕರು!

ಸಂಕ್ರಾಂತಿ ಹಬ್ಬ, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಸಾಲು ಸಾಲು ರಜೆ ಇದೆ. ಸಾಲು ಸಾಲು ರಜೆ  ಕಾರಣ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ರಜಾ ದಿನಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿ ಮಾಡುವ ಕೆಲವು ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಕೆಲ ಖಾಸಗಿ ಬಸ್‌ ಮಾಲೀಕರು ಬಸ್‌ ಟಿಕೆಟ್‌ ದರವನ್ನು ದುಪ್ಪಟ್ಟು ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಮಣಿಪುರದಲ್ಲಿ ಅನುಮತಿ ನಿರಾಕರಣೆ!

ಹೌದು, ಜನವರಿ ತಿಂಗಳಿನಲ್ಲಿ ಸಾಲು ಸಾಲು ರಜೆ ಇದೆ. ಮಕರ ಸಂಕ್ರಾಂತಿ, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅನೇಕರ ಕಂಪನಿ ಉದ್ಯೋಗಿಗಳಿಗೆ ಸಾಲು ಸಾಲು ರಜೆ ಇದೆ. ಈ ಹಿನ್ನೆಲೆಯಲ್ಲಿ ಅನೇಕರು ಊರಿಗೆ ತೆರಳಲು, ಪ್ರವಾಸಿತಾಣಗಳಿಗೆ ತೆರಳಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಕೆಲವು ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿವೆ. ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿಯನ್ನು ಅನೇಕ ಕಡೆ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.

ಜ.13 ಎರಡನೇ ಶನಿವಾರ ಹಾಗೂ ಜ.14 ಭಾನುವಾರ ಹಾಗೂ ಜ.15ಕ್ಕೆ ಸಂಕ್ರಾಂತಿ ಹಬ್ಬವಿದೆ. ಅದೇ ರೀತಿ ಜ.26 ಗಣರಾಜ್ಯೋತ್ಸವ, ಜ.27 ನಾಲ್ಕನೇ ಶನಿವಾರ ಮತ್ತು ಜ.28 ಭಾನುವಾರವಿದೆ. ಹೀಗೆ ಎರಡು ವಾರಗಳಲ್ಲಿ ಸಾಲಾಗಿ ಮೂರು ದಿನಗಳ ರಜೆ, ಅದರಲ್ಲೂ ಗುರುವಾರ ರಾತ್ರಿ ಅಥವಾ ಶುಕ್ರವಾರ ರಾತ್ರಿ ಹೆಚ್ಚಿನ ಪ್ರಯಾಣಿಕರಿರಲಿದ್ದು, ಈ ಎರಡು ದಿನಗಳಲ್ಲಿ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಪ್ರಮುಖವಾಗಿ ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇನ್ನಿತರ ನಗರಗಳಿಗೆ ಸೇವೆ ನೀಡುವ ಬಸ್‌ಗಳ ದರವನ್ನು ಒಂದೂವರೆಯಿಂದ ಎರಡೂವರೆ ಪಟ್ಟು ಹೆಚ್ಚಿಸಿ ಪ್ರಯಾಣಿಕರ ಮೇಲೆ ಹೊರೆ ಹಾಕಲಾಗುತ್ತಿದೆ.

ಟಿಕೆಟ್ ದರ ಹೆಚ್ಚಳದ ವಿವರ

ಮಾರ್ಗ  –      ಮಾಮೂಲಿ ಟಿಕೆಟ್ ದರ – ಶುಕ್ರವಾರದ ಟಿಕೆಟ್‌ ದರ

ಶಿವಮೊಗ್ಗ       450-₹550                        1000-1500

ಹುಬ್ಬಳ್ಳಿ           700-900                          1500 2000

ಮಂಗಳೂರು   850-900                          1300-2100

ಉಡುಪಿ           750-950                            1300-2000

ಬೆಳಗಾವಿ        800-1000                          1800-2000

ದಾವಣಗೆರೆ    500-700                             1000-1700

Shwetha M