ಕೆಲಸಕ್ಕೆ ಹೊರಟ ಮಹಿಳೆಯನ್ನ ಹಿಂಬಾಲಿಸಿತ್ತು ಕ್ರೂರ ವಿಧಿ – ದಾರಿಯಲ್ಲಿ ಎಂಥಾ ಅನಾಹುತ..?

ಕೆಲಸಕ್ಕೆ ಹೊರಟ ಮಹಿಳೆಯನ್ನ ಹಿಂಬಾಲಿಸಿತ್ತು ಕ್ರೂರ ವಿಧಿ – ದಾರಿಯಲ್ಲಿ ಎಂಥಾ ಅನಾಹುತ..?

ಕೆಲವೇ ನಿಮಿಷಗಳು ಕಳೆದಿದ್ರೆ ಆ ಮಹಿಳೆ ಆಫೀಸ್​ಗೆ ಹೋಗುತ್ತಿದ್ರು. ಆದ್ರೆ ಫೋನ್ ಕಾಲ್​ವೊಂದು ಆಕೆಯ ಪ್ರಾಣ ತೆಗೆದಿದೆ. ದಾರಿಯಲ್ಲೇ ಅನಾಹುತ ನಡೆದಿದೆ.

ಖಾಸಗಿ ಬಸ್ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಶವಂತರಪುರದ ಗೋವರ್ಧನ ಚಿತ್ರಮಂದಿರದ ಎದುರು ನಡೆದಿದೆ.  ಮೃತ ಮಹಿಳೆಯನ್ನ 32 ವರ್ಷದ ವಿನುತಾ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ವಿನುತಾ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.   ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಚಾಲಕ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ರಭಸಕ್ಕೆ ವಿನುತಾ ರಸ್ತೆಗೆ ಬಿದ್ದಿದ್ದರು. ಈ ವೇಳೆ ವಿನುತಾ ತಲೆ ಮೇಲೆಯೇ ಖಾಸಗಿ ಬಸ್ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿನುತಾ ತೀವ್ರ ರಕ್ತಸ್ರಾವವಾಗಿ ವಿನುತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ‘ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ’ – ಸ್ವಯಂ ಘೋಷಿಸಿಕೊಂಡ ಭವಾನಿ ರೇವಣ್ಣ..!

ವಿನುತಾರವರು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಫೋನ್ ಕಾಲ್ ಬಂದಿದೆ. ಹೀಗಾಗಿ ಸ್ಕೂಟಿಯನ್ನ ಸೈಡ್​ಗೆ ಹಾಕಿ ವಿನುತಾ ಮೊಬೈಲ್​ನಲ್ಲಿ ಮಾತಮಾಡುತ್ತಿದ್ರು. ಈ ವೇಳೆ ಹಿಂದೆಯೇ ಬಸ್ ನಿಲ್ದಾಣದಲ್ಲಿ ಬಸ್​ಗೆ ಜನರನ್ನ ಹತ್ತಿಸಿಕೊಳ್ಳುತ್ತಿದ್ದ ಖಾಸಗಿ ಬಸ್ ಚಾಲಕ ಏಕಾಏಕಿ ಚಾಲನೆ ಮಾಡಿದ್ದಾನೆ. ಪರಿಣಾಮ ಸ್ಕೂಟಿಯಲ್ಲಿ ನಿಂತಿದ್ದ ವಿನುತಾಗೆ ಬಸ್ ಡಿಕ್ಕಿಯಾಗಿದ್ದು ಅವಘಡ ಸಂಭವಿಸಿದೆ. ಮೇಲ್ನೋಟಕ್ಕೆ ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನುತಾರನ್ನ ಕಂಡು ಗೋಳಾಡುತ್ತಿದ್ರು. ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳಿಸಿಕೊಡಲಾಯ್ತು. ಅಪಘಾತದಿಂದಾಗಿ ಗೋವರ್ಧನ ಚಿತ್ರಮಂದಿರದ ಮುಂಭಾಗ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

 

suddiyaana