‘ಪ್ರಧಾನಿ ಮೋದಿ, ಹಾಗೂ ಭಾರತದ ಜನತೆಗೆ ಕ್ಷಮೆಯಾಚಿಸಿ’- ಮಾಲ್ಡೀವ್ಸ್ ಅಧ್ಯಕ್ಷನಿಗೆ ವಿರೋಧ ಪಕ್ಷದ ನಾಯಕನಿಂದ ಒತ್ತಾಯ
ಇಂಡಿಯಾ ಬಾಯ್ಕಾಟ್ ಕ್ಯಾಂಪೇನ್ ಮಾಡಿ, ಭಾರತದ ವಿರುದ್ಧ ನಿಂತಿರೋ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅದ್ಯಾವಾಗ ಕುರ್ಚಿಯಿಂದ ಕೆಳಕ್ಕೆ ಬೀಳ್ತಾರೋ ಗೊತ್ತಿಲ್ಲ. ಮಾಲ್ಡೀವ್ಸ್ ಅಧ್ಯಕ್ಷನ ಪಟ್ಟ ಈಗಾಗಲೇ ಅಲುಗಾಡ್ತಾ ಇದೆ. ಭಾರತವನ್ನ ಎದುರು ಹಾಕ್ಕೊಂಡಿದ್ದಕ್ಕೆ ಅಲ್ಲಿನ ವಿಪಕ್ಷಗಳೆಲ್ಲಾ ಮುಯಿಜು ವಿರುದ್ಧ ರೊಚ್ಚಿಗೆದ್ದಿವೆ. ಮೊಹಮ್ಮದ್ ಮುಯಿಜು ಅವರು ಪ್ರಧಾನಿ ಮೋದಿ ಅವರ ಬಳಿ ಕ್ಷಮೆ ಕೇಳಬೇಕು ಅಂತಾ ವಿಕ್ಷನಾಯಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಧರ್ಮ ಧ್ವಜ ಸಂಘರ್ಷದ ಕಿಚ್ಚು! – ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ!
ಹೌದು, ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಸಂಪೂರ್ಣ ಹಳ್ಳಹಿಡಿದಿದೆ. ಮಾಲ್ಡೀವ್ಸ್ನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಭಾರತ ದೇಶವನ್ನು ಹೀಯಾಳಿಸಿದ್ದರು. ಲಕ್ಷ ದ್ವೀಪವನ್ನು ಕೊಳಚೆಗೆ ಹೋಲಿಸಿದ್ದರು. ಆದರೀಗ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಮೊಹಮ್ಮದ್ ಮುಯಿಜ್ಜುಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆ ಬಳಿ ಕ್ಷಮೆ ಕೇಳಬೇಕು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಖಾಸಿಮ್ ಇಬ್ರಾಹಿಂ, ಚೀನಾ ಪ್ರವಾಸದ ಬಳಿಕ ಮೊಹಮ್ಮದ್ ಮುಯಿಜ್ಜು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ಅದರಿಂದ ದೇಶಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಬಾರದು ಎಂದು ಮೊಹಮ್ಮದ್ ಮುಯಿಜ್ಜು ಹೇಳುತ್ತೇನೆ. ಯಾವುದೇ ದೇಶಕ್ಕೆ ಸಂಭಂದಿಸಿದಂತೆ ಅಥವಾ ನೆರೆ ಹೊರೆಯ ದೇಶಕ್ಕೆ ಸಂಬಂಧಿಸಿದಂತೆ ನಾವು ಸಂಬಂಧದ ಮೇಲೆ ಪರಿಣಾಮ ಬೀರುವಂತೆ ಮಾತನಾಡಬಾರದು. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಲು ಮುಯಿಜ್ಜು ಹೇಳುತ್ತೇನೆ ಎಂದು ಹೇಳಿದ್ದಾರೆ.